IMG 20230320 WA0095

ಪಾವಗಡ: ಜೆಡಿ ಎಸ್ ನಾಯಕ ಭಗವಂತಪ್ಪ ‘ ಕೈ’ ತಕ್ಕೆಗೆ…!

DISTRICT NEWS ತುಮಕೂರು

ವಕೀಲರು ಹಾಗೂ ಜೆಡಿ ಎಸ್ ನಾಯಕರು ಆದ ಭಗವಂತಪ್ಪ ನವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
ಪಾವಗಡ : ತಾಲೂಕಿನ ಖ್ಯಾತ ವಕೀಲರಾದ ಭಗವಂತಪ್ಪನವರು ಸೋಮವಾರ ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಹಾಗೂ ಶಾಸಕರಾದ ವೆಂಕಟರಮಣಪ್ಪ ನವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ , ಭಗವಂತಪ್ಪ ಉತ್ತರಿಸುತ್ತಾ,
ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ, ತಾನು ಹಲವಾರು ವರ್ಷಗಳಿಂದಲೂ ಜೆಡಿಎಸ್ ನಲ್ಲಿ ಒಬ್ಬ ಕಾರ್ಯಕರ್ತನಾಗಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆಂದು,
ಜೆಡಿಎಸ್ ಪಕ್ಷದಲ್ಲಿ ಮಾಜಿ ಎಮ್ಎಲ್ಎ ಕಾರ್ಯವೈಖರಿ ಬಗ್ಗೆ ತನಗೆ ಅಸಮಾಧಾನವಾಗಿ ಜೆಡಿಎಸ್ ಪಕ್ಷದಿಂದ ದೂರವಿದ್ದೇನೆ ಎಂದರು.ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ
ಡಾ ಜಿ ಪರಮೇಶ್ವರ್, ಶಾಸಕ ವೆಂಕಟರಮಣಪ್ಪ ಕಾಂಗ್ರೆಸ್ ಪಕ್ಷದ ಸಂಭ್ಯಾವ್ಯ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಸೇರಿ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು…