IMG 20220924 WA0030

ಮಧುಗಿರಿ:ಮುತ್ತುರಾಯನಹಳ್ಳಿ ಕೆರೆ ಗಂಗೆ‌ಪೂಜೆ…!

DISTRICT NEWS ತುಮಕೂರು

ಕೊಡಿಗೇನಹಳ್ಳಿ ಹೋಬಳಿ ಮುತ್ತುರಾಯನಹಳ್ಳಿ ಕೆರೆಯ ಕೋಡಿ ಹರಿಯುತ್ತಿರುವುದರಿಂದ ಮಾಜಿ ಶಾಸಕ ಕೆ ಎನ್ ರಾಜಣ್ಣ ರವರಿಂದ ಗಂಗಾ ಪೂಜೆ……..

ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮುತ್ತುರಾಯನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದಂತಹ ಧಾರಾಕಾರ ಮಳೆಯಿಂದ ಸುಮಾರು ದಿನಗಳಿಂದ ಕೆರೆಯ ಕೋಡಿ ಹರಿಯುತ್ತಿರುವುದರಿಂದ ಆ ಊರಿನ ಗ್ರಾಮಸ್ಥರು ಕೆರೆಗೆ ಗಂಗಾ ಪೂಜೆ ಮಾಡಬೇಕೆಂದು ಮಾಜಿ.ಶಾಸಕರಾದ ಕೆ ಎನ್ ರಾಜಣ್ಣರವರಲ್ಲಿ ಮನವಿ ಮಾಡಿದಾಗ ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಿಡುವಿಲ್ಲದಿದ್ದರೂ ಕೂಡ ಮುತ್ತ ರಾಯನಹಳ್ಳಿ ಗ್ರಾಮದ ಜನತೆಯ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಮಣಿದು ಕರೆಕೋಡಿಯ ಪೂಜಾ ಕಾರ್ಯಕ್ರಮಕ್ಕೆಗ್ರಾಮಸ್ಥರ ಸಮ್ಮುಖದಲ್ಲಿ ಇಂದು ಗಂಗಾ ಪೂಜೆ ನೆರವೇರಿಸುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಎಂದರು ಇದೇ ಸಂದರ್ಭದಲ್ಲಿ ಈ ಕೆರೆಗೆ ಹರಿದು ಬರುವ ನೀರಿನ ಕಾಲುವೆಯು ಒಂದು ಕಿಲೋಮೀಟರ್ ದೂರದಲ್ಲಿದ್ದರೂ ಕೂಡ ಕಾಲ್ನಾಡಿಗೆಯಲ್ಲಿ ನಡೆದುಕೊಂಡು ಬಂದು ಕಾಲುವೆಯನ್ನು ವೀಕ್ಷಿಣೆ ಮಾಡಿ ಈ ಒಂದು ದುರಸ್ತಿ ಕಾರ್ಯ ಮಾಡಿರುವ ತಂಡದವರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿಯೂ ಸಹ ಇನ್ನು ಹೆಚ್ಚಿನ ಕೆಲಸ ಕಾರ್ಯ ಆಗಬೇಕಾಗಿದೆ ನಾನು ಅದನ್ನು ನೆರವೇರಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

IMG 20220924 WA0027

ಈ ಸಂದರ್ಭದಲ್ಲಿ ಸಿಂಗನಹಳ್ಳಿ.ಗ್ರಾಮ ಪಂಚಾಯಿತಿ ಅಧ್ಯಕ್ಷಯಾದ ಸಂಜೀವಮ್ಮ ಲಕ್ಷ್ಮಿ ರಂಗಯ್ಯ. ಮುಖಂಡರಾದ ಕಾಂತರಾಜು. ನಾರಾಯಣ ರೆಡ್ಡಿ. ಶ್ರೀನಿವಾಸ್. ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಚಲಪತಿ. ದಾಸಪ್ಪ. ಡಿಸಿಸಿ ಬ್ಯಾಂಕ್ ನ ಮೇಲ್ವಿಚಾರಕರಾದ ರಾಮಕೃಷ್ಣಪ್ಪ. ಸಿಂಗನಹಳ್ಳಿ ವಿ.ಎಸ್.ಎಸ್.ಏನ್
ಕಾರ್ಯದರ್ಶಿಯಾದ. ಪ್ರಸಾದ್ ಬಾಬು. ಸುದ್ದಿಗುಂಟೆ ವಿಎಸ್ಎಸ್ ನ ಕಾರ್ಯದರ್ಶಿಯಾದ ನಾಗರಾಜು. ಸೇರಿದಂತೆ. ಹಲವಾರು ಜನ ಗ್ರಾಮಸ್ಥರು ಹಾಜರಿದ್ದರು

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.