IMG 20220809 WA0003

ಮಧುಗಿರಿ:ವೀರಾಂಜನೇಯ ಸ್ವಾಮಿ ದೇವಸ್ಥಾನ ಕ್ಕೆ ಕಳಸ ಪ್ರತಿಷ್ಠಾಪನೆ….!

DISTRICT NEWS ತುಮಕೂರು

*ಲಕ್ಷ್ಮಿಪುರ ದಂಡಿನ ದಿಬ್ಬ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ …..,

ಮಧುಗಿರಿ ತಾಲೂಕು ಲಕ್ಷ್ಮೀಪುರ ಮತ್ತು ದಂಡಿನ ದಿಬ್ಬ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಕಳಸ ಪ್ರತಿಷ್ಠಾಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಳಸ ಪ್ರತಿಷ್ಠಾಪನ ಕಾರ್ಯಕ್ರಮ ಸೋಮವಾರ ಬೆಳಗ್ಗೆ 9:00 ರಿಂದ 10:40 ಒಳಗೆ ಸಲ್ಲಿಸುವ ಶುಭಕನ್ಯ ಲಗ್ನದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಕಾರ್ಯಕ್ರಮವನ್ನು ನೆರವೇರಿಸಲು ದೈವ ಪ್ರೇರಣೆಯ ಪ್ರಾಯಶ್ಚಿತ್ತ ಮಹಾಪೂರ್ಣಾಹುತಿ ಪುಷ್ಪಾರ್ಚನೆ ಮಹಾಮಂಗಳಾರತಿ ಆದ ನಂತರ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು

ದಂಡಿನ ದಿಬ್ಬ ಲಕ್ಷ್ಮಿಪುರ ಗ್ರಾಮದಲ್ಲಿ ಇಂದು ನಡೆಯುತ್ತಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದ ಕಳಸ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು. ಶ್ರೀ ಕ್ಷೇತ್ರ ಬಾಳೆಹೊನ್ನೂರು ಶಾಖ ಮಠ ಸಿದ್ದರಬೆಟ್ಟ. ಹಾಗೂ ಶ್ರೀ ಶ್ರೀ ಹನುಮಂತ ಸ್ವಾಮೀಜಿಗಳು ಪೀಠಾಧ್ಯಕ್ಷರು ಮಹಾ ಸಂಸ್ಥಾನ ಮಠ ಶ್ರೀ ಕ್ಷೇತ್ರ ಎಲೆ ರಾಮಪುರ ಸ್ವಾಮೀಜಿಗಳುಭಾಗವಹಿಸಿ ಭಕ್ತಾದಿಗಳು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತುಪುರಾಣ ನಿರ್ಮಾಣ ಮಾಡಿದರೆ ಗ್ರಾಮಗಳಿಗೆ ಒಳ್ಳೆಯದಾಗುತ್ತದೆ ಮತ್ತು ಭಕ್ತಾದಿಗಳು ಕೂಡ ಹೆಚ್ಚಾಗುತ್ತಾರೆ ಈ ಕಾರ್ಯ ಕ್ರಮ ಮಾಡುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ.ಸ್ವಾಮಿಯ ಕೃಪೆಗೆ ಪಾತ್ರರಾಗ ಬೇಕುಎಂದು ಆಶೀರ್ವಾದ ಮಾಡಿದರು.

ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂವಿ ವೀರಭದ್ರಯ್ಯನವರು ಹಾಗೂ ಕೆ.ಪಿ.ಸಿ.ಸಿ.ಯ ಉಪಾಧ್ಯಕ್ಷರಾದ ಕೆ ಎನ್ ರಾಜಣ್ಣನವರು. ಮಧುಗೌಡರವರು ಯಶೋದ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಪುಟ್ಟಪ್ಪ ಡಿ. ಕಾರ್ಯದರ್ಶಿಯಾದ ಹನುಮಂತರಾಜು ಎಲ್ ಬಿ. ಖಜಾಂಚಿ ಎಲ್ ಸಿ ಲಿಂಗಪ್ಪ. ಉಪಾಧ್ಯಕ್ಷರಾದ ಜಯರಾಮಯ್ಯ. ಸದಸ್ಯರುಗಳಾದ ರಂಗಸ್ವಾಮಿ. ಭೀಮೇಗೌಡ ಮಂಜುನಾಥ್ ನಾಗಣ್ಣ ಹರೀಶ್ ಹಾಗೂ ಊರಿನ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ವೀರಾಂಜನೇಯ ಸ್ವಾಮಿ ಶಿಖರದ ಕಳಸ ಪ್ರತಿಷ್ಠಾಪನ ಕಾರ್ಯಕ್ರಮದ ಕೃಪೆಗೆ ಪಾತ್ರರಾದರು.

ವರದಿ. ಲಕ್ಷ್ಮಿಪತಿ ದೊಡ್ಡ ಎಲುಕೂರು.