IMG 20201209 WA0015

ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಗೆ ನೂತನ ಸಾರಥಿ…!

STATE Genaral

ಬೆಂಗಳೂರು, ಡಿ 9: –  ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಯ ನೂತನ ಅಧ್ಯಕ್ಷ ರಾಗಿ  M ಅಪ್ಪಣ್ಣ ಅವರು ಬೆಂಗಳೂರಿನಲ್ಲಿ  ಇಂದು ಪದಗ್ರಹಣ ಮಾಡಿದರು.

ಮೈಸೂರಿನ ಎಮ್. ಅಪ್ಪಣ್ಣ ಅವರನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌) ನ ಅಧ್ಯಕ್ಷರನ್ನಾಗಿ ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇಮಕ ಮಾಡಿದ್ದರು.

IMG 20201209 WA0011

M. ಅಪ್ಪಣ್ಣ ಮೈಸೂರಿನವರಾಗಿದ್ದು, ಸದ್ಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾಗಿದ್ದಾರೆ. ಮೈಸೂರು ಭಾಗದಲ್ಲಿ ನಾಯಕ ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ..IMG 20201209 120233

ಪದಗ್ರಹಣದ ನಂತರ  ಪ್ರತಿಕ್ರಿಯಿಸಿದ ಅಪ್ಪಣ್ಣ ಅವರು ”ನನ್ನನ್ನು ಗುರುತಿಸಿ ಈ ಹುದ್ದೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಪಕ್ಷದ ಅಧ್ಯಕ್ಷರಿಗೆ ಹಾಗೂ ಎಲ್ಲಾ ಹಿರಿಯ ನಾಯಕರುಗಳಿಗೆ  ಚಿರರುಣಿ ಎಂದರು.

ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ನವರ ಆಶಯ ದಂತೆ ಪ್ರವಾಸೋದ್ಯಮ ಅಭಿವೃದ್ಧಿ ಗೆ ಶ್ರಮಿಸುತ್ತೇನೆ ಎಂದು  ತಿಳಿಸಿದರು.

M ಅಪ್ಪಣ್ಣ ನವರ ಮಾತು ಕೇಳಲು ಇಲ್ಲಿ ಕ್ಲಿಕ್ ಮಾಡಿ