IMG 20220929 WA0015

ಪಾವಗಡ:ಮೂರು ವರ್ಷದ ಹಿಂದೆ ಕೊಲೆಯಾದ ವ್ಯಕ್ತಿಯ ಮೃತದೇಹ ಪತ್ತೆ…!

DISTRICT NEWS ತುಮಕೂರು

ಮೂರು ವರ್ಷದ ಹಿಂದೆ ಕೊಲೆಯಾದ ವ್ಯಕ್ತಿಯ ಮೃತದೇಹ ಪತ್ತೆ…!

ಪಾವಗಡ……ತಾಲೂಕಿನ ರೋಪ್ಪ ಗ್ರಾಮದ ನಾಗೇಂದ್ರ (30)ಮೂರು ವರ್ಷದ ಹಿಂದೆ ಕೊಲೆಯಾಗಿದ್ದು,. ಗುರುವಾರ ತಾಲೂಕಿನ ತಿಮ್ಮೇನಾಯಕನ ಪೇಟೆಯ ಬಳಿಯ ಚೆಕ್ ಡ್ಯಾಂ ಹತ್ತಿರ ಮೃತ ದೇಹವನ್ನು ಪತ್ತೆಹಚ್ಚಲಾಯಿತು. ತಿಮ್ಮೇ ನಾಯಕನ ಪೇಟೆಯ ನಾಗೇಂದ್ರ( 30) ಎಂಬ ಯುವಕ ಮೂರು ವರ್ಷದ ಹಿಂದೆ ನಾಪತ್ತೆಯಾಗಿದ್ದು.

IMG 20220929 WA0012

ಈ ಬಗ್ಗೆ ಅವರ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೂರು ವರ್ಷದ ನಂತರ ನಾಪತ್ತೆಯದ ವ್ಯಕ್ತಿ ಹತ್ಯೆಯಾದ ಶಂಕೆ ವ್ಯಕ್ತವಾಗಿದ್ದು, ಪಾವಗಡ ಠಾಣಾ ಪೊಲೀಸರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆರೋಪಿಗಳು ಹತ್ಯೆ ಮಾಡಿದ ವಿಷಯವನ್ನು ಒಪ್ಪಿಕೊಂಡಿದ್ದರು. ಆರೋಪಿಗಳಾದ ಸತೀಶ್ (35), ಅನಿಲ್(30) ಕೆಂಗುರಿ ( 28) ಶಂಕರ (38 )ಸುರೇಶ್(28) ಬಂಧಿಸಿ ಶವವನ್ನು ಹೂತಿಟ್ಟ ಸ್ಥಳದ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು. ನಾಗೇಂದ್ರ ಅವರನ್ನು ಕೊಲೆ ಮಾಡಿ ಬಾವಿಗೆ ಎಸೆದಿದ್ದು ಮೃತ ದೇಹ ತೇಳಲಿದ ಹಿನ್ನೆಲೆ, ಮೃತದೇಹವನ್ನು ಸುಟ್ಟು ಹಾಕಿ ಟಿ ಎನ್ ಪೇಟೆ ಹತ್ತಿರವಿರುವ ಚೆಕ್ ಡ್ಯಾಮ್ ಬಳಿ ಹೂತಿಡಲಾಗಿದೆಎಂದು ತಿಳಿದು ಬಂದಿದೆ. .

ಕಳೆದೆರಡು ದಿನಗಳಿಂದ ಮೃತ ದೇಹ ಪತ್ತೆ ಕಾರ್ಯ ಆರಂಭಿಸಿದ್ದು, ಚೆಕ್ ಡ್ಯಾಮ್ ನಲ್ಲಿ ನೀರಿದ್ದ ಕಾರಣ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ,. ಗುರುವಾರ ಚೆಕ್ ಡ್ಯಾಂ ನೀರನ್ನು ಖಾಲಿ ಮಾಡಿ ಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿ, ಮೃತದೇಹ ಪತ್ತೆ ಹಚ್ಚಲಾಯಿತು. ಕಾರ್ಯಾಚರಣೆಯಲ್ಲಿ ಡಿಎಸ್ಪಿ ವೆಂಕಟೇಶ್ ನಾಯ್ಡು, ಸಿ ಐ ಅಜಯ್ ಸಾರಥಿ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದು, ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ವರದಿ: ಶ್ರೀನಿವಾಸಲು ಎ