IMG 20200705 WA0018

ರಸ್ತೆ ಅಪಘಾತ; ಜೆಡಿ ಎಸ್ ನಾಯಕ ಸಾವು

DISTRICT NEWS ತುಮಕೂರು

ರಸ್ತೆ ಅಪಘಾತ; ಜೆಡಿ ಎಸ್ ನಾಯಕ ಸಾವು.

ಪಾವಗಡ: ವೈ ಎನ್ ಹೊಸಕೋಟೆ ಹೊಬಳಿ ಜೆಡಿ ಎಸ್ ಅಧ್ಯಕ್ಷ ದೇವರಾಜ್ ರಸ್ತೆ ಅಪಘಾತದಲ್ಲಿ‌ ಸಾವನ್ನಪ್ಪಿದ್ದಾರೆ.

ಕೆಲಸ ನಿಮಿತ್ತ ಪಾವಗಡಕ್ಕೆ ತೆರಳಿದ್ದು , ರಾತ್ತಿ ಸುಮಾರು 8 ಗಂಟೆ ಸಮಯದಲ್ಲಿ ಪಾವಗಡದಿಂದ  ವೈ ಎನ್ ಹೊಸಕೋಟೆ ದ್ವಿಚಕ್ರ ವಾಹನ ದಲ್ಲಿ ಬರುತ್ತಿರುವ ಸಂದರ್ಭದಲ್ಲಿ  ಕೆಂಚಮ್ಮನ ಹಳ್ಳಿ ಗೇಟ್ ಬಳಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳ ದಲ್ಲೆ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

49 ವರ್ಷದ ದೇವರಾಜ್ ಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿ ಎಸ್ ನಿಂದ ಸ್ಪರ್ಧಿಸಿ ಸೋತಿದ್ದರು.

ಪಾವಗಡ ಶಾಸಕ ವೆಂಕಟರವಣಪ್ಪ ,ಮಾಜಿ ಶಾಸಕ ತಿಮ್ಮರಾಯಪ್ಪ ಮೃತರ ಆತ್ಮಕ್ಕೆ ಶಾಂತಿ ಕೊರಿದ್ದಾರೆ.