IMG 20240907 WA0002

ಪಾವಗಡ : ವಾಹನ ಸಮೇತ ವ್ಯಕ್ತಿಯ ಸಜೀವ ದಹನ..!.

DISTRICT NEWS ತುಮಕೂರು

 ಲಗೇಜ್ ವಾಹನ ಸಮೇತ ವ್ಯಕ್ತಿ ಯ ಸಜೀವ ದಹನ.

ಪಾವಗಡ :  ಲಗೇಜ್ ವಾಹನ ಜೊತೆ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ತಾಲ್ಲೂಕಿನ ಪಳವಳ್ಳಿ ರಸ್ತೆಯ ವೀರಮನಳ್ಳಿ ಗೇಟ್ ನ ರೈಲ್ವೆ ಮೇಲು ಸೇತುವೆ ಸಮೀಪ
ಗುರುವಾರ ರಾತ್ರಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ತಾಲ್ಲೂಕಿನ ವೈ ಎನ್. ಹೊಸಕೋಟೆ ಗ್ರಾಮವಾಸಿಯಾದ ರವಿಕುಮಾರ್ (38) ಎಂದು ತಿಳಿದು ಬಂದಿದೆ .ವಿಷಯ ತಿಳಿದ ನಂತರ ಮೃತನ ಪತ್ನಿ ಠಾಣೆಗೆ ಬಂದು ಮೃತ ರವಿಕುಮಾರ್ ಲೋನ್ ತೆಗೆದುಕೊಂಡು ಟಾಟಾ ಲಗೇಜ್ ವಾಹನ ಖರೀದಿಸಿ ಜೀವನ ನಡೆಸುತ್ತಿದ್ದ ರೆಂದು ತಿಳಿಸಿದ್ದಾರೆ.IMG 20240907 WA0000

ಗುರುವಾರ ರಾತ್ರಿ 9:30 ಕ್ಜೆ ತುಮಕೂರಿಗೆ ಬಾಡಿಗೆ ಇದೆ ಎಂದು ಮನೆ ಬಿಟ್ಟವರು ಪುನಃ ಮನೆಗೆ ಬರಲಿಲ್ಲವೆಂದು, ಸಂಬಂಧಿಕರು ಘಟನೆ ಮಾಹಿತಿಯನ್ನು ತಿಳಿಸಿದ್ದಾರೆ.

ಪಳವಳ್ಳಿ ರಸ್ತೆಯ ವೀರಮನಳ್ಳಿ ಗೇಟ್ ರೈಲ್ವೆ ಬ್ರಿಡ್ಜ್ ಪಕ್ಕ ಖರಾಬು ಜಾಗದಲ್ಲಿ ಸುಟ್ಟ ರೀತಿಯಲ್ಲಿ ಮೃತ ದೇಹವಿದ್ದು ಸಮೀಪದಲ್ಲಿ  ಲಗೇಜ್ ವಾಹನ ಸುಟ್ಟು ಹೋಗಿರುವುದನ್ನು ಗಮನಿಸಿ ದ ಸಾರ್ವಜನಿಕ ರು ಪೋಲೀಸರಿಗೆ ಮಾಹಿತಿ ನೀಡಿಧದಾರ.  ಯಾರೋ ದುಷ್ಕರ್ಮಿಗಳು ಗುರುವಾರ ರಾತ್ರಿ ಕೊಲೆ ಮಾಡಿ ಸುಟ್ಟು ಹಾಕಿರಬಹುದು ಎಂಬ ಅನುಮಾನವಿದ್ದು,ಸಂಬಂಧಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ವಿಷಯ ತಿಳಿದ ನಂತರ ಪಟ್ಟಣ ಠಾಣೆ ವೃತ್ತ ನಿರೀಕ್ಷಕರಾದ ಸುರೇಶ್, ರೈಟರ್ ರಾಮಕೃಷ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ವರದಿ. ಶ್ರೀನಿವಾಸಲು. A

Leave a Reply

Your email address will not be published. Required fields are marked *