1661793931409 FB IMG 1661791092343

ಪಾವಗಡ:ಗಣಪತಿ ಪೆಂಡಾಲ್ ನಲ್ಲಿ ಡಿ ಜೆ. ನಿಷೇಧ…!

DISTRICT NEWS ತುಮಕೂರು

ಗಣಪತಿ ಪೆಂಡಾಲ್ ನಲ್ಲಿ ಡಿ ಜೆ. ನಿಷೇಧ-  ಸಿ ಐ ಅಜಯ್ ಸಾರಥಿ ಸೂಚನೆ

ಪಾವಗಡ…. ಮಂಗಳವಾರ ಹಾಗೂ ಬುಧವಾರ  ಗೌರಿ -ಗಣೇಶ  ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೌರಿ -ಗಣೇಶ ಪ್ರತಿಷ್ಠಾಪನೆ ಮಾಡುವವರು  ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕೆಂದು ಪಾವಗಡ ಆರಕ್ಷಕ ವೃತ್ತ ನೀರಿಕ್ಷಕರಾದ ಅಜಯ್ ಸಾರಥಿ ತಿಳಿಸಿದರು.

 ಪಾವಗಡ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂಘ ಸಂಸ್ಥೆಗಳ ಮುಖ್ಯಸ್ಥರು,ಸಂಘಟಕರ ಹಾಗೂ ಸಾರ್ವಜನಿಕ ಶಾಂತಿ ಸಭೆಯನ್ನು ಕರೆದು ಕಾನೂನು ಬದ್ಧವಾಗಿ ಪೊಲೀಸ್ ಇಲಾಖೆಯ ಮಾರ್ಗಸೂಚಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಗಳ ಪ್ರತಿಷ್ಠಾಪನೆ ಮಾಡುವವರು ಅನುಸರಿಸಬೇಕು ಎಂದು ತಿಳಿಸಿದರು  

ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳ ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿ ಸದರಿ ವ್ಯಾಪ್ತಿಯ ಪುರಸಭೆ, ಗ್ರಾಮ ಪಂಚಾಯಿತಿ, ಅಗ್ನಿಶಾಮಕ,. ಕೆ ಇ ಬಿ,ಪೊಲೀಸ್ ಇಲಾಖೆ ಅನುಮತಿ ಪಡೆದು,ಪ್ರತಿಷ್ಠಾಪಿಸುವಂತೆ ತಿಳಿಸಿದರು.

ಯಾವುದೇ ಕಾರಣಕ್ಕೂ ಡಿ ಜೆ. ಅಳವಡಿಸುವಂತಿಲ್ಲ. ಕಾನೂನು ಉಲ್ಲಂಘಸಿ ಡಿ ಜೆ ಅಳವಡಿಸಿದ್ದಲ್ಲಿ ಸಂಘಟಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲುವುದಾಗಿ ಇದೆ ವೇಳೆ ಖಡಕ್ ಎಚ್ಚರಿಕೆ ನೀಡಿದರು.           

ಗಣಪತಿ ಪೆಂಡಾಲ್ ನಲ್ಲಿ ಆಯೋಜಕರು ಸಿ. ಸಿ ಕ್ಯಾಮೆರಾ ಅಳವಡಿಸಿ, ಯಾವುದೇ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಿ,  ಗಣಪತಿ  ವಿಸರ್ಜನೆ ಮಾಡುವವರೆಗೂ ರಾತ್ರಿ ವೇಳೆಯಲ್ಲಿ ಸಂಘಟಕರೇ ಭದ್ರತೆಯ ಜವಾಬ್ದಾರಿ ಯಾಗಿರುತ್ತದೆ ಎಂದು ತಿಳಿಸುತ್ತಾ ವಿಸರ್ಜನೆ ಮಾಡುವಾಗ ಯಾವುದೇ ಅಹಿತರ ಘಟನೆಗೆ ಅವಕಾಶ ಮಾಡದಂತೆ ಶಾಂತಿ ಸುವ್ಯವಸ್ಥೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ.”ನಮ್ಮ ಪಾವಗಡ” ನಮ್ಮ ಹೆಮ್ಮೆ” ಎಂಬ ವಾಕ್ಯವನ್ನು ಪಾಲಿಸುವಂತೆ ಕರೆ ನೀಡಿದರು

ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಂಘಟಕರು, ಪತ್ರಿಕಾ ಮಾಧ್ಯಮ ಮಿತ್ರರು, ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು

ವರದಿ: ಶ್ರೀನಿವಾಸಲು ಎ