IMG 20220316 WA0010

ಪಾವಗಡ:ರಸ್ತೆ ಅಪಘಾತ ವ್ಯಕ್ತಿ ಸಾವು….!

DISTRICT NEWS ತುಮಕೂರು

ರಸ್ತೆ ಅಪಘಾತ ವ್ಯಕ್ತಿ ಸಾವು………..                       ಪಾವಗಡ.. ಇಂದು ಬೆಳಗ್ಗೆ ಸುಮಾರು 11.40 ರಲ್ಲಿ ಬಸ್ ಮತ್ತು ದ್ವಿಚಕ್ರವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಕುಳಿತ ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಬುಡ್ಡಾರೆಡ್ಡಿ  ಹಳ್ಳಿಯ ಬಳಿಯಿರುವ ಟೋಲ್ ಸಮೀಪ ನಡೆದಿದೆ..         

                                   

IMG 20220316 WA0021

ಮೃತ ಬೈಕ್ ಸವಾರ ರಾಮಮೂರ್ತಿ (45) ಕಲ್ಯಾಣದುರ್ಗ ತಾಲೂಕು, ಕಂಬದೂರ ಮಂಡಲದ ಕದ್ರಿ ದೇವರಪಲ್ಲಿ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ. ಹಿಂಬದಿಯ ಸವಾರ ರಾಮಾಂಜನೇಯ ( 44 ) ಓಬಗಾನ ಪಲ್ಲಿ ಗ್ರಾಮದ  ವ್ಯಕ್ತಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಈ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ಕಳುಹಿಸಲಾಗಿದೆ ಎಂದು  ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಬೈಕ್ ಸವಾರರು ಕಂಬ ದೂರಿನಿಂದ ಪಾವಗಡಕ್ಕೆ ಹೋಗುತ್ತಿರುವ ವೇಳೆ  , ಪಾವಗಡದಿಂದ ವೈಎನ್ ಹೊಸಕೋಟೆ ಗೆ ಹೋಗುತ್ತಿರುವ ವೆಂಕಟೇಶ್ವರ ಬಸ್ಸನ್ನು ಬುಡ್ಡ ರೆಡ್ಡಿ ಹಳ್ಳಿಯ ಟೋಲ್ ಬಳಿ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.                               

 ಸ್ಥಳಕ್ಕೆ ವೈ ಎನ್  ಹೊಸಕೋಟೆಯ ಸಬ್ ಇನ್ಸ್ಪೆಕ್ಟರ್  ಭಾರತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ,  ವೈಎನ್ ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ.