IMG 20200921 WA0009

ಪಾವಗಡ: ಬಸವ, ಬುದ್ದ, ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳ ಅರಿವು ಕಾರ್ಯಕ್ರಮ…!

DISTRICT NEWS ತುಮಕೂರು

ಬಹುಜನ ಸಮಾಜ ಪಕ್ಷ, ಬುದ್ದ ಬಸವ ಅಂಬೇಡ್ಕರ್ ರ ಅರಿವು ಕಾರ್ಯಕ್ರಮ.

ಪಾವಗಡ:-  ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ನೈತೃತ್ವದಲ್ಲಿ ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುದ್ಧ ಬಸವ. ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಸಿಂಹ ಮಾತನಾಡುತ್ತ ಬಹುಜನ ಸಮಾಜ ಪಕ್ಷ ಸಂಘಟನೆಗೊಳ್ಳಬೇಕಾದರೆ ಯುವಕರು ಹಾಗೂ ಅಸ್ಪೃಶ್ಯರು ಒಗ್ಗಟ್ಟಾಗಿ ಬುದ್ಧ, ಬಸವ,ಅಂಬೇಡ್ಕರ್ ರ ಸಮಾಜಮುಖಿ ಹೋರಾಟದ ಹಾದಿಯನ್ನು ಪ್ರತಿಯೊಬ್ಬರು ತಿಳಿಯಬೇಕು.  ಇನ್ನು ಮೊಟ್ಟ ಮೊದಲ ಭಾರಿಗೆ ಸಾವಿತ್ರಬಾಯಿ ಪುಲೆಯವರು ಶಿಕ್ಷಣ ಕ್ರಾಂತಿಯನ್ನೇ . ಮಾಡಿದರು ಇದರಿಂದ ಮಹಿಳೆಯರಿಗೆ ಶಿಕ್ಷಣ ಪಡೆಯಲು ಸಾಧ್ಯವಾಯಿತು.
ಪೆರಿಯಾರ್ ನಾರಾಯಣ್ ಗುರುರವರು ಬ್ರಾಹ್ಣಣ ಶಾಯಿ ವಿರುದ್ಧ ಹೋರಾಟ ನಡೆಸಿದರು ಇಂತಹ ಮಹನೀಯರ ತತ್ವದಾರ್ಶಗಳನ್ನು  ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೊ.ರಂಗಧಾಮಯ್ಯ ಮಾತನಾಡಿ ಬಹುಜನ ಸಮಾಜವನ್ನು ಎಲ್ಲಾ ಜಾತಿ ಸಮಾಜದವರು ಬೆಂಬಲಿಸಿದಾಗ ಮಾತ್ರ ಅಸ್ಪೃಶ್ಯತೆ ನಿವಾರಣೆಯಾಗಲು ಸಾಧ್ಯ ಜೊತೆಗೆ ಶೈಕ್ಷಣಿಕವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿಯಾಗಲು ಸಾಧ್ಯ ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಹನುಮಂತರಾಯಪ್ಪ, ಉಪಾಧ್ಯಕ್ಷ ಡಿ.ಟಿ.ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಚಿನ್ನಮ್ಮನಹಳ್ಳಿ ವೆಂಕಟರವಣಪ್ಪ, ಸಂಘಟನಾ ಕಾರ್ಯದರ್ಶಿ ಜಂಗಮರಹಳ್ಳಿ ಶಿವಕುಮಾರ್, ಕೊಡಮಡುಗು ಗೋವಿಂದ, ಅಹೋಬಳೇಶ್ ಚಿಕ್ಕನಾಯಕಹಳ್ಳಿ ಸೇರಿದಂತೆ ಹಲ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ