IMG 20210108 WA0007

ಪಾವಗಡ: ಸರ್ಕಾರಿ ಆಸ್ಪತ್ರೆ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ…!

DISTRICT NEWS ತುಮಕೂರು

ಪಾವಗಡ: – ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ  ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆ ಗೆ ಕಳುಹಿಸುತ್ತಿರುವುದ ವಿರುದ್ಧ ಖಾಸಗಿ ಸಂಘ ಸಂಸ್ಥೆ ಗಳ ಕಾರ್ಯಕರ್ತರು  ಪಾವಗಡ ಸರ್ಕಾರಿ ಆಸ್ಪತ್ರೆ ಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರಕ್ತ ಪರೀಕ್ಷೆ,  ರಕ್ತ ಬದಲಾವಣೆ ಮತ್ತು ಹೆರಿಗೆ ಗೆ ಬರುವವರಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಖಾಸಗೀ ಆಸ್ಪತ್ರೆಗೆ ಕಳುಹಿಸುತ್ತಿದ್ದರು.   ಇದರಿಂದ ಬಡ ರೋಗಿಗಳು ತುಂಬಾ ತೊಂದರೆ ಎದುರಿಸುತಿದ್ದರು.  ವಿಷಯ ತಿಳಿದ  ಹೆಲ್ಪ್ ಸೊಸೈಟಿ ಸಂಘಟನೆ   ಮಾನಂ ಶಶಿ ಕಿರಣ್ ಅವರ  ನೇತೃತ್ವದ ತಂಡ. ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿದರು.

IMG 20210108 WA0006

ಡಾ ಪೂಜಾ ಮತ್ತು ಆಡಳಿತ ವೈದ್ಯಾದಿಕಾರಿ ಡಾ ಕಿರಣ್ ಅವರು ಸಮಸ್ಯೆ ಪರಿಹರಿಸುವ ಭರವಸೆ ಯನ್ನು ಪ್ರತಿಭಟನಾ ನಿರತರಿಗೆ ನೀಡಿದರು.ಮುಂದೆ ಬಡ ರೋಗಿಗಳಿಗೆ ತೊಂದರೆ ಯಾಗುವುದಿಲ್ಲ ಎಂದು ಆಸ್ಪತ್ರೆ ಯ  ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಬೀದಿಬದಿ ಮಹಿಳಾ ವ್ಯಾಪಾರಸ್ಥರ ಅಧ್ಯಕ್ಷರು ಶಶಿಕಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಅನಿಲ್ ಕುಮಾರ್ ಮಾನವ ಹಕ್ಕು ಪರಿಷತ್ ಅಧ್ಯಕ್ಷರು ಮಂಜುನಾಥ ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಅಶೋಕ ಸಾಗರ್ ದೇವರಾಜ್ ಗೌತಮ್ ರಾಜು ಭರತ ಹಾಜರಿದ್ದರು.