IMG 20220922 WA0053

ಮಧುಗಿರಿ: ದೇವಾಲಯದ ನಿರ್ಮಾಣ ವಿಚಾರ – ಜೋಡಿ ಕೊಲೆ…!

DISTRICT NEWS ತುಮಕೂರು

ಇಬ್ಬರ ಕೊಲೆ ಒಬ್ಬನಿಗೆ ಗಾಯ

ಮಧುಗಿರಿ : ದೇವಾಲಯದ ನಿರ್ಮಾಣ ವಿಚಾರವಾಗಿ ಮಾತನಾಡುತ್ತಿದ್ದ ಗ್ರಾಮಸ್ಥರ ಮೇಲೆ ದೇವಾಲಯದ ನಿವೇಶನದ ಪಕ್ಕದ ವಾಸಿಯೊಬ್ಬ ಮಾರಕಾಸ್ರದಿಂದ ಹಲ್ಲೆ ನಡೆಸಿರುವ ಘಟನೆ ರಾತ್ರಿ ಸುಮಾರು 7:30ರ ಸಮಯದಲ್ಲಿ ನಡೆದಿದೆ.

ತಾಲೂಕಿನ ಮಿಡಗೇಶಿ ಗ್ರಾಮದ ವಾಸಿಗಳಾದ ರಾಮಾಂಜಿನಯ್ಯ (45) ಶಿಲ್ಪ (35) ಮೃತಪಟ್ಟವರಾಗಿದ್ದು ಜಗಳ ಬಿಡಿಸಲು ಹೋದ ಮಲ್ಲಿಕಾರ್ಜುನ್ ಎನ್ನುವವರು ಗಂಭೀರವಾಗಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗ್ರಾಮದಲ್ಲಿ ವಿನಾಯಕನ ದೇವಾಲಯಕ್ಕೆ ಮೀಸಲಿಟ್ಡಿದ್ದ ಜಾಗದ ಬಗ್ಗೆ ಮೃತಶಿಲ್ಪನ ಗಂಡ ತಿಪ್ಪೇಸ್ವಾಮಿ ಹಾಗೂ ಕೊಲೆಯ ಮುಖ್ಯ ಆರೋಪಿ ಶ್ರೀಧರ್ ಗುಪ್ತ (50) ನಡುವೆ ನಿವೇಶನದ ಬಗ್ಗೆ ನ್ಯಾಯಾಲಯದಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು.

ಸಂಜೆ ಶಿಲ್ಪನ ಪತಿ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ ಶ್ರೀಧರ್ ಗುಪ್ತಾ ಏಕಾ ಏಕಿ ಮಾರಕಾಸ್ರ ಹಿಡಿದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ಜಗಳವನ್ನು ಬಿಡಿಸಲು ಹೋದ ರಾಮಾಂಜಿನಯ್ಯ ಹಲ್ಲೆಗೊಳಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ
ಪ್ರಕರಣ ಮಿಡಿಗೇಶಿ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು  ತನಿಖೆ ಕೈಗೊಂಡಿದ್ದಾರೆ

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.