IMG 20210125 WA0010

ಪಾವಗಡ: ವೇಮನ ಜಯಂತಿ ಆಚರಣೆ….!

DISTRICT NEWS ತುಮಕೂರು

ಪಾವಗಡ:  ಓಬಳಾಪುರ ದಲ್ಲಿ‌   ಮಹಾಯೋಗಿ ವೇಮನ ಜಯಂತಿ ಆಚರಣೆ.

ತಾಲ್ಲೂಕಿನ ಓಬಳಾಪುರ ಗ್ರಾಮದಲ್ಲಿ ವೇಮನ ಜಯಂತಿ ಪೂಜೆ ಸಲ್ಲಿಸಲಾಯಿತು. ಡೊಳ್ಳು ಕುಣಿತಗಳೊಂದಿಗೆ ವೇಮನ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು

ಈ ಸಂದರ್ಭದಲ್ಲಿ ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಬೆಳ್ಳಿ ಬೆಟ್ಲು ಚಂದ್ರಶೇಖರರೆಡ್ಡಿ ಮಾತನಾಡಿ. ಮಹಾಯೋಗಿ ವೇಮನರು ಶ್ರೇಷ್ಠ ಕವಿ. ಅವರು ಜನ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರತು ಜನಕವಿಯಾಗಿದ್ದಾರೆ. ತಮ್ಮ ಕವನ ಮತ್ತು ತತ್ವಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದ ಮಹಾನ್ ವ್ಯಕ್ತಿ ಹಾಗೂ ಮುಂದಿನ  ದಿನಗಳಲ್ಲಿ  ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ  ವೇಮನ ಜಯಂತಿ ಆಚರಿಸಬೇಕು ಎಂದರು.

ತಾಲ್ಲೂಕು ರೆಡ್ಡಿ ಜನಸಂಘ ಕ್ಕೆ ನಿವೇಶನ ಕೊಡುವುದಾಗಿ ಡಾಕ್ಟರ್ ಪ್ರಭಾಕರ್ ರೆಡ್ಡಿ ಇದೇ ಸಂಧರ್ಭದಲ್ಲಿ ತಿಳಿಸಿದರು.

ತಾಲೂಕು ಅಧ್ಯಕ್ಷ ಚಂದ್ರಶೇಖರ ರೆಡ್ಡಿ. ತಾಲೂಕು ಪಂಚಾಯಿತಿ ಸದಸ್ಯ ಸಣ್ಣರೆಡ್ಡಿ. ಆದಿನಾರಾಯಣ ರೆಡ್ಡಿ. ಸತ್ಯ ನಾರಾಯಣ ರೆಡ್ಡಿ. ಪುರುಷೋತ್ತಮ ರೆಡ್ಡಿ. ಶಶಾಂಕ್ ರೆಡ್ಡಿ. ನಿಸಾಂತ್ ರೆಡ್ಡಿ. ಬಿ ಹೆಚ್. ಜಯರಾಮ ರೆಡ್ಡಿ. ಶಶಾಂಕ್ ರೆಡ್ಡಿ ಹಾಗೂ ಓಬಳಾಪುರ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೆಡ್ಡಿ ಜನಾಂಗದ ಮುಖಂಡರು ಹಾಜರಿದ್ದರು