IMG 20230127 WA0011

ಪಾವಗಡ: ನೀರಿಗೆ ಬಿದ್ದು ವ್ಯಕ್ತಿ ಸಾವು…!

DISTRICT NEWS ತುಮಕೂರು

ಪಾವಗಡ: ವ್ಯಕ್ತಿಯೊಬ್ಬ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ನಡೆದಿದೆ.
ನಾಗಲ ಮಡಿಕೆ ಗ್ರಾಮದ ನಾರಾಯಣಪ್ಪ(36) ಮೃತ ದುರ್ದೈವಿಯಾಗಿದ್ದಾರೆ. ಮೃತ ನಾರಾಯಣಪ್ಪ ಶುಕ್ರವಾರ ಮಧ್ಯಾನ ಇಬ್ಬರು ಮಕ್ಕಳೊಂದಿಗೆ ನದಿ ಬಳಿ ಹೋಗಿದ್ದು, ಮಕ್ಕಳನ್ನು ನದಿ ಬಳಿಯೇ ಬಿಟ್ಟು ನೀರಿಗೆ ಧುಮುಕಿದ್ದಾರೆ.
ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ.
ತಿರುಮಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು

ವರದಿ: ಶ್ರೀನಿವಾಸಲು ಎ