IMG 20210420 WA0005

ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು….!

Genaral STATE

*ಸರ್ವಪಕ್ಷ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು*

– ಕೊರೋನಾ ವಿಚಾರವಾಗಿ ಸರ್ಕಾರದ ಪರವಾಗಿ ಆರೋಗ್ಯ ಸಚಿವರು ಇಂದು ಬಿಡುಗಡೆ ಮಾಡಿರುವ ಮುಂಜಾಗ್ರತಾ ಕ್ರಮಗಳ ಪಟ್ಟಿ ವಾಸ್ತವಕ್ಕೆ ದೂರವಾಗಿದೆ.

– ಈ ವಿಚಾರದಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕೇ ಹೊರತು, ಪ್ರತಿಷ್ಠೆಯಾಗಿ ಪರಿಗಣಿಸಬಾರದು.

ನವೆಂಬರ್ 30ರಂದು ಎರಡನೇ ಅಲೆ ಕುರಿತಾಗಿ ತಾಂತ್ರಿಕ ಸಮಿತಿ ಎಚ್ಚರಿಕೆ ನೀಡಿದ್ದರೂ ನಾವದ್ನು ಸರಿಯಾಗಿ ಪಾಲಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಳ್ಳಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ.

ಏನು ಕ್ರಮ ಕೈಗೊಳ್ಳದೇ, ನಾವು ಎಲ್ಲವನ್ನು ಸರಿಯಾಗೇ ಮಾಡಿದ್ದೇವೆ ಎಂಬ ಸಮರ್ಥನೆ ಬೇಡ. ಸರ್ಕಾರ ಸರಿಯಾಗಿ ಕ್ರಮಕೈಗೊಂಡಿದ್ದರೆ ಈ ಪರಿಸ್ಥಿತಿ ಯಾಕೆ ನಿರ್ಮಾಣವಾಗುತ್ತಿತ್ತು?

ನೀವು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾವು ಎಷ್ಟು ದಿನ ಇರುತ್ತೇವೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

– ಹಾಸಿಗೆ, ರೋಗಿಗಳ ಪರಿಸ್ಥಿತಿ ಬಗ್ಗೆ ನೀವೇ ಒಂದು ರಿಯಾಲಿಟಿ ಚೆಕ್ ಮಾಡಿ. ಕೇವಲ ನಾಲ್ಕು ಸಚಿವರು ಮಾತ್ರ ಸರ್ಕಾರ ಅಲ್ಲ. ಮುಖ್ಯಮಂತ್ರಿಗಳು ಸರ್ಕಾರ ಅಲ್ಲ. ಪಂಚಾಯ್ತಿಯಿಂದ ರಾಜ್ಯಮಟ್ಟದವರೆಗೆ ಎಲ್ಲ ಆಡಳಿತ ಯಂತ್ರವೂ ಸರ್ಕಾರವೇ.IMG 20210420 WA0009

– ಇದನ್ನು ಎಲ್ಲಿ ಬಳಸಿಕೊಳ್ಳಲಾಗಿದೆ. ಎಷ್ಟು ಜನ ಸಚಿವರು, ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿದ್ದಾರೆ? ಇನ್ನು ಮುಂದಾದರೂ ಸಮರೋಪಾದಿಯಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು.

– ಶಿಕ್ಷಣ ಇಲಾಖೆ, ಆರೋಗ್ಯ, ಸಾಮಾಜ ಕಲ್ಯಾಣ ಸೇರಿ ಎಲ್ಲ ಇಲಾಖೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಎಲ್ಲರಿಗೂ ಜವಾಬ್ದಾರಿ ವಹಿಸಬೇಕು.

– ಶವಗಳ ವಿಚಾರವಾಗಿ, ನಮ್ಮ ಧರ್ಮ, ಸಂಸ್ಕೃತಿ ಏನು ಹೇಳುತ್ತದೆ? ಯಾರೇ ಸಾಯುವಾಗ ಅವನಿಗೆ ಗೌರವಯುತ ಅಂತ್ಯ ಸಂಸ್ಕಾರ ಮಾಡಿ ಆತ್ಮಕ್ಕೆ ಶಾಂತಿ ಸಿಗಬೇಕು ಎನ್ನುತ್ತೇವೆ. ಬೆಂಗಳೂರು ಸುತ್ತ ಕೆಲವು ಸರ್ಕಾರಿ ಜಾಗಗಳಲ್ಲಿ ತಾತ್ಕಾಲಿಕ ಸ್ಮಶಾನ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ?

– ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿದೆ.

– ಸಾವಿನ ವಿಚಾರದಲ್ಲಿ ಆಡಿಟ್ ಆಗಬೇಕು. ಈ ಸಾವುಗಳ ಸಂಖ್ಯೆ, ಅದರಲ್ಲಿ ಸಾವಿಗೆ ಕಾರಣದ ಬಗ್ಗೆ ಮಾಹಿತಿ ಪಡೆಯಬೇಕು.

– ಸರ್ಕಾರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲಿ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹರಿಸಲಿ. ಆರೋಗ್ಯ ಸೇವೆ ಎಲ್ಲರಿಗೂ ಸುವಂತೆ ಮಾಡಲು 30 ಸಾವಿರ ಕೋಟಿ ಮೀಸಲಿಡಿ.

– ನೀವು ಹಿಂದೆ ಘೋಷಿಸಿದ ಪ್ಯಾಕೇಜ್ ನಲ್ಲಿ ಯಾರಿಗೆ ಹಣ ತಲುಪಿದೆ ಅಂತಾ ಒಂದು ಪಟ್ಟಿ ಕೊಡಿ. ರೈತರಿಗೆ ಹೇಗೆ ನೆರವಾದಿರಿ ಎಂಬ ಮಾಹಿತಿ ಕೊಡಿ.

– ಕೇಂದ್ರ ಸರ್ಕಾರದ 20 ಲಕ್ಷ ಕೋಟಿಯಲ್ಲಿ ನಮ್ಮ ರಾಜ್ಯದಲ್ಲಿ ಯಾರಿಗೆ ಅನುಕೂಲವಾಗಿದೆ ಹೇಳಿ.

– ಔಷಧಿ ಮತ್ತು ಲಸಿಕೆ ತಯಾರಿಕೆಗೆ ಕೇವಲ 2 ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಲಸಿಕೆ ಫಾರ್ಮುಲಾವನ್ನು ಕೊಟ್ಟು ಬೇರೆ ಕಂಪನಿಗಳಲ್ಲೂ ಉತ್ಪಾದನೆ ಮಾಡಿಸಿ.

– ಈ ಪರಿಸ್ಥಿತಿಯಲ್ಲಿ ಲಸಿಕೆ ರಫ್ತು ಮಾಡದಂತೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ತಿಳಿಸಿಲಿ. ನಮ್ಮ ಮಕ್ಕಳನ್ನು ಮೊದಲು ಬದುಕಿಸಿ ಆಮೇಲೆ ಬೇರೆಯವರಿಗೆ ನೀಡಿ.

– ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಿರಿ.

– ಶಿಕ್ಷಣ ಸಂಸ್ಥೆ, ಮಕ್ಕಳು, ಪೋಷಕರು ಎಲ್ಲರ ಹಿತವನ್ನು ಕಾಪಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು.

– ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಅವರ ಜತೆ 5 ನಿಮಿಷ ಕರೆದು ಮಾತನಾಡದಿದ್ದರೆ ಈ ಸರ್ಕಾರ ಇರೋದು ಯಾತಕ್ಕಾಗಿ? ಸರ್ಕಾರ ಈ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸಿಕೊಳ್ಳಬೇಕು.

– ರಾಜಕಾರಣದಲ್ಲಿ ನಮಗೆ ಬೇಕಾದಷ್ಟು ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ದೃಷ್ಟಿಯಿಂದ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ.

– ಪರೀಕ್ಷೆ ನಡೆಸುವ ವಿಚಾರದಲ್ಲಿ ಪರಿಸ್ಥಿತಿ ಅರಿತು ನಿರ್ಧಾರ ಕೈಗೊಳ್ಳಿ.

– ಮುಖ್ಯಮಂತ್ರಿಗಳ ಅನಾರೋಗ್ಯ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ಸಭೆ ಕರೆದಿರುವುದನ್ನು ಸ್ವಾಗತಿಸುತ್ತೇವೆ. ಅವರಿಗೆ ಅಧಿಕಾರ ಇದೆಯೋ ಇಲ್ಲವೋ ಅನ್ನೋದು ಬೇರೆ ವಿಚಾರ. ಆದರೆ ಅವರ ಕಾಳಜಿಯನ್ನು ಮೆಚ್ಚುತ್ತೇನೆ.

– ಕೊರೋನಾ ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಇತರ ನಾಯಕರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.