IMG 20220825 WA0000

ಆನೇಕಲ್: ಆರ್‌ಪಿಐ ರಾಜ್ಯ ಮಟ್ಟದ ಸಮ್ಮೇಳನ…!)

DISTRICT NEWS ಬೆಂಗಳೂರು

ಆನೇಕಲ್: ‘ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾದ (ಆರ್‌ಪಿಐ) ರಾಜ್ಯ ಮಟ್ಟದ ಸಮ್ಮೇಳನವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸ ಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣ ದಲ್ಲಿ ಆಗಸ್ಟ್.26ರಂದು ನಡೆಯಲಿದೆ’ ಎಂದು ಭಾರತೀಯ ಭೀಮ ಸೇನಾ ರಾಜ್ಯಾಧ್ಯಕ್ಷ ಮತ್ತು ಆರ್‌.ಪಿ.ಐ ರಾಜ್ಯ ಸಮಿತಿ ಸದಸ್ಯ ಕೆ.ಎನ್. ಬ್ಯಾಟರಾಜು ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಒಂದು ಲಕ್ಷ ಕಾರ್ಯಕರ್ತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನ ಆನೇಕಲ್,ಬೆಂಗಳೂರು ದಕ್ಷಿಣ ತಾ|, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ,ವಿಭಾಗದಿಂದ ಎಂಟರಿಂದ ಹತ್ತು ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮ್‌ದಾಸ್‌ ಅಠಾವಳೆ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು
ಆರ್ ಪಿ ಐ ಮುಖಂಡ ಎ.ಗೋಪಾಲ್ ಮಾತನಾಡಿ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ದಿಸೆಯಲ್ಲಿ ಬೃಹತ್ ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಮುಖಂಡರು, ಜಿಲ್ಲಾ ಘಟಕಗಳ ಅಧ್ಯಕ್ಷರು ಭಾಗವಹಿಸುವರು ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸುವ ದಿಸೆಯಲ್ಲಿ ಸದಸ್ಯತ್ವ ಅಭಿಯಾನಾ ಹಮ್ಮಿಕೊಳ್ಳಲಾಗಿದೆ. ಸುಮಾರು 10 ಲಕ್ಷ ಜನರ ಸದಸ್ಯತ್ವ ಹೊಂದುವ ಗುರಿ ಹೊಂದಲಾಗಿದೆ. ಮುಂದಿನ ಬಿ ಬಿ ಎಂ ಪಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ’ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೂ ಸಂಬಂಧಿಸಿದಂತೆ ಪಕ್ಷವು ಸಮ್ಮೇಳನದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ‌.ಎನ್. ಬ್ಯಾಟರಾಜು, ಎ. ಗೋಪಾಲ್, ಹುಲ್ಲಹಳ್ಳಿ ಮರಿಯಪ್ಪ , ಮುನಿಸ್ವಾಮಿ, ಶಶಿಕುಮಾರ್, ಮಂಜುನಾಥ್, ಕಾಂತರಾಜ್, ಜೆ.ಪಿಟರ್, ಕೇಶವನ್, ಎ.ಜಿ ರಾಜು, ನಂದೀಶ್, ಎಸ್ ಮನೋಜ್ ವಿ ಮುಂತಾದವರು ಉಪಸ್ಥಿತರಿದ್ದರು. :

ವರದಿ ಹರೀಶ್ ಗುರುಮುರ್ತಿ ಆನೇಕಲ್