1ab5e5a0eb7d41bf96a35b3925266c11

ಪಾವಗಡ:ಪುರಸಭೆಯ ಉಪಾಧ್ಯಕ್ಷರಾಗಿ ಜಾನ್ಹವಿ ವಿಶ್ವನಾಥ್ ಅವಿರೋಧವಾಗಿ ಆಯ್ಕೆ..

DISTRICT NEWS ತುಮಕೂರು

ಪುರಸಭೆಯ ಉಪಾಧ್ಯಕ್ಷರಾಗಿ ಜಾನ್ಹವಿ ವಿಶ್ವನಾಥ್ ಅವಿರೋಧವಾಗಿ ಆಯ್ಕೆ

ಪಾವಗಡ. ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಜಾಹ್ನವಿ ವಿಶ್ವನಾಥ್ ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಈ ಹಿಂದಿನ ಉಪಾಧ್ಯಕ್ಷೆ ಸುಧಾಲಕ್ಷ್ಮಿ ಪ್ರಮೋದ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಡಿಸಲಾಗಿತ್ತು.20 ನೇ ವಾರ್ಡ್ ಸದಸ್ಯೆಯಾದ ಜಾಹ್ನವಿ ವಿಶ್ವಾನಾಥ್ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದರು.  ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಕೆ.ಆರ್. ನಾಗರಾಜು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಿಸಿದರು.ಪುರಸಭೆ ವಾರ್ಡ್ ಗಳಲ್ಲಿನ ಸಮಸ್ಯೆ ಬಗೆಹರಿಸಲು ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಅನುದಾನವನ್ನು ಸದ್ಭಳಕೆ ಮಾಡಿ, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ಮೂಲ ಸೌಕರ್ಯ ಕಲ್ಪಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಉಪಾಧ್ಯಕ್ಷೆ ಜಾಹ್ನವಿ ವಿಶ್ವನಾಥ್ ತಿಳಿಸಿದರು.ಶಾಸಕ ವೆಂಕಟರವಣಪ್ಪ, ಪುರಸಭೆ ಮುಖ್ಯಾಧಿಕಾರಿ ಅರ್ಚನಾ,  ಅಧ್ಯಕ್ಷೆ ಗಂಗಮ್ಮ, ಸದಸ್ಯರು ಅಭಿನಂದನೆ ಸಲ್ಲಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಪುರಸಭೆ ಸದಸ್ಯರಾದ ರಾಜೇಶ್,  ಸುದೇಶ್ ಬಾಬು, ರವಿ, ಎಂ.ಎ.ಜಿ.ಇಮ್ರಾನ್,  ಸುಬ್ರಹ್ಮಣಿ, ನಾಗಬೂಷಣರೆಡ್ಡಿ, ಗೀತಾ ಹನುಮಂತರಾಯ, ರಾಮಾಂಜಿ, ವೆಂಕಟರವಣಪ್ಪ, ವೇಲು, ವಿಜಯಕುಮಾರ್, ಸುಧಾಲಕ್ಷ್ಮಿ, ಅನ್ನಪೂರ್ಣಮ್ಮ, ಸುಜಾತ ಉಪಸ್ಥಿತರಿದ್ದರು.