IMG 20220130 WA0021

ಪಾವಗಡ:ಮೃತ ಮಕ್ಕಳ ಪೋಷಕರಿಗೆ ಶಾಸಕರ ಸಾಂತ್ವಾನ…

DISTRICT NEWS ತುಮಕೂರು

ಮೃತ ಮಕ್ಕಳ ಪೋಷಕರಿಗೆ ಶಾಸಕರ ಸಾಂತ್ವಾನ…

ಪಾವಗಡ..ನಿನ್ನೆ ನೀಡಗಲ್ ನ ದೇವರಾಯನ ರೊಪ್ಪ ಗ್ರಾಮದ ಒಂದೇ ಕುಟುಂಬದ ಮೂರು ಮಕ್ಕಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.ಈ ಘಟನೆ ತಿಳಿದ ತಕ್ಷಣ ಶಾಸಕ ವೆಂಕಟರಮಣಪ್ಪ ಹಾಗೂ
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ವಿ ವೆಂಕಟೇಶ್ ರವರು ಇಂದು ದೇವರಾಯನ ರೊಪ್ಪ ಗ್ರಾಮಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮುಂದಿನ ಕಾರ್ಯಗಳಿಗಾಗಿ ಧನಸಹಾಯ ಮಾಡಿ ಮಾನವೀಯತೆ ಮೆರೆದರು…
ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ನೀಡುವೇನೆಂದು ಹೇಳಿ ಕುಟುಂಬ ವರ್ಗದವರಿಗೆ ದೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಈ ವೇಳೆ ಮುಖಂಡರಾದ ಶಂಕರ್ ರೆಡ್ಡಿ ರವರು,ವೆಂಕಟಮ್ಮನಹಳ್ಳಿ ನಾನಿ ರವರು ಕರಿಯಣ್ಣ ನವರು,ನಾಗರಾಜು ರವರು ಸಾಂತ್ವನ ಹೇಳಿದರು..

ಮೃತ ಮಕ್ಕಳ ಪೋಷಕರಿಗೆ ಬಿಇಓ ಅಶ್ವಥ್ ನಾರಾಯಣ ಸಾಂತ್ವನ……….

IMG 20220130 WA0012


ನಿನ್ನೆ ನಿಡಗಲ್ ಹೋಬಳಿ ದೇವರಾಯನರೋಪ್ಪ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯಲ್ಲಿ ಕಾಲು ಹಾಕಿಜಾರಿ ಮರಣ ಹೊಂದಿದ ಮಕ್ಕಳ ಮನೆಗೆ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಅಶ್ವತ್ಥನಾರಾಯಣ ಸರ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಐ.ಎ ನಾರಾಯಣಪ್ಪ ,ಶಿಕ್ಷಣಸಂಯೋಜಕರಾದ ಶಿವಮೂರ್ತಿನಾಯ್ಕಹೆಚ್.ಪಿ.ದೇವರಾಯನರೋಪ್ಪ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ನಿಡಗಲ್ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು .ಎಂಜಿ.ಎಮ್.ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಮಂಜುನಾಥ್.ಹಾಗೂ ದೈಹಿಕ ಶಿಕ್ಷಕರು ಮತ್ತು ನಿಡಗಲ್ ಹೋಬಳಿಯ ಶಿಕ್ಷಕರು ಮೃತ ವಿದ್ಯಾರ್ಥಿಗಳ ಮನೆಗೆ ಭೇಟಿನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ವನ್ನು ಹೇಳಿದರು ಹಾಗೂ ಇದೆ ಸಮಯದಲ್ಲಿ ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ಬರುವ ಸವಲತ್ತುಗಳನ್ನು ಇಲಾಖೆಯಿಂದ ಒದಗಿಸುತ್ತೆವೆಂದು ತಿಳಿಸಿದರು.

ವರದಿ:ಶ್ರೀನಿವಾಸುಲು ಎ