IMG 20220731 WA0059

ಆನೇಕಲ್ : ಬಿಲ್ಲಾಪುರ ಗ್ರಾಮಪಂಚಾಯತಿ ಗ್ರಾಮ ಸಭೆ….!

DISTRICT NEWS ಬೆಂಗಳೂರು

ಆನೇಕಲ್: ಬಿಲ್ಲಾಪುರ ಗ್ರಾಮ ಪಂಚಾಯತಿ ಯ 2022- 23 ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆ ಬೂರುಗುಂಟೆ ಗ್ರಾಮದಲ್ಲಿ ನಡೆಯಿತು. ಗ್ರಾಮಸಭೆಯು ಕೃಷಿ ಇಲಾಖಾ ಅಧಿಕಾರಿಗಳಾದ ಧನಂಜಯ ಮಾರ್ಗದರ್ಶಿ ಅಧಿಕಾರಿಯಾಗಿ, ಪಂಚಾಯತಿ ಅಧ್ಯಕ್ಷೆ ಜೈತೂನ್ ಭಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ ಕಂದಾಯ, ತೋಟಗಾರಿಕೆ, ಕೃಷಿ, ಬೆಸ್ಕಾಂ, ಆರೋಗ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಗ್ರಾಮ ಸಭೆಗೆ ವಿವರಿಸಿದರು.
ಪಂಚಾಯತ್‌ ಬಿಲ್ ಕಲೆಕ್ಟರ್ ರವಿಕುಮಾರ್ ರವರು 2021-22 ನೇ ಸಾಲಿನ ವರದಿ ಮಂಡಿಸಲಾಗಿ ಅಂಗೀಕಾರಗೊಂಡಿತು. ವಾರ್ಡ್ ಸಭೆಯಲ್ಲಿ ಬಂದಿದ್ದ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿ, ಮುಂದೆ ಆದ್ಯತಾನುಸಾರ ಕ್ರಿಯಾಯೋಜನೆಗಳಲ್ಲಿ ಸೇರಿಸಲು ನಿರ್ಣಯಿಸಲಾಯಿತು.


ಗ್ರಾಮಸಭೆಯು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದು. ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ಸೂಕ್ತ ನಿರ್ಣಯಗಳಾಗಬೇಕು. ಆಡಳಿತ ಮಂಡಳಿಗೆ ಆಡಳಿತ ನಡೆಸುವಲ್ಲಿ ಸೂಕ್ತ ಸಲಹೆಗಳನ್ನು ನೀಡಿ. ವಿವಿಧ ವಿಚಾರಗಳ ಬಗ್ಗೆ ಮುಕ್ತಾಯವಾಯಿತು. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಕ್ರಿಯರಾಗಿ ಗ್ರಾಮಸಭೆಯನ್ನು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ತಯಾರಾಗಬೇಕಿದೆ ಎಂದು ಜೈತೂನ್ ಭಿ ಅವರು ಸಾರ್ವಜನಿಕರ ಕುಂದು ಕೊರತೆ ಬಗೆಹರಿಸುವ ಕಾರ್ಯಕ್ರಮ ಇದಾಗಿದ್ದು. ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸದಸ್ಯರ ಕುಂದುಕೊರತೆಗಳನ್ನು ಪರಿಹರಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸೇರಿದ ಅಧಿಕಾರಿಗಳು, ಸದಸ್ಯರು,ಉಪಾಧ್ಯಕ್ಷೆ ವರಲಕ್ಷ್ಮಿ ಸಿ, ಕಾರ್ಯದರ್ಶಿ ಅಮರಾವತಿ.ವಿ, ಪಿಡಿಓ ವಿಶ್ವನಾಥ್ ಎಚ್.ಎಸ್ ಹಾಗು ಪಂಚಾಯತಿ ಸಿಬ್ಬಂದಿ ಇದ್ದರು.:

ವರದಿ ಹರೀಶ್ ಗುರುಮೂರ್ತಿ ಆನೇಕಲ್