IMG 20230101 WA0000

ಪಾವಗಡ:ಕರಡಿ ದಾಳಿಗೆ ಗಾಯಗೊಂಡ ರೈತ….!

DISTRICT NEWS ತುಮಕೂರು

ಕರಡಿ ದಾಳಿ ಗಾಯಗೊಂಡ ರೈತ….!

ಪಾವಗಡ.. ರೈತನೊಬ್ಬನ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಪೋತಗನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕುಣಿ ಹಳ್ಳಿ ಗ್ರಾಮದ ಹೋರವಲಯದಲ್ಲಿ ನಡೆದಿದೆ.

ಕುನಿಹಳ್ಳಿಯ ಗ್ರಾಮದ ನಾಗೇಂದ್ರಪ್ಪ (40) ಕರಡಿಗಳಿಂದ ಗಾಯಗೊಂಡ ರೈತ . ಗಾಯಾಳು ನಾಗೇಂದ್ರಪ್ಪ ತನ್ನ ಜಮೀನಿಗೆ ನೀರನ್ನು ಹಾಯಿಸಲು ಸ್ಪ್ರಿಂಕ್ಲರ್ ಗಳನ್ನು ಬದಲಾವಣೆ ಮಾಡಿ ಶುಕ್ರವಾರ ರಾತ್ರಿ 6.30ರ ಸಮಯದಲ್ಲಿ ಹಿಂತಿರುಗುವಾಗ ಪೊದೆಯಲ್ಲಿದ್ದ ಕರಡಿಯೊಂದು ಏಕಾಏಕಿ ದಾಳಿ ನಡೆಸಿತೆಂದು, ನಂತರ ದೂರದಲ್ಲಿದ್ದ ಇನ್ನೆರಡು ಕರಡಿಗಳು ಬಂದು ತನ್ನ ಮೇಲೆ ದಾಳಿ ಮಾಡಿ ಕೈಕಾಲುಗಳು, ಬೆನ್ನಿನ ಮೇಲೆ ಗಾಯಗಳನ್ನ ಮಾಡಿದವೆಂದು, ನಂತರ ಅವುಗಳ ಜೊತೆ ಸೆಣೆಸಾಡಿ ಬಿಡಿಸಿಕೊಂಡು ಬಂದೆ ಎಂದು, ಗಾಯಾಳು ನಾಗೇಂದ್ರಪ್ಪ ತಿಳಿಸಿದರು.

ಗಾಯಾಳು ರೈತ ನಾಗೇಂದ್ರನ ಹೆಂಡತಿ ಮಹಾಲಕ್ಷ್ಮಿ ಮಾತನಾಡಿ , ಕುಣಿಹಳ್ಳಿ ಸುತ್ತಮುತ್ತಲೂ ಸಂಜೆ 6:30 ರಿಂದಲೇ ಕರಡಿಗಳು ಹೊಲಗದ್ದೆಗಳ ಕಡೆ ಬರುತ್ತವೆ, ರೈತರು ಹೊಲಗದ್ದೆಗಳ ಕಡೆ ಹೋಗಲು ಸಹ ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ ಎಂದು, ಮೂರು ಕರಡಿಗಳು ತನ್ನ ಗಂಡನ ದಾಳಿ ಮಾಡಿ ಗಾಯಗೊಳಿಸಿವೆ ಎಂದು ತಕ್ಷಣ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದರು.

ವರದಿ : ಶ್ರೀನಿವಾಸಲು ಎ