1660241186612 IMG 20220811 WA0040

ಪಾವಗಡ:ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ…!

DISTRICT NEWS ತುಮಕೂರು

ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ…

. ಪಾವಗಡ… 75ನೇ ಸ್ವಾತಂತ್ರ್ಯ ದಿನೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನಲ್ಲಿ 75 ಕಿ.ಮೀ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ದಲ್ಲಿ ಹಮ್ಮಿಕೊಳ್ಳಲಾಗಿದ್ದು,.                              ಕಾರ್ಯಕ್ರಮವು ತಾಲೂಕಿನ ಆರ್ ಅಚ್ಚಮನಹಳ್ಳಿ ಗ್ರಾಮದಿಂದ ಪ್ರಾರಂಭಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿ, ನಾಗಲಮಡಿಕೆಯ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ರಿಪೇರಿಗಾಗಿ 10 ಕೋಟಿ ಟೆಂಡರ್ ಕರೆಯಲಾಗಿದೆ ಎಂದು , ವೀರಮ್ಮನಹಳ್ಳಿ, ಪಳವಳ್ಳಿ, ಸೂಲನಾಯಕನಹಳ್ಳಿ, ಅರಳಿಕುಂಟೆ ವೆಂಕಟಾಪುರ,ದ ಮುಖ್ಯ ರಸ್ತೆಗಳ ಡಾಂಬರೀಕರಣಕ್ಕಾಗಿ ಟೆಂಡರ್ ಕರೆಯಲಾಗಿದ್ದು, ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು, ತಮ್ಮ ಮುಖ್ಯ ಉದ್ದೇಶ ಪಾವಗಡ ತಾಲೂಕನ್ನು ಸರ್ವತೋಮುಖ ಅಭಿವೃದ್ಧಿಗೊಳಿಸುವುದು, ತಾನು ಕೇವಲ ಹೆಸರಿಗೆ ಮಾತ್ರ ಶಾಸಕ ನಿಜವಾದ ಶಾಸಕರು ನೀವೇ ಎಂದು ಜನರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್‌ ವಿ ವೆಂಕಟೇಶ ಮಾತನಾಡಿ, ಇಂದು ಮೊದಲ ದಿನದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ತಿರುಮಣಿ, ವಲ್ಲೂರು, ರಾಯಚರ್ಲು, ನಾಗಲಮಡಿಕೆ, ಮುಂತಾದ ಗ್ರಾಮ ಪಂಚಾಯಿತಿಗಳಿಂದ ಹೆಚ್ಚಿನ ಜನ ಸೇರಿ ಪಾದಯಾತ್ರೆಗೆ ಶಕ್ತಿ ತುಂಬಿದ್ದಾರೆ, ಕಾಯ ವಾಚಾ ಮನಸಾ, ನಾನು ನಮ್ಮ ತಂದೆ ಜನರ ಸೇವೆ ಮಾಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸೋಮ್ಲಾ ನಾಯಕ್, ಮೈಲಪ್ಪ, ಶೇಷಗಿರಿ, ಪುರಸಭಾ ಸದಸ್ಯರಾದ ರವಿ, ರಾಜೇಶ್, ಸುದೇಶ್ ಬಾಬು ಹಾಗೂ ಕಾರ್ಯಕರ್ತರಾದ ಕಡಮಲಕುಂಟೆ ನಾಗಭೂಷಣ, ಗೋವಿಂದ ನಾಯ್ಕ ಹಾಗೂ ತಾಲೂಕಿನ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.  

ವರದಿ: ಶ್ರೀನಿವಾಸಲು ಎ