IMG 20220919 WA0015

ಕೊರಟಗೆರೆ:ಈಜು ಬಾರದೆ ಕೆರೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ…!

DISTRICT NEWS ತುಮಕೂರು

*ಈಜು ಬಾರದೆ ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಹಾರಾಷ್ಟ್ರ ಮೂಲದ ಬಿ ಫಾರ್ಮಸಿ ವಿದ್ಯಾರ್ಥಿ ಗೌರವ್ ಸಿಂಗ್ ಮೃತ ದೇಹ ಪತ್ತೆ.*

ಕೊರಟಗೆರೆ : ಪಟ್ಟಣದ ಹನುಮಂತಪುರದ ಪ್ರಿಯದರ್ಶಿನಿ ಕಾಲೇಜ್‌ನಲ್ಲಿ ಹೊರರಾಜ್ಯಗಳಿಂದ ಅಥವಾ ಹೊರದೇಶಗಳಿಂದ ಬಿ ಫಾರ್ಮ್ ಡಿ ಫಾರ್ಮ್ ವಿದ್ಯಾಭ್ಯಾಸಕ್ಕೆಂದು ಸಹಸ್ರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಬರುತ್ತಾರೆ ..

ಈ ಕಾಲೇಜಿನ ವಿದ್ಯಾರ್ಥಿಗಳು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ ಅದೇ ರೀತಿಯಾಗಿ ಬಿ ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿರುವ ಗೌರವ್ ಸಿಂಗ್ ತನ್ನ ಸ್ನೇಹಿತರಾದ ೧೨ ಜನರ ಜತೆಯಲ್ಲಿ ಕಾಲೇಜು ಹಿಂಭಾಗದಲ್ಲಿರುವ ಹೊಸಕೆರೆ ಎನ್ನುವ ಕೆರೆಯಲ್ಲಿ ಈಜು ಹೊಡೆಯಲು ಹೋಗಿದ್ದ ಸಂದರ್ಭದಲ್ಲಿ ನೀರು ಕುಡಿದು ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರು ತ್ತಾರೆ ..

IMG 20220919 WA0014

ಈಜು ಆಡಲು ಹೋದ ೧೨ ಜನ ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರಿಗಷ್ಟೇ ಈಜು ಬರುತ್ತಿತ್ತು ಎಂದು ಅವರ ಜತೆಯಲ್ಲಿದ್ದ ವಿದ್ಯಾರ್ಥಿಗಳಿಂದ ತಿಳಿದುಬಂದಿದೆ ..

ಈಜು ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ತುಂಬಾ ಆಳಕ್ಕೆ ಹೋಗಿ ಈಜು ಆಡುತ್ತಿರುತ್ತಾರೆ ಅದನ್ನು ಗಮನಿಸಿದ ಉಳಿದ ವಿದ್ಯಾರ್ಥಿಗಳು ಕೂಡ ಮುಂದೆ ಹೋಗಲು ಪ್ರಯತ್ನಿಸಿದರೆ ಅದರಲ್ಲಿ ಗೌರವ್ ಸಿಂಗ್ ಕೂಡ ಒಬ್ಬ ಮುಂದೆ ಹೋಗಿ ಈಜಲು ಪ್ರಯತ್ನಿಸುತ್ತಾನೆ ಈಜು ಬಾರದ ಕಾರಣ ನೀರಲಿ ಮುಳುಗಿ ಸಾವನ್ನಪ್ಪಿದ್ದಾನೆ ದುರ್ಘಟನೆ ನಡೆದಿದ್ದು..

೧೨ ಜನ ವಿದ್ಯಾರ್ಥಿಗಳು ಈಜು ಹಾಡುವಾಗ ಗೌರವ್ ಸಿಂಗ್ ಕಾಣುವುದಿಲ್ಲ ಆಗ ಹಿಂತಿರುಗಿ ನೋಡಿದಾಗ ಕೇವಲ ಕೈ ಮಾತ್ರ ಕಾಣುತ್ತದೆ ಅಷ್ಟರಲ್ಲಿ ಆತ ಮುಳುಗಿ ಹೋಗುತ್ತಾನೆ ಇದು ಗೌರವ್ ಸಿಂಗ್ ಜತೆಯಲ್ಲಿದ್ದ ವಿದ್ಯಾರ್ಥಿಗಳು ತಿಳಿಸಿದ್ದರು …

ಸತತ 24 ಗಂಟೆಗಳಿಂದ ಮೃತ ದೇಹ ಪತ್ತೆ ಹಚ್ಚಲು ತೊಡಗಿದ್ದ ಅಗ್ನಿಶಾಮಕ ದಳ ಹಾಗೂ ಕೊರಟಗೆರೆಯ ಪೋಲೀಸ್ ಅಧಿಕಾರಿಗಳು ಕಾರ್ಯ ಚರಣೆಯಲ್ಲಿ ತೊಡಗಿದ್ದರು. ಕೊನೆಗೆ ಮೃತ ದೇಹವು ತೇಲಿ ಪತ್ತೆಯಾಗಿದೆ.

ಮೃತ ಗೌರವ್ ಸಿಂಗ್ ಪೋಷಕರು ತಿಳಿಸಿದಂತೆ ಮರಣೋತ್ತರ ಪರೀಕ್ಷೆ ಮುಗಿದ ನಂತರ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡುವುದಾಗಿ ತಿಳಿಸಿದರು..

ಮೃತ ದೇಹವನ್ನು ಕೊರಟಗೆರೆಯ ಸಾರ್ವಜನಿಕರ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ವರದಿ – ದೇವರಾಜ್ ಕೆ.ಎನ್.
ಕೊರಟಗೆರೆ