1586585213 modi mask

ಪ್ರಧಾನಿ ಮೋದಿ ಅವರ 77 ನೇ ಮನ್ ಕಿ ಬಾತ್….!

National - ಕನ್ನಡ

 

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ 77ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

ನನ್ನ ಪ್ರಿಯ ದೇಶಬಾಂಧವರೆ ನಮಸ್ಕಾರ. ಕೋವಿಡ್ 19 ರ ವಿರುದ್ಧ ದೇಶ ಯಾವ ರೀತಿ ಸಂಪೂರ್ಣ ಶಕ್ತಿಯನ್ನುಬಳಸಿ ಯಾವ ರೀತಿ ಮೋದಿ ಕೆಲಸ ಮಾಡುತ್ತಿದೆ ಎಂದು ನಾವುನೋಡುತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದೊಂದುಬಹುದೊಡ್ಡ ಮಹಾಮಾರಿಯಾಗಿದೆ ಮತ್ತು ಇದೇಸಾಂಕ್ರಾಮಿಕದ ಮಧ್ಯೆ ಭಾರತ ಹಲವಾರು ಬಗೆಯಪ್ರಾಕೃತಿಕ ವಿಪತ್ತುಗಳನ್ನು ಕೂಡ ಬಲಯುತವಾಗಿಎದುರಿಸಿದೆ. ಈ ಸಮಯದಲ್ಲಿ ಅಂಫಾನ್ ಚಂಡಮಾರುತಮತ್ತು ನಿಸರ್ಗ ಚಂಡಮಾರುತ ಅಪ್ಪಳಿಸಿತು. ಅನೇಕರಾಜ್ಯಗಳಲ್ಲಿ ನೆರೆ ಬಂತು. ಸಣ್ಣ ಪುಟ್ಟ ಭೂಕಂಪಗಳುಆದವು. ಭೂಮಿ ಕುಸಿಯಿತು. ಇದೀಗ ಕಳೆದ 10 ದಿನಗಳಲ್ಲಿ ದೇಶ 2 ದೊಡ್ಡ ಚಂಡಮಾರುತಗಳನ್ನುಎದುರಿಸುತ್ತಿದೆ. ಪಶ್ಚಿಮ ಸಮುದ್ರ ತೀರದಲ್ಲಿಚಂಡಮಾರುತ ತಾವು-ತೆ ಮತ್ತು ಪೂರ್ವ ತಟದಲ್ಲಿಚಂಡಮಾರುತ ಯಾಸ್ ಅಪ್ಪಳಿಸಿದ್ದು ಹಲವಾರುರಾಜ್ಯಗಳ ಮೇಲೆ ಪ್ರಭಾವ ಬೀರಿವೆ. ದೇಶ ಮತ್ತು ದೇಶದಜನತೆ ಇದರ ವಿರುದ್ಧ ಸಂಪೂರ್ಣ ಶಕ್ತಿಯಿಂದ ಹೋರಾಡಿಅತ್ಯಂತ ಕಡಿಮೆ ಸಾವು ನೋವುಗಳಾಗುವಂತೆನೋಡಿಕೊಂಡರು. ಈಗ ಹಿಂದಿನ ವರ್ಷಗಳಿಗೆಹೋಲಿಸಿದರೆ, ಹೆಚ್ಚೆಚ್ಚು ಜನರ ಜೀವವನ್ನುಉಳಿಸುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಆಪತ್ತಿನ ಈ ಸಂಕಷ್ಟದ ಪರಿಸ್ಥಿತಿಯಲ್ಲಿಚಂಡಮಾರುತದಿಂದ ತತ್ತರಿಸಿದ ಎಲ್ಲ ರಾಜ್ಯಗಳ ಜನತೆಅಪಾರ ಸಾಹಸವನ್ನು ತೋರ್ಪಡಿಸಿದ್ದಾರೆ, ಈ ಸಂಕಷ್ಟಸಮಯದಲ್ಲಿ ಸಂಮಯದಿಂದ ಧೈರ್ಯದಿಂದ ಅದನ್ನುಎದುರಿಸಿದ್ದಾರೆಯೋ ಆ ಎಲ್ಲ ನಾಗರಿಕರಿಗೆ ನಾನುಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಯಾರುಮುಂದುವರಿದು ಪರಿಹಾರ ಮತ್ತು ಸಂರಕ್ಷಣಾಕಾರ್ಯದಲ್ಲಿ ಕೆಲಸದಲ್ಲಿ ಪಾಲ್ಗೊಂಡರೋ ಅವರೆಲ್ಲರಿಗೂಎಷ್ಟು ಮೆಚ್ಚುಗೆ ತೋರಿದರೂ ಅದು ಕಡಿಮೆಯೇ. ಅವರೆಲ್ಲರಿಗೂ ನಾನು ವಂದಿಸುತ್ತೇನೆ. ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಎಲ್ಲರೂಒಗ್ಗೂಡಿ ಈ ಆಪತ್ತನ್ನು ಎದುರಿಸಲು ಮುಂದಾಗಿದ್ದಾರೆ. ತಮ್ಮ ಬಂಧುಗಳನ್ನು ಕಳೆದುಕೊಂಡವರೆಲ್ಲರ ಬಗ್ಗೆ ನಾನುಸಂತಾಪ ವ್ಯಕ್ತಪಡಿಸುತ್ತೇನೆ. ಈ ಆಪತ್ತನ್ನು ಎದುರಿಸಿದಎಲ್ಲರೊಂದಿಗೆ ನಾವೆಲ್ಲರೂ ಈ ಸಂಕಷ್ಟದ ಸಮಯದಲ್ಲಿಸಂಪೂರ್ಣ ಬೆಂಬಲಕ್ಕೆ ನಿಂತಿದ್ದೇವೆ.

ನನ್ನ ಪ್ರಿಯ ದೇಶಬಾಂಧವರೆ ಸವಾಲು ಎಷ್ಟೇದೊಡ್ಡದಾಗಿರಲಿ ಭಾರತದ ವಿಜಯದ ಸಂಕಲ್ಪವೂ ಅಷ್ಟೇದೊಡ್ಡದಾಗಿದೆ. ದೇಶದ ಸಾಮೂಹಿಕ ಶಕ್ತಿ ಮತ್ತು ನಮ್ಮಸೇವಾಭಾವ ದೇಶವನ್ನು ಎಲ್ಲ ಸಂಕಷ್ಟದಿಂದ ಪಾರುಮಾಡಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ವೈದ್ಯರು, ಸುಶ್ರೂಷಕಿಯರು ಮತ್ತು ಮುಂಚೂಣಿಹೋರಾಟಗಾರರು- ತಮ್ಮ ಬಗೆಗಿನ  ಆಲೋಚನೆಯನ್ನುತೊರೆದು ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಮತ್ತುಇಂದಿಗೂ ಮಾಡುತ್ತಿದ್ದಾರೆ ಎಂಬುದನ್ನು ನಾವುನೋಡಿದ್ದೇವೆ. ಇದೆಲ್ಲದರ ಮಧ್ಯೆ ಕೊರೊನಾ 2ನೇಅಲೆಯ ವಿರುದ್ಧ ಹೋರಾಡುವುದರಲ್ಲಿ ಮಹತ್ವದ ಪಾತ್ರವಹಿಸಿದ ಅದೆಷ್ಟೋ ಜನರಿದ್ದಾರೆ. ನಮೋ ಆಪ್ ಮತ್ತುಪತ್ರಗಳ ಮೂಲಕ ಹಲವಾರು ಶ್ರೋತೃಗಳು ಮನದಮಾತಿನಲ್ಲಿ ನನ್ನೊಂದಿಗೆ ಈ ವಾರಿಯರ್ಸ್ ಬಗ್ಗೆಮಾತನಾಡುವ ಕುರಿತು ಆಗ್ರಹಿಸಿದ್ದಾರೆ.

ಸ್ನೇಹಿತರೆ, 2 ನೇ ಅಲೆ ಬಂದಾಗ ಇದ್ದಕ್ಕಿದ್ದಂತೆಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಇದುಬಹುದೊಡ್ಡ ಸವಾಲಾಗಿತ್ತು. ವೈದ್ಯಕೀಯಆಮ್ಲಜನಕವನ್ನು ದೇಶದ ದೂರ ಪ್ರದೇಶಗಳಿಗೆತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆಮ್ಲಜನಕದ ಟ್ಯಾಂಕರ್ ಗಳು ಹೆಚ್ಚು ವೇಗವಾಗಿತಲುಪಬೇಕು. ಸ್ವಲ್ಪ ಅಲಕ್ಷವಾದರೂವಿಸ್ಪೋಟವಾಗುವಂತಹ ಆತಂಕವಿರುತ್ತದೆ. ಔದ್ಯಮಿಕಆಮ್ಲಜನಕವನ್ನು ಉತ್ಪಾದಿಸುವ ಅನೇಕ ಘಟಕಗಳುದೇಶದ ಪೂರ್ವಭಾಗದಲ್ಲಿವೆ. ಅಲ್ಲಿಂದ ದೇಶದ ಇತರಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಕೂಡಹಲವು ದಿನಗಳು ಬೇಕಾಗುತ್ತವೆ.

ದೇಶದ ಎದುರಿಗಿರುವ ಈ ಸವಾಲಿನ ಸ್ಥಿತಿಯಲ್ಲಿ ದೇಶಕ್ಕೆcryogenic tanker ವಾಹನ ಚಾಲಕರು, oxygen express, Air Force ನ pilot ಗಳು ಸಹಾಯಮಾಡಿದರು. ಇಂಥ ಅನೇಕ ಜನರು ಯುದ್ಧೋಪಾದಿಯಲ್ಲಿಕೆಲಸ ಮಾಡಿ ಲಕ್ಷಾಂತರ ಜನರ ಜೀವನ ಉಳಿಸಿದರು. ಇಂದು ಮನದ ಮಾತಿನಲ್ಲಿ ಇಂದು ನಮ್ಮೊಂದಿಗೆ ಇಂಥಒಬ್ಬ ಸ್ನೇಹಿತರು ಪಾಲ್ಗೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಜೌನ್ಪು ರದ ನಿವಾಸಿ ಶ್ರೀಯುತ ದಿನೇಶ್ ಉಪಾಧ್ಯಾಯಅವರು …

ಮೋದಿಯವರು: ದಿನೇಶ್ ಅವರೆ  ನಮಸ್ಕಾರ

ದಿನೇಶ್ ಉಪಾಧ್ಯಾಯ: ಸರ್, ನಮಸ್ಕಾರ

ಮೋದಿಯವರು: ಎಲ್ಲಕ್ಕಿಂತ ಮೊದಲು ನಿಮ್ಮ ಬಗ್ಗೆ ನಮಗೆತಿಳಿಸಿ

ದಿನೇಶ್ ಉಪಾಧ್ಯಾಯ: ಸರ್ ನನ್ನ ಹೆಸರು ದಿನೇಶ್ಬಾಬುಲ್ನಾಸಥ್ ಉಪಾಧ್ಯಾಯ. ನಾನು ಜೌನ್ಪುುರಜಿಲ್ಲೆಯ ಅಂಚೆ – ಜಮುವಾ ಹಸನ್ ಪುರ ಗ್ರಾಮದನಿವಾಸಿಯಾಗಿದ್ದೇನೆ.

ಮೋದಿಯವರು: ಉತ್ತರ ಪ್ರದೇಶದವರಾ?

ದಿನೇಶ್: ಹೌದು ಸರ್

ಮೋದಿಯವರು: ಹೌದಾ

ದಿನೇಶ್: ಸರ್ ನನಗೆ ಒಬ್ಬ ಮಗನಿದ್ದಾನೆ, ಇಬ್ಬರು ಹೆಣ್ಣುಮಕ್ಕಳು, ಪತ್ನಿ ಮತ್ತು ತಂದೆ ತಾಯಿ ಇದ್ದಾರೆ.

ಮೋದಿಯವರು: ನೀವು ಏನು ಕೆಲಸ ಮಾಡುತ್ತೀರಿ?

ದಿನೇಶ್: ಸರ್ ನಾನು ಆಮ್ಲಜನಕದ ಟ್ಯಾಂಕರ್ಚಾಲಕನಾಗಿದ್ದೇನೆ. Liquid oxygen….

ಮೋದಿಯವರು: ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿನಡೆದಿದೆಯೇ?

ದಿನೇಶ್: ಹಾಂ ಸರ್ ವಿದ್ಯಾಭ್ಯಾಸ ಚೆನ್ನಾಗಿ ನಡೆದಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗ ಓದುತ್ತಿದ್ದಾರೆ.

ಮೋದಿಯವರು: ಆನ್ ಲೈನ್ ಅಭ್ಯಾಸ ಚೆನ್ನಾಗಿನಡೆದಿದೆಯೇ?

ದಿನೇಶ್: ಹಾಂ ಸರ್, ಚೆನ್ನಾಗಿ ಓದುತ್ತಿದ್ದಾರೆ. ಹೆಣ್ಣುಮಕ್ಕಳು ಓದುತ್ತಿದ್ದಾರೆ. ಸರ್, 15-17 ವರ್ಷಗಳಿಂದನಾನು ಆಮ್ಲಜನಕದ ಟ್ಯಾಂಕರ್ ಚಲಾಯಿಸುತ್ತಿದ್ದೇನೆ.

ಮೋದಿಯವರು: ಹೌದಾ! ನೀವು 15-17 ವರ್ಷಗಳಿಂದನಾನು ಆಮ್ಲಜನಕ ಹೊತ್ತೊಯ್ಯುತ್ತಿದ್ದೀರಿ ಎಂದಾದಲ್ಲಿನೀವು ಕೇವಲ ಒಬ್ಬ ಚಾಲಕನಲ್ಲ. ಲಕ್ಷಾಂತರ ಜನರ ಜೀವಉಳಿಸುವ ಕೆಲಸ ಮಾಡುತ್ತಿದ್ದೀರಿ.

ದಿನೇಶ್: ಸರ್ ನಮ್ಮ ಕೆಲಸವೇ ಅದಲ್ಲವೇ ಸರ್, ನಮ್ಮಆಮ್ಲಜನಕದ ಕಂಪನಿ ಐನಾಕ್ಸ ನಮ್ಮ ಬಗ್ಗೆ ಬಹಳಕಾಳಜಿವಹಿಸುತ್ತದೆ. ನಾವು ಎಲ್ಲಿಯೇ ಆಮ್ಲಜನಕವನ್ನುತಲುಪಿಸುತ್ತೇವೆ ಎಂದಾಗ ನಮಗೆ ಬಹಳಸಂತೋಷವೆನಿಸುತ್ತದೆ.

ಮೋದಿಯವರು: ಆದರೆ ಪ್ರಸ್ತುತ ಕೊರೊನಾಸಮಯದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ?

ದಿನೇಶ್: ಹೌದು ಸರ್ ಬಹಳ ಹೆಚ್ಚಾಗಿದೆ.

ಮೋದಿಯವರು: ನೀವು ಟ್ರಕ್ನಳ ಚಾಲಕ ಆಸನದ ಮೇಲೆಕುಳಿತಾಗ ನಿಮ್ಮ ಭಾವನೆ ಹೇಗಿರುತ್ತದೆ? ಹಿಂದಕ್ಕೆಹೋಲಿಸಿದಲ್ಲಿ ಇಂದು ನಿಮ್ಮ ಅನುಭವದಲ್ಲಿ ಏನುಬದಲಾವಣೆಯಾಗಿದೆ? ಬಹಳ ಒತ್ತಡ ಇರಬಹುದಲ್ಲವೇ? ಮಾನಸಿಕ ಒತ್ತಡ ಇರಬಹುದು? ಕುಟುಂಬದ ಚಿಂತೆ, ಕೊರೊನಾ ವಾತಾವರಣ, ಜನರಿಂದ ಒತ್ತಡ, ಬೇಡಿಕೆ? ಏನೇನಾಗುತ್ತದೆ.

ದಿನೇಶ್: ಸರ್ ನಮಗೆ ಚಿಂತೆಯೇನೂ ಇಲ್ಲ. ನಮ್ಮಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ, ನಮ್ಮಆಮ್ಲಜನಕದಿಂದ ಯಾರದೇ ಜೀವನ ಉಳಿಯುತ್ತದೆಎಂದರೆ ಬಹಳ ಹೆಮ್ಮೆಯೆನಿಸುತ್ತದೆ.

ಮೋದಿಯವರು: ಬಹಳ ಉತ್ತಮ ರೀತಿಯಲ್ಲಿ ನಿಮ್ಮಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ. ಇಂದು ಈಮಹಾಮಾರಿಯ ಸಂದರ್ಭದಲ್ಲಿ ಜನರು ನಿಮ್ಮ ಕೆಲಸದಮಹತ್ವವನ್ನು ಗಮನಿಸುತ್ತಿದ್ದಾರೆ. ಇದರ ಬಗ್ಗೆ ಈ ಹಿಂದೆಅಷ್ಟೊಂದು ಪರಿಗಣನೆ ಇರಲಿಲ್ಲ. ಇಂದು ನಿಮ್ಮ ಕೆಲಸದಬಗ್ಗೆ ಮತ್ತು ನಿಮ್ಮ ಬಗ್ಗೆ ಅವರ ಭಾವನೆಗಳುಬದಲಾಗಿವೆಯೇ?

ದಿನೇಶ್: ಹೌದು ಸರ್, ಈ ಹಿಂದೆ ಆಮ್ಲಜನಕದ ಟ್ಯಾಂಕರ್ಚಾಲಕರು ಎಲ್ಲಿಯೇ ವಾಹನ ದಟ್ಟಣೆಯ್ಲಲಿಸಿಲುಕಿರುತ್ತಿದ್ದೆವು ಆದರೆ ಇಂದು ಸರ್ಕಾರ ಕೂಡ ನಮಗೆಬಹಳ ಸಹಾಯ ಮಾಡುತ್ತಿದೆ. ನಾವು ಎಲ್ಲಿಗೆಪಯಣಿಸಿದರೂ ಎಷ್ಟು ಬೇಗ ತಲುಪಿ ಜನರ ಜೀವಉಳಿಸಬಲ್ಲೆವು ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆಸರ್. ಊಟ ತಿಂಡಿ ಸಿಗಲಿ ಸಿಗದಿರಲಿ, ಯಾವುದೇಸಮಸ್ಯೆ ಬರಲಿ ನಾವು ಆಸ್ಪತ್ರೆಗೆ ಟ್ಯಾಂಕರ್ ತೆಗೆದುಕೊಂಡುತಲುಪಿದಾಗ ಜನರು ನಮ್ಮನ್ನು ನೋಡಿ ಆಸ್ಪತ್ರೆಯವರುಮತ್ತು ರೋಗಿಯ ಬಂಧುಗಳು ವಿಜಯದ ವಿ ಸಂಕೇತತೋರುತ್ತಾರೆ.

ಮೋದಿಯವರು: ಹೌದಾ ವಿಕ್ಟರಿಯ ವಿ ಸಂಕೇತತೋರುತ್ತಾರಾ?

ದಿನೇಶ್: ಹೌದು ಸರ್! ವಿ ಸಂಕೇತ ಇಲ್ಲ ಹೆಬ್ಬೆಟ್ಟಿನಸಂಕೇತ ತೋರಿದಾಗ ನಮಗೆ ಜೀವನದಲ್ಲಿಯಾವುದಾದರೂ ಒಳ್ಳೆ ಕೆಲಸ ಮಾಡಿದುದರಿಂದಲೇ ಈಜೀವ ಉಳಿಸುವ ಅವಕಾಶ ದೊರೆತಿದೆ ಎಂದುಸಮಾಧಾನವಾಗುತ್ತದೆ

ಮೋದಿಯವರು: ಚಾಲನೆಯ ಸುಸ್ತುನಿರಾಳವಾಗಬಹುದು

ದಿನೇಶ್: ಹೌದು ಸರ್. ಹೌದು ಸರ್

ಮೋದಿಯವರು:  ಮನೆಗೆ ಬಂದ ಮೇಲೆ ಮಕ್ಕಳೊಂದಿಗೆಈ ವಿಷಯಗಳನ್ನು ಹಂಚಿಕೊಳ್ಳುತ್ತೀರಾ?

ದಿನೇಶ್: ಇಲ್ಲ ಸರ್, ಮಕ್ಕಳು ಗ್ರಾಮದಲ್ಲಿರುತ್ತಾರೆ. ಇಲ್ಲಿನಾವು INOX Air Product ಚಾಲಕನ ಕೆಲಸಮಾಡುತ್ತಿದ್ದೇವೆ. 8-9 ತಿಂಗಳ ನಂತರ ಮನೆಗೆಹೋಗುತ್ತೇನೆ.

ಮೋದಿಯವರು: ಯಾವಾಗಲಾದರೂ ದೂರವಾಣಿ ಕರೆಮಾಡಿ ಮಕ್ಕಳೊಂದಿಗೆ ಮಾತಾಡುತ್ತೀರಲ್ಲವೆ?

ದಿನೇಶ್: ಹಾಂ ಸರ್ ಮಾತಾಡುತ್ತೇನೆ.

ಮೋದಿಯವರು: ಆಗ ಅವರ ಮನದಲ್ಲಿ ಅಪ್ಪಾ ಇಂಥಸಮಯದಲ್ಲಿ ಹುಷಾರಾಗಿರಿ ಎಂಬ ಭಾವನೆಇರಬಹುದಲ್ಲವೇ?

ದಿನೇಶ್: ಅಪ್ಪಾ ಕೆಲಸ ಮಾಡಿ ಆದರೆ ಸುರಕ್ಷತೆ ವಹಿಸಿಎಂದು ಹೇಳುತ್ತಾರೆ. ನಮ್ಮ ಮಾನ್ಗಾಂ ವ್ ಘಟಕ ಕೂಡಇದೆ. ಐನಾಕ್ಸ್ ನಮಗೆ ಬಹಳ ಸಹಾಯ ಮಾಡುತ್ತದೆ.

ಮೋದಿ – ಒಳ್ಳೆಯದು. ದಿನೇಶ್ ಅವರೆ ನನಗೂ ಕೂಡಾಬಹಳ ಸಂತೋಷವಾಯಿತು. ನಿಮ್ಮ ಮಾತುಗಳನ್ನು ಕೇಳಿ, ಮತ್ತು ಕೊರೋನಾ ವಿರುದ್ಧದ ಈ ಹೋರಾಟದಲ್ಲಿಎಂತೆಂತಹ ಜನರು, ಯಾವ ಯಾವ ರೀತಿಯಲ್ಲಿ ಕೆಲಸಮಾಡುತ್ತಿದ್ದಾರೆಂದು ದೇಶದ ಜನತೆಗೆ ಕೂಡಾ ತಿಳಿದುಬರುತ್ತದೆ. ಜನರ ಜೀವ ಉಳಿದರೆ ಸಾಕೆಂದು ನೀವು 8-9 ತಿಂಗಳುಗಳ ಕಾಲ ನಿಮ್ಮ ಮಕ್ಕಳನ್ನು ಭೇಟಿ ಮಾಡುತ್ತಿಲ್ಲ, ಕುಟುಂಬದವರನ್ನು ಭೇಟಿ ಮಾಡುತ್ತಿಲ್ಲ. ದೇಶದ ಜನತೆ ಈವಿಷಯ ಕೇಳಿದಾಗ, ಈ ಹೋರಾಟವನ್ನು ನಾವುಗೆಲ್ಲುತ್ತೇವೆಂದು ದೇಶಕ್ಕೆ ಹೆಮ್ಮೆ ಉಂಟಾಗುತ್ತದೆ ಏಕೆಂದರೆ, ದಿನೇಶ್ ಉಪಾಧ್ಯಾಯರಂತಹ ಲಕ್ಷ ಲಕ್ಷ ಜನರುಸಂಪೂರ್ಣವಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ.

ದಿನೇಶ್- ಸರ್, ನಾವೆಲ್ಲರೂ ಕೊರೋನಾವನ್ನುಎಂದಾದರೊಂದು ದಿನ ಖಂಡಿತಾ ಸೋಲಿಸುತ್ತೇವೆ ಸರ್.

ಮೋದಿ – ಒಳ್ಳೆಯದು ದಿನೇಶ್ ಅವರೆ, ನಿಮ್ಮ ಈಭಾವನೆಯೇ ದೇಶದ ಶಕ್ತಿಯಾಗಿದೆ. ಬಹಳ ಧನ್ಯವಾದದಿನೇಶ್ ಅವರೆ, ನಿಮ್ಮ ಮಕ್ಕಳಿಗೆ ನನ್ನ ಆಶೀರ್ವಾದತಿಳಿಸಿ.

ದಿನೇಶ್- ಸರಿ ಸರ್. ನಮಸ್ಕಾರ

ಮೋದಿ -ಧನ್ಯವಾದ

ದಿನೇಶ್- ನಮಸ್ಕಾರ ನಮಸ್ಕಾರ

ಮೋದಿ -ಧನ್ಯವಾದ

ಸ್ನೇಹಿತರೆ, ದಿನೇಶ್ ಅವರು ಹೇಳಿದಂತೆ, ಒಬ್ಬ ಟ್ಯಾಂಕರ್ಚಾಲಕ ಆಮ್ಲಜನಕ(tanker driver oxygen) ತೆಗೆದುಕೊಂಡು ಆಸ್ಪತ್ರೆ ತಲುಪಿದಾಗ ಅವರು ಪರಮಾತ್ಮಕಳುಹಿಸಿಕೊಟ್ಟ ದೂತನಂತೆಯೇ ಕಂಡುಬರುತ್ತಾರೆ. ಈಕೆಲಸ ಎಷ್ಟು ಜವಾಬ್ದಾರಿಯಿಂದ ಕೂಡಿರುತ್ತದೆ ಮತ್ತುಇದರಲ್ಲಿ ಎಷ್ಟು ಮಾನಸಿಕ ಒತ್ತಡ ಕೂಡಾ ಇರುತ್ತದೆ ಎಂದುನಾವು ಅರ್ಥ ಮಾಡಿಕೊಳ್ಳಬಲ್ಲೆವು.

ಸ್ನೇಹಿತರೆ, ಸವಾಲಿನ ಈ ಸಮಯದಲ್ಲಿ, ಆಮ್ಲಜನಕದರವಾನೆಯನ್ನು ಸುಲಭಗೊಳಿಸುವುದಕ್ಕಾಗಿ ಭಾರತೀಯರೈಲ್ವೇ ಕೂಡಾ ಮುಂದೆ ಬಂದಿದೆ. ಆಕ್ಸಿಜನ್ ಎಕ್ಸ್ ಪ್ರೆಸ್, ಆಕ್ಸಿಜನ್ ರೈಲ್ ಇವು ರಸ್ತೆಯ ಮೇಲೆ ಸಾಗುವ ಆಕ್ಸಿಜನ್ಟ್ಯಾಂಕರ್ ಗಳಿಗಿಂತ ಅಧಿಕ ವೇಗದಲ್ಲಿ, ಅತ್ಯಂತ ಹೆಚ್ಚುಪ್ರಮಾಣದಲ್ಲಿ ಆಮ್ಲಜನಕವನ್ನು ದೇಶದ ಮೂಲೆಮೂಲೆಗೆ ತಲುಪಿಸಿದೆ. ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ಅನ್ನುಸಂಪೂರ್ಣವಾಗಿ ಮಹಿಳೆಯರು ಚಾಲನೆಮಾಡುತ್ತಿದ್ದಾರೆಂದು ಕೇಳಿ, ತಾಯಂದಿರಿಗೆ, ಸೋದರಿಯರಿಗೆ ಹೆಮ್ಮೆ ಎನಿಸುತ್ತದೆ.  ದೇಶದ ಪ್ರತಿಯೊಬ್ಬಮಹಿಳೆಗೂ ಹಮ್ಮೆ ಎನಿಸುತ್ತದೆ. ಇಷ್ಟೇ ಅಲ್ಲ, ಪ್ರತಿಯೊಬ್ಬಭಾರತೀಯನಿಗೂ ಹೆಮ್ಮೆಯೆನಿಸುತ್ತದೆ. ನಾನುಆಕ್ಸಿಜನ್ಎಬಕ್ಸ್ ಪ್ರೆಸ್ ನ ಓರ್ವ ಲೋಕೋ ಪೈಲಟ್ಶಿರೀಷಾ ಗಜನಿ ಅವರನ್ನು ಮನ್ ಕಿ ಬಾತ್ ಗೆಆಹ್ವಾನಿಸಿದ್ದೇನೆ.

ಮೋದಿ – ಶಿರೀಷಾ ಅವರೆ ನಮಸ್ಕಾರ

ಶಿರೀಷಾ – ನಮಸ್ಕಾರ ಸರ್. ಹೇಗಿದ್ದೀರಿ?

ಮೋದಿ – ನಾನು ಚೆನ್ನಾಗಿದ್ದೇನೆ. ಶಿರೀಷಾ ಅವರೆ, ನೀವುರೈಲ್ವೇ ಪೈಲಟ್ ಆಗಿ ಕೆಲಸ ಮಾಡುತ್ತಿದ್ದೀರೆಂದು ನಾನುಕೇಳಿದ್ದೇನೆ ಮತ್ತು ನಿಮ್ಮ ಇಡೀ ಮಹಿಳಾ ತಂಡ ಈಆಕ್ಸಿಜನ್ ಎಕ್ಸ್ ಪ್ರೆಸ್ ಚಾಲನೆ ಮಾಡುತ್ತಿದೆಯೆಂದು ನನಗೆತಿಳಿಸಲಾಗಿದೆ. ಶಿರೀಷಾ ಅವರೆ ನೀವು ಬಹಳ ಉತ್ತಮಕೆಲಸ ಮಾಡುತ್ತಿರುವಿರಿ. ಕೊರೋನಾ ಕಾಲದಲ್ಲಿನಿಮ್ಮಂತಹ ಅನೇಕ ಮಹಿಳೆಯರು ಮುಂದೆ ಬಂದುಕೊರೋನಾದೊಂದಿಗಿನ ಹೋರಾಟದಲ್ಲಿ ದೇಶಕ್ಕೆ ಶಕ್ತಿತುಂಬಿದ್ದೀರಿ. ನೀವು ಕೂಡಾ ನಾರಿ ಶಕ್ತಿಯ ಒಂದು ಬಹುದೊಡ್ಡ ಉದಾಹರಣೆಯಾಗಿರುವಿರಿ. ಈ ಪ್ರೇರಣೆ ನಿಮಗೆದೊರೆಯುತ್ತಿರುವುದು ಎಲ್ಲಿಂದ ಎನ್ನುವುದನ್ನು ದೇಶತಿಳಿದುಕೊಳ್ಳಲು ಬಯಸುತ್ತದೆ, ನಾನು ತಿಳಿದುಕೊಳ್ಳಲುಬಯಸುತ್ತೇನೆ.

ಶಿರೀಷಾ – ಸರ್, ನನಗೆ ಪ್ರೇರಣೆ ನನ್ನ ತಾಯಿತಂದೆಯರಿಂದ ದೊರೆಯುತ್ತದೆ. ನನ್ನ ತಂದೆ ಸರ್ಕಾರಿಉದ್ಯೋಗಿ ಸರ್. ವಾಸ್ತವದಲ್ಲಿ ನನಗೆ ಇಬ್ಬರುಅಕ್ಕಂದಿರಿದ್ದಾರೆ ಸರ್. ನಾವು ಮೂವರು ಸದಸ್ಯರು, ಕೇವಲ ಮಹಿಳೆಯರು. ಆದರೆ ನನ್ನ ತಂದೆ ಕೆಲಸಮಾಡುವುದಕ್ಕೆ ಬಹಳ ಪ್ರೋತ್ಸಾಹ ನೀಡುತ್ತಾರೆ ಸರ್. ನನ್ನದೊಡ್ಡ ಅಕ್ಕ ಬ್ಯಾಂಕೊಂದರಲ್ಲಿ ಸರ್ಕಾರಿಉದ್ಯೋಗಮಾಡುತ್ತಿದ್ದಾಳೆ ಮತ್ತು ನಾನು ರೈಲ್ವೆಯಲ್ಲಿನಿಯೋಜನೆಗೊಂಡಿದ್ದೇನೆ. ನನ್ನ ತಾಯಿತಂದೆ ನನಗೆಪ್ರೋತ್ಸಾಹ ನೀಡುತ್ತಾರೆ. (Actually I am having two elder sister, sir. We are three members, ladies only but my father giving very encourage to work. My first sister doing government job in bank and I am settled in railway. My parents only encourage me.)

ಮೋದಿ – ಒಳ್ಳೆಯದು ಶಿರೀಷಾ ಅವರೆ, ನೀವು ಸಾಧಾರಣದಿನಗಳಲ್ಲಿ ಕೂಡಾ ರೈಲ್ವೇಗೆ ನಿಮ್ಮ ಸೇವೆ ಸಲ್ಲಿಸಿದ್ದೀರಿ. ಟ್ರೈನ್ ಅನ್ನು ಸಾಧಾರಣವಾಗಿ ಚಾಲನೆ ಮಾಡಿದ್ದೀರಿಆದರೆ, ಒಂದೆಡೆ ಆಮ್ಲಜನಕಕ್ಕೆ ಇಷ್ಟೊಂದು ಬೇಡಿಕೆಇರುವಾಗ, ಮತ್ತು ನೀವು ಆಮ್ಲಜನಕವನ್ನುಕೊಂಡೊಯ್ಯುವಾಗ ಸ್ವಲ್ಪ ಜವಾಬ್ದಾರಿಯುತಕೆಲಸವಲ್ಲವೇ, ಸ್ವಲ್ಪ ಹೆಚ್ಚಿನ ಜವಾಬ್ದಾರಿ ಇರುತ್ತದೆಅಲ್ಲವೇ? ಸಾಮಾನ್ಯ ಸರಕುಗಳನ್ನು ಕೊಂಡೊಯ್ಯುವುದುಬೇರೆ, ಆಮ್ಲಜನಕವಂತೂ ಬಹಳ ಸೂಕ್ಷ್ಮವೂ ಆಗಿರುತ್ತದೆ, ಇವೆಲ್ಲ ನಿಮ್ಮ ಅನುಭವಕ್ಕೆ ಬಂದಿವೆಯೇ?

ಶಿರೀಷಾ- ಈ ಕೆಲಸ ಮಾಡುವುದಕ್ಕೆ ನನಗೆಸಂತೋಷವೆನಿಸಿತು. ಆಮ್ಲಜನಕ ವಿಶೇಷ (Oxygen special) ನೀಡುವ ಸಮಯದಲ್ಲಿ ಎಲ್ಲಾ ವಿಷಯಗಳನ್ನೂಗಮನಿಸಲಾಯಿತು, ಸುರಕ್ಷತೆ, ರಚನೆ, ಎಲ್ಲಿಯಾದರೂಸೋರಿಕೆಯಿದೆಯೇ ಎಂದು ಪರೀಕ್ಷಿಸಿ ನೋಡಲಾಯಿತು. ನಂತರ, ಭಾರತೀಯ ರೈಲ್ವೇ ಕೂಡಾ ಬಹಳ ಬೆಂಬಲನೀಡುತ್ತದೆ ಸರ್. ಈ ಆಕ್ಸಿಜನ್ ಚಾಲನೆ ಮಾಡುವುದಕ್ಕೆನನಗೆ ಹಸಿರು ಮಾರ್ಗ(green path) ನೀಡಲಾಯಿತು. ಈ ರೈಲು ಒಂದೂವರೆ ಗಂಟೆಯಲ್ಲಿ 125 ಕಿಲೋಮೀಟರ್ತಲುಪಿತು. ರೈಲ್ವೇ ಕೂಡಾ ಇಷ್ಟೊಂದು ಜವಾಬ್ದಾರಿತೆಗೆದುಕೊಂಡಿತು ಮತ್ತು ನಾನು ಕೂಡಾ ಜವಾಬ್ದಾರಿತೆಗೆದುಕೊಂಡೆ ಸರ್.

ಮೋದಿ – ವಾಹ್… ಒಳ್ಳೆಯದು ಶಿರೀಷಾ ಅವರೆ, ನಾನುನಿಮ್ಮನ್ನು ಬಹಳ ಅಭಿನಂದಿಸುತ್ತೇನೆ ಮತ್ತು ಮೂರೂಹೆಣ್ಣು ಮಕ್ಕಳಿಗೆ ಇಷ್ಟೊಂದು ಪ್ರೇರಣೆ ನೀಡಿರುವ ಮತ್ತುಅವರನ್ನು ಇಷ್ಟೊಂದು ಮುಂದೆ ತಂದಿರುವ ಈ ರೀತಿಯಪ್ರೋತ್ಸಾಹ ನೀಡಿರುವ ನಿಮ್ಮತಂದೆ- ತಾಯಿಗೆವಿಶೇಷವಾಗಿ ನನ್ನ ನಮನ ಸಲ್ಲಿಸುತ್ತೇನೆ. ಮತ್ತು ಇಂತಹತಾಯಿ ತಂದೆಗೆ ನಮಸ್ಕರಿಸುತ್ತೇನೆ ಮತ್ತು  ಈ ರೀತಿಯಲ್ಲಿದೇಶಕ್ಕೆ ಸೇವೆ ಸಲ್ಲಿಸಿದ ಮತ್ತು ಉತ್ಸಾಹವನ್ನೂತೋರಿರುವ ಸೋದರಿಯರೆಲ್ಲರಿಗೂ ನಮಸ್ಕರಿಸುತ್ತೇನೆ. ಬಹಳ ಬಹಳ ಧನ್ಯವಾದ ಶಿರೀಷಾ ಅವರೆ.

ಶಿರೀಷಾ -ಧನ್ಯವಾದ ಸರ್. ಥ್ಯಾಂಕ್ಯೂ ಸರ್. ನನಗೆ ನಿಮ್ಮಆಶೀರ್ವಾದ ಬೇಕು ಸರ್.

ಮೋದಿ –  ಪರಮಾತ್ಮನ ಆಶೀರ್ವಾದ ಸದಾ ನಿಮ್ಮಮೇಲಿರಲಿ, ನಿಮ್ಮ ತಾಯಿತಂದೆಯ ಆಶೀರ್ವಾದವಿರಲಿ. ಧನ್ಯವಾದ.

ಶಿರೀಷಾ -ಧನ್ಯವಾದ ಸರ್.

ಸ್ನೇಹಿತರೆ, ನಾವು ಈಗಷ್ಟೇ ಶಿರೀಷಾ ಅವರ ಮಾತುಗಳನ್ನುಕೇಳಿದೆವು. ಅವರ ಅನುಭವ ಪ್ರೇರಣೆಯನ್ನೂ ನೀಡುತ್ತದೆ, ಭಾವುಕರನ್ನಾಗಿ ಕೂಡಾ ಮಾಡುತ್ತದೆ. ವಾಸ್ತವದಲ್ಲಿ ಈಹೋರಾಟ ಎಷ್ಟು ದೊಡ್ಡದೆಂದರೆ, ಇದರಲ್ಲಿ ನಮ್ಮ ದೇಶವುರೈಲ್ವೇಯಂತೆಯೇ, ಜಲ, ಭೂಮಿ, ಆಕಾಶ, ಈ ಮೂರೂಮಾರ್ಗಗಳ ಮೂಲಕ ಕೆಲಸ ಮಾಡುತ್ತಿದೆ. ಒಂದೆಡೆ ಖಾಲಿಟ್ಯಾಂಕರ್ ಗಳನ್ನು ವಾಯುಪಡೆಯ ವಿಮಾನಗಳಮೂಲಕ ಆಮ್ಲಜನಕದ ಘಟಕಗಳವರೆಗೆ ತಲುಪಿಸುವಕೆಲಸ ನಡೆಯುತ್ತಿದೆ, ಮತ್ತೊಂದೆಡೆ ಹೊಸ ಆಮ್ಲಜನಕಘಟಕಗಳ ಸ್ಥಾಪನೆಯ ಕೆಲಸವನ್ನುಕೂಡಾಪೂರ್ಣಗೊಳಿಸಲಾಗುತ್ತಿದೆ. ಇದರೊಂದಿಗೆ, ವಿದೇಶಗಳಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು(oxygen concentrators)ಮತ್ತು ಕ್ರಯೋಜೆನಿಕ್ಟ್ಯಾಂಕರ್(cryogenic tankers) ಗಳನ್ನು ದೇಶಕ್ಕೆತರಲಾಗುತ್ತಿದೆ.  ಆದ್ದರಿಂದ, ಇದರಲ್ಲಿ ನೌಕಾಪಡೆಯೂಸೇರಿದೆ, ಭೂ ಸೇನೆಯೂ ಸೇರಿದೆ ಮತ್ತು ಡಿಆರ್ಡಿಒ(DRDO) ದಂತಹ ನಮ್ಮ ಸಂಸ್ಥೆಗಳೂ ತೊಡಗಿಕೊಂಡಿವೆ. ಇದರಲ್ಲಿ ನಮ್ಮ ಅನೇಕ ವಿಜ್ಞಾನಿಗಳು, ಉದ್ಯಮದ ತಜ್ಞರು, ಮತ್ತು ತಾಂತ್ರಿಕ ಸಿಬ್ಬಂದಿ ಕೂಡಾ ಸಮರೋಪಾದಿಯಲ್ಲಿಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಕೆಲಸಗಳನ್ನುತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಜಿಜ್ಞಾಸೆದೇಶವಾಸಿಗಳೆಲ್ಲರ ಮನದಲ್ಲಿದೆ. ಆದ್ದರಿಂದ, ನಮ್ಮೊಂದಿಗೆನಮ್ಮ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಪಟ್ನಾಯಕ್ಅವರು ಸೇರಲಿದ್ದಾರೆ.

ಮೋದಿ – ಪಟ್ನಾಯಕ್ ಅವರೆ, ಜೈ ಹಿಂದ್.

ಗ್ರೂಪ್ ಕ್ಯಾಪ್ಟನ್ :ಸರ್ ಜೈ ಹಿಂದ್. ಸರ್ ನಾನು ಗ್ರೂಪ್ಕ್ಯಾಪ್ಟನ್ ಎ.ಕೆ. ಪಟ್ನಾಯಕ್. ವಾಯು ಸೇನೆ ಸ್ಟೇಷನ್ಹಿಂಡನ್ ನಿಂದ ಮಾತನಾಡುತ್ತಿದ್ದೇನೆ.

ಮೋದಿ – ಪಟ್ನಾಯಕ್ ಅವರೆ, ಕೊರೋನಾದೊಂದಿಗಿನಹೋರಾಟದಲ್ಲಿ ನೀವು ಬಹು ದೊಡ್ಡ ಜವಾಬ್ದಾರಿನಿಭಾಯಿಸುತ್ತಿದ್ದೀರಿ. ವಿಶ್ವದೆಲ್ಲೆಡೆ ಹೋಗಿ ಟ್ಯಾಂಕರ್ತರುವುದು, ಟ್ಯಾಂಕರ್ ಇಲ್ಲಿಗೆ ತಲುಪಿಸುವುದು. ಓರ್ವಸೈನಿಕನಾಗಿ ಒಂದು ಭಿನ್ನ ರೀತಿಯ ಕೆಲಸವನ್ನು ನೀವುಮಾಡಿರುವಿರಿ. ಕೊಲ್ಲು ಇಲ್ಲವೇ ಮಡಿ ಎಂದುಓಡಬೇಕಾಗಿತ್ತು, ನೀವು ಇಂದು ಜೀವಗಳನ್ನು ಉಳಿಸಲುಓಡುತ್ತಿರುವಿರಿ. ನಿಮಗೆ ಹೇಗನಿಸುತ್ತಿದೆ ಎಂದು ನಾನುತಿಳಿಯಬಯಸುತ್ತೇನೆ.

ಗ್ರೂಪ್ ಕ್ಯಾಪ್ಟನ್- ಸರ್, ಈ ಸಂಕಷ್ಟದ ಸಮಯದಲ್ಲಿನಮ್ಮ ದೇಶವಾಸಿಗಳಿಗೆ ಸಹಾಯ ಮಾಡುತ್ತಿದ್ದೇನೆ ಇದುನಮ್ಮ ಅತಿದೊಡ್ಡ ಸೌಭಾಗ್ಯವಾಗಿದೆ ಸರ್ ಮತ್ತು ನಮಗೆಯಾವ ಅಭಿಯಾನ ದೊರೆತಿದೆಯೋ ಅದನ್ನು ನಾವುಉತ್ತಮವಾಗಿ ನಿಭಾಯಿಸುತ್ತಿದ್ದೇವೆ. ನಮ್ಮ ತರಬೇತಿಮತ್ತು ಬೆಂಬಲ ಸೇವೆಗಳು ನಮಗೆ ಸಂಪೂರ್ಣ ಸಹಾಯಮಾಡುತ್ತಿವೆ ಮತ್ತು ಅತ್ಯಂತ ಮುಖ್ಯವಾದವಿಷಯವೆಂದರೆ ಇದರಲ್ಲಿ ನಮಗೆ ದೊರೆತಿರುವ ವೃತ್ತಿಪರಸಂತೃಪ್ತಿ ಬಹಳ ಉನ್ನತ ಮಟ್ಟದ್ದಾಗಿದೆ ಮತ್ತುಇದರಿಂದಾಗಿಯೇ ನಿರಂತರ ಕಾರ್ಯಾಚರಣೆ ಮಾಡಲುನಮಗೆ ಸಾಧ್ಯವಾಗುತ್ತಿದೆ.

ಮೋದಿ – ನೀವು ಇಂದಿನ ದಿನಗಳಲ್ಲಿ ಏನೇನು ಪ್ರಯತ್ನಮಾಡುತ್ತಿರುವಿರೋ ಅದು ಕೂಡ ಅತ್ಯಂತ ಕಡಿಮೆಸಮಯದಲ್ಲಿ ಎಲ್ಲ ಕೆಲಸ ಮಾಡಬೇಕಾಗಿ ಬಂತು. ಇಂಥಸಮಯದಲ್ಲಿ ಹೇಗಿತ್ತು ಪರಿಸ್ಥಿತಿ

ಗ್ರೂಪ್ ಕ್ಯಾಪ್ಟನ್-ಸರ್, ಕಳೆದ ಒಂದು ತಿಂಗಳಿನಿಂದನಿರಂತರವಾಗಿ ಆಮ್ಲಜನಕದ ಟ್ಯಾಂಕರ್ಗಳನ್ನು ಮತ್ತುದ್ರವ ರೂಪದ ಆಮ್ಲಜನಕದ ಕಂಟೈನರ್ ಗಳನ್ನುಸ್ಥಳೀಯವಾಗಿ ಮತ್ತು ಅಂತಾರಾಷ್ಟ್ರೀಯ ಮೂಲಗಳಿಂದಸಂಗ್ರಹಿಸುತ್ತಿದ್ದೇವೆ. ಸುಮಾರು 16 ಸಾವಿರ ಸಾರ್ಟಿಸ್ ಗೂಹೆಚ್ಚು ಏರ್ ಫೋರ್ಸ್ ಸಾಗಣೆ ಮಾಡಿದೆ. ಇದಕ್ಕಾಗಿ 3 ಸಾವಿರಕ್ಕೂ ಹೆಚ್ಚು ಕಿ ಮೀ ಹಾರಾಟ ಮಾಡಲಾಗಿದೆ. ಸುಮಾರು 160 ಅಂತಾರಾಷ್ಟ್ರೀಯ ಮಿಶನ್ಕೈಗೊಳ್ಳಲಾಗಿದೆ. ಹಿಂದೆ ಸ್ಥಳೀಯ ಆಮ್ಲಜನಕದಟ್ಯಾಂಕರ್ಗಆಳನ್ನು ತಲುಪಿಸಲು 2-3 ದಿನಗಳುಬೇಕಾಗುತ್ತಿದ್ದರೆ ಈಗ 2-3 ಗಂಟೆಗಳಲ್ಲಿತಲುಪಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಿಶನ್ನಲ್ಲಿಯೂ 24 ಗಂಟೆ ನಿರಂತರ ಕೆಲಸ ಮಾಡಿ ದೇಶಕ್ಕೆಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೆಚ್ಚೆಚ್ಚುಆಮ್ಲಜನಕದ ಸಿಲಿಂಡರ್ ತಲುಪಿಸುವ ಕೆಲಸವನ್ನು ಏರ್ಫೋರ್ಸ್ನಿಂ ದ ಮಾಡಲಾಗುತ್ತಿದೆ ಸರ್.

ಮೋದಿಯವರು: ಕ್ಯಾಪ್ಟನ್ ಅಂತಾರಾಷ್ಟ್ರೀಯ ಮಟ್ಟದಲ್ಲಿನಿಮಗೆ ಎಲ್ಲೆಲ್ಲಿ ಓಡಾಡಬೇಕಾಯಿತು.

ಗ್ರೂಪ್ ಕ್ಯಾಪ್ಟನ್: ಸರ್, ಕಡಿಮೆ ಅವಧಿಯ ಸೂಚನೆಮೇರೆಗೆ ನಮಗೆ ಸಿಂಗಪೂರ್, ದುಬೈ, ಬೆಲ್ಜಿಯಂ, ಜರ್ಮನ್ ಮತ್ತು ಬ್ರಿಟನ್ ಈ ಎಲ್ಲ ದೇಶಗಳಿಂದಇಂಡಿಯನ್ ಏರ್ ಫೋರ್ಸ್ ನ ವಿವಿಧ ಫ್ಲೀಟ್ ಗಳುIಐ-76, ಅ-17 ಮತ್ತು ಎಲ್ಲ ಇತರ ವಿಮಾನಗಳು ಅ-130  ಗಾಗಿ ಹಾರಾಟ ನಡೆಸಿದ್ದವು. ನಮ್ಮ ತರಬೇತಿ ಮತ್ತುಹುಮ್ಮಸ್ಸಿನಿಂದಾಗಿಯೇ ನಾವು ಸಕಾಲಕ್ಕೆ ಈ ಮಿಶನ್ಪೂರ್ಣಗೊಳಿಸಲು ಸಾಧ್ಯವಾಯಿತು ಸರ್.

ಮೋದಿ: ಈ ಬಾರಿ ಭೂ ಸೇನೆ, ವಾಯು ಸೇನೆ, ನೌಕಾಪಡೆಯ ಎಲ್ಲ ಸೈನಿಕರು ಈ ಕೊರೊನಾ ವಿರುದ್ಧದಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ದೇಶಹೆಮ್ಮೆಪಡಲಿದೆ. ಕ್ಯಾಪ್ಟನ್ ನೀವು ಕೂಡ ಬಹಳ ದೊಡ್ಡಜವಾಬ್ದಾರಿ ನಿರ್ವಹಿಸಿದ್ದೀರಿ. ಹಾಗಾಗಿ ನಿಮಗು ಕೂಡಾನಾನು ಅಭಿನಂದಿಸುತ್ತೇನೆ.

ಕ್ಯಾಪ್ಟನ್: ಧನ್ಯವಾದಗಳು ಸರ್. ನಾವು ತನುಮನದಿಂದಸಂಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ ಮತ್ತು ನನ್ನ ಮಗಳುಅದಿತಿ ಕೂಡ ನನ್ನ ಜೊತೆಗಿದ್ದಾಳೆ ಸರ್.

ಮೋದಿ: ತುಂಬಾ ಒಳ್ಳೇದು!

ಅದಿತಿ: ನಮಸ್ತೆ ಮೋದಿಯವರೆ

ಮೋದಿ: ನಮಸ್ತೆ ಮಗು… ನಮಸ್ತೆ ಅದಿತಿ, ನೀವು ಎಷ್ಟುವರ್ಷದವರು?

ಅದಿತಿ: ನಾನು 12 ವರ್ಷದವಳಾಗಿದ್ದೇನೆ. 8 ನೇತರಗತಿಯಲ್ಲಿ ಓದುತ್ತಿದ್ದೇನೆ.

ಮೋದಿ: ನಿಮ್ಮ ತಂದೆ ಹೊರಗಡೆ ಹೋದಾಗಸಮವಸ್ತ್ರದಲ್ಲಿರುತ್ತಾರೆಯೇ?

ಅದಿತಿ: ಹಾಂ! ಅವರ ಬಗ್ಗೆ ನನಗೆ ಬಹಳಹೆಮ್ಮೆಯೆನಿಸುತ್ತದೆ. ಅವರು ಇಷ್ಟೊಂದು ಮಹತ್ವಪೂರ್ಣಕೆಲಸ ಮಾಡುತ್ತಿರುವುದಕ್ಕೆ ಎಲ್ಲ ಕೊರೊನಾ ಪೀಡಿತರಿಗೆಸಹಾಯ ಮಾಡುತ್ತಿದ್ದಾರೆ, ಯಾವೆಲ್ಲ ದೇಶಗಳಿಂದಆಮ್ಲಜನಕದ ಟ್ಯಾಂಕರ್ ಗಳನ್ನು ತರುತ್ತಿದ್ದಾರೆ  ಎಂಬುದಕ್ಕೆಬಹಳ ಹೆಮ್ಮೆಯೆನಿಸುತ್ತದೆ.

ಮೋದಿ: ಆದರೆ ಮಗಳು ಅಪ್ಪನನ್ನು ಬಹಳ ಮಿಸ್ಮಾಡಿಕೊಳ್ಳುತ್ತಾಳಲ್ಲವೇ?

ಅದಿತಿ: ಹೌದು, ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಈ ಮಧ್ಯೆ ಅವರು ಮನೆಯಲ್ಲಿ ಇರುವುದುಕಡಿಮೆಯಾಗಿದೆ ಏಕೆಂದರೆ ಬಹಳ ಅಂತಾರಾಷ್ಟ್ರೀಯವಿಮಾನಗಳಲ್ಲಿ ಹಾರಾಟ ಮಾಡುತ್ತಿದ್ದಾರೆ ಮತ್ತುಕೊರೊನಾ ಪೀಡಿತರಿಗೆ ಸಕಾಲಕ್ಕೆ ಆಮ್ಲಜನಕದೊರೆಯಲೆಂದು, ಅವರ ಪ್ರಾಣ ಕಾಪಾಡಲೆಂದುಆಮ್ಲಜನಕದ ಕಂಟೈನರ್ಗಳನ್ನು, ಟ್ಯಾಂಕರ್ ಗಳನ್ನುಅವುಗಳ ಉತ್ಪಾದನಾ ಘಟಕಗಳಿಗೆ ತಲುಪಿಸುತ್ತಿದ್ದಾರೆ.

ಮೋದಿ: ಹಾಗಾದರೆ ಆಮ್ಲಜನಕದಿಂದಾಗಿ ಜೀವಉಳಿಸುತ್ತಿರುವ ವಿಷಯ ಈಗ ಮನೆ ಮನೆಗೆ ತಿಳಿದವಿಷಯವಾಗಿದೆಯಲ್ಲವೇ ಮಗು…

ಅದಿತಿ: ಹಾಂ.

ಮೋದಿ: ನಿಮ್ಮ ಸ್ನೇಹಿತರು, ನಿನ್ನ ಸಹಪಾಠಿಗಳು ನಿಮ್ಮತಂದೆ ಆಮ್ಲಜನಕದ ಸರಬರಾಜಿನ ಸೇವೆಯಲ್ಲಿತೊಡಗಿದ್ದಾರೆ ಎಂದು ತಿಳಿದು ನಿಮ್ಮನ್ನು ಬಹಳಆದರದಿಂದ ನೋಡುತ್ತಾರೆ ಅಲ್ಲವೆ?

ಅದಿತಿ: ಹಾಂ, ನನ್ನ ಎಲ್ಲ ಸ್ನೇಹಿತರು ನಿಮ್ಮ ತಂದೆಇಷ್ಟೊಂದು ಮಹತ್ವದ ಕೆಲಸ ಮಾಡುತ್ತಿದ್ದಾರೆ ಮತ್ತು ನಿನಗೆಬಹಳ ಹೆಮ್ಮೆ ಎನ್ನಿಸಬಹುದಲ್ಲವೇ ಎಂದು ಹೇಳುತ್ತಾರೆ. ಆಗ ನನಗೆ ಬಹಳ ಹೆಮ್ಮೆಯೆನ್ನಿಸುತ್ತದೆ. ನನ್ನ ಸಂಪೂರ್ಣಕುಟುಂಬ, ನನ್ನ ಅಜ್ಜಿ ತಾತ, ಎಲ್ಲರೂ ನನ್ನ ತಂದೆ ಬಗ್ಗೆಬಹಳ ಹೆಮ್ಮೆಪಡುತ್ತಾರೆ. ನನ್ನ ತಾಯಿ ಮತ್ತು ಆ ಎಲ್ಲವೈದ್ಯರು, ಅವರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಂಪೂರ್ಣ ಆರ್ಮ್ ಫೋರ್ಸ್, ನನ್ನ ಅಪ್ಪನಸ್ಕಾಡ್ರನ್ ನ ಎಲ್ಲ ಅಂಕಲ್ ಗಳು ಮತ್ತು ಸೇನೆ ಎಲ್ಲರೂಬಹಳ ಕೆಲಸ ಮಾಡುತ್ತಿದ್ದಾರೆ ಮತ್ತು ಕೊರೊನಾ ವಿರುದ್ಧದಈ ಹೋರಾಟವನ್ನು ಖಂಡಿತ ಗೆಲ್ಲುತ್ತಾರೆ ಎಂದು ನನಗೆವಿಶ್ವಾಸವಿದೆ.

ಮೋದಿ: ಹೆಣ್ಣು ಮಕ್ಕಳು ಮಾತಾಡಿದರೆ ಅವಳ ನಾಲಿಗೆಮೇಲೆ ಸರಸ್ವತಿ ವಾಸವಿರುತ್ತಾಳೆ ಎಂದು ನಮ್ಮಲ್ಲಿಹೇಳಲಾಗುತ್ತದೆ. ಖಂಡಿತ ನಾವು ಗೆಲ್ಲುತ್ತೇವೆ ಎಂದು ಅದಿತಿಹೇಳುತ್ತಿರಬೇಕಾದರೆ ಖಂಡಿತ ಇದು ದೇವರ ವಾಣಿಎನ್ನಬಹುದಾಗಿದೆ. ಅದಿತಿ ನೀವು ಈಗ ಆನ್ ಲೈನ್ ನಲ್ಲಿಓದುತ್ತಿರಬಹುದಲ್ಲವೇ?

ಅದಿತಿ: ಹಾಂ, ಈಗ ಎಲ್ಲವೂ ಆನ್ ಲೈನ್ ನಲ್ಲಿತರಗತಿಗಳು ನಡೆಯುತ್ತಿವೆ. ಈಗ ಮನೆಯಲ್ಲೂ ನಾವುಎಲ್ಲ ಬಗೆಯ ಮುಂಜಾಗೃತೆ ವಹಿಸುತ್ತಿದ್ದೇವೆ. ಎಲ್ಲಿಯೇಹೊರಗಡೆ ಹೋಗಬೇಕಾದರೆ ಡಬಲ್ ಮಾಸ್ಕ್ ಧರಿಸಿ ಎಲ್ಲಬಗೆಯ ನೈರ್ಮಲ್ಯ ಕಾಪಾಡಿಕೊಳ್ಳುವತ್ತಗಮನಹರಿಸುತ್ತಿದ್ದೇವೆ.

ಮೋದಿ: ಅದಿತಿ ನಿಮ್ಮ ಹವ್ಯಾಸಗಳೇನು? ನಿಮಗೆ ಏನುಇಷ್ಟ?

ಅದಿತಿ: ಈಜು ಮತ್ತು ಬಾಸ್ಕೆಟ್ ಬಾಲ್ ಆಡುವುದು ನನ್ನಹವ್ಯಾಸ ಆದರೆ ಈಗ ಕೊರೊನಾ ಸಮಯದಲ್ಲಿ ಅದುಬಂದ್ ಆಗಿದೆ. ಬೇಕಿಂಗ್ ಮತ್ತು ಕುಕಿಂಗ್ ನನ್ನಆಸಕ್ತಿಯಾಗಿದೆ. ನಾನು ಬೇಕಿಂಗ್ ಮತ್ತು ಕುಕಿಂಗ್ಮಾಡುತ್ತೇನೆ ಮತ್ತು ಅಪ್ಪ ಇಷ್ಟೆಲ್ಲ ಕೆಲಸ ಮಾಡಿ ಬಂದಾಗಅವರಿಗಾಗಿ ಕೇಕ್ ಮತ್ತು ಕುಕ್ಕೀಸ್ ತಯಾರಿಸುತ್ತೇನೆ.

ಮೋದಿ: ವಾವ್, ವ್ಹಾ.. ಒಳ್ಳೇದು ಅದಿತಿ, ಬಹಳ ದಿನಗಳನಂತರ ನಿಮಗೆ ಅಪ್ಪನ ಜೊತೆ ಸಮಯ ದೊರೆತಿದೆ. ಕ್ಯಾಪ್ಟನ್ ತುಂಬಾ ಸಂತೋಷವಾಯಿತು. ನಿಮಗೂಅನಂತ ಅಭಿನಂದನೆಗಳು. ನಿಮಗೆ ಅಭಿನಂದನೆಸಲ್ಲಿಸುತ್ತೇನೆ ಎಂದರೆ ನಮ್ಮ ಭೂ ಸೇನೆ, ವಾಯು ಸೇನೆಮತ್ತು ನೌಕಾಪಡೆಯ ಸಮಸ್ತ ಯೋಧರಿಗೂ ಸಲ್ಯೂಟ್ಮಾಡುತ್ತೇನೆ. ಧನ್ಯವಾದ ಸೋದರ.

ಕ್ಯಾಪ್ಟನ್: ಧನ್ಯವಾದಗಳು ಸರ್

ಸ್ನೇಹಿತರೆ, ನಮ್ಮ ಯೋಧರು ಮಾಡಿದ ಕೆಲಸಕ್ಕೆ ದೇಶವೇನಮಿಸುತ್ತದೆ. ಇದೇ ರೀತಿ ಲಕ್ಷಾಂತರ ಜನರು ಹಗಲು ರಾತ್ರಿದುಡಿಯುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸ ಅವರದೈನಂದಿನ ಕೆಲಸದ ಭಾಗವಲ್ಲ. ಇಂಥ ವಿಪತ್ತನ್ನು ಜಗತ್ತು100 ವರ್ಷಗಳ ನಂತರ ಎದುರಿಸುತ್ತಿದೆ. ಒಂದುಶತಮಾನದ ನಂತರ ಇಂಥ ದೊಡ್ಡ ಸಂಕಷ್ಟ ಬಂದಿದೆ, ಹಾಗಾಗಿ ಇಂಥ ಕೆಲಸದ ಅನುಭವ ಯಾರ ಬಳಿಯೂಇರಲಿಲ್ಲ.

ಇದರ ಹಿಂದೆ ದೇಶಸೇವೆಯ ಛಲವಿದೆ ಮತ್ತು ಒಂದುಸಂಕಲ್ಪಶಕ್ತಿಯಿದೆ. ಇದರಿಂದಲೇ ಹಿಂದೆಂದೂ ಆಗದಕೆಲಸವನ್ನು ದೇಶ ಮಾಡಿದೆ. ನೀವು ಅದನ್ನುಅಂದಾಜಿಸಬಹುದು. ಸಾಮಾನ್ಯವಾಗಿ ನಮ್ಮ ಬಳಿ ದಿನಕ್ಕೆ900 ಮೆಟ್ರಿಕ್ ಟನ್ ದ್ರಗವರೂಪದ ವೈದ್ಯಕೀಯಆಮ್ಲಜನಕದ ಉತ್ಪತ್ತಿಯಾಗುತ್ತಿತ್ತು. ಈಗ ಅದು ಶೇ 10 ಕ್ಕಿಂತಲೂ ಹೆಚ್ಚಾಗಿ ಪ್ರತಿದಿನಕ್ಕೆ 9500 ಮೆಟ್ರಿಕ್ ಟನ್ನಷ್ಟು ಉತ್ಪಾದನೆಯಾಗುತ್ತಿದೆ. ಈ ಆಮ್ಲಜನಕವನ್ನುನಮ್ಮ ಯೋಧರು ದೇಶದ ದೂರದ ಪ್ರದೇಶಗಳಿಗೆತಲುಪಿಸುತ್ತಿದ್ದಾರೆ.

ನನ್ನ ಪ್ರಿಯ ದೇಶಬಾಂಧವರೆ, ಆಮ್ಲಜನಕ ತಲುಪಿಸುವಲ್ಲಿದೇಶದಲ್ಲಿ ಎಷ್ಟೆಲ್ಲ ಪ್ರಯತ್ನಗಳು ನಡೆಯುತ್ತಿವೆ. ಎಷ್ಟೊಂದು ಜನರು ಕೈಜೋಡಿಸುತ್ತಿದ್ದಾರೆ, ನಾಗರಿಕನಮಟ್ಟದಲ್ಲಿ ಈ ಎಲ್ಲ ಕೆಲಸಗಳು ಪ್ರೇರಣಾದಾಯಕವಾಗಿವೆ. ಒಂದು ತಂಡದ ರೂಪದಲ್ಲಿ ಎಲ್ಲರೂ ತಮ್ಮ ಕರ್ತವ್ಯನಿಭಾಯಿಸಿದ್ದಾರೆ. ನನಗೆ ಬೆಂಗಳೂರಿನ ಉರ್ಮಿಳಾ ಅವರಪತಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದಾರೆ ಮತ್ತು ಅವರುಇಷ್ಟೊಂದು ಸವಾಲುಗಳ ಮಧ್ಯೆ ಅವರು ನಿರಂತರವಾಗಿಕೆಲಸ ಮಾಡುತ್ತಿದ್ದಾರೆ ಎಂದು ನನಗೆ ತಿಳಿಸುತ್ತಾರೆ.

ಸ್ನೇಹಿತರೆ, ಕೊರೊನಾದ ಆರಂಭದಲ್ಲಿ ದೇಶದಲ್ಲಿ ಒಂದೇಪರೀಕ್ಷಾ ಪ್ರಯೋಗಾಲಯವಿತ್ತು. ಆದರೆ ಇಂದುಎರಡೂವರೆ ಸಾವಿರಕ್ಕಿಂತ ಹೆಚ್ಚು ಪ್ರಯೋಗಾಲಯಗಳುಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ದಿನಕ್ಕೆ ಕೇವಲ100 ಪರೀಕ್ಷೆಗಳು ನಡೆಯುತ್ತಿದ್ದವು ಇಂದು ದಿನಕ್ಕೆ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ಇಲ್ಲಿವರೆಗೆದೇಶದಲ್ಲಿ 33 ಕೋಟಿಗೂ ಹೆಚ್ಚು ಮಾದರಿ ಪರೀಕ್ಷೆನಡೆಸಲಾಗಿದೆ. ಇಂಥ ಸ್ನೇಹಿತರಿಂದಲೇ ಇಷ್ಟೊಂದುಅಗಾಧ ಕೆಲಸ ಸಾಧ್ಯವಾಗುತ್ತಿದೆ. ಮುಂಚೂಣಿಕಾರ್ಯಕರ್ತರು ಮಾದರಿ ಸಂಗ್ರಹದ ಕೆಲಸದಲ್ಲಿತೊಡಗಿದ್ದಾರೆ. ಸೋಂಕಿತರ ಮಧ್ಯೆ ಹೋಗುವುದು, ಅವರಮಾದರಿ ಸಂಗ್ರಹಿಸುವುದು ಎಂಥ ದೊಡ್ಡ ಸೇವೆ ಅಲ್ಲವೆ. ತಮ್ಮ ಸುರಕ್ಷತೆಗಾಗಿ ಈ ಸ್ನೇಹಿತರು ಇಂಥ ಬಿಸಿಲಿನತಾಪದಲ್ಲಿಯೂ ನಿರಂತರವಾಗಿ ಪಿಪಿಇ ಕಿಟ್ಧರಿಸಬೇಕಾಗಿರುತ್ತದೆ. ತದನಂತರ ಮಾದರಿಪ್ರಯೋಗಾಲಯಕ್ಕೆ ತಲುಪುತ್ತದೆ. ಆದ್ದರಿಂದಲೇ ನಾನುನಿಮ್ಮ ಸಲಹೆ ಸೂಚನೆಗಳನ್ನು ಓದುವಾಗ ಈ ಸ್ನೇಹಿತರಪ್ರಸ್ತಾಪ ಮಾಡಬೇಕೆಂದು ನಿರ್ಧರಿಸಿದೆ. ಇವರಅನುಭವದಿಂದ ನಮಗೂ ಬಹಳಷ್ಟು ಕಲಿಯಲುಸಿಗುತ್ತದೆ. ಹಾಗಾದರೆ ಬನ್ನಿ ದೆಹಲಿಯಲ್ಲಿ ಲ್ಯಾಬ್ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿರುವ ನಮ್ಮ ಸ್ನೇಹಿತಪ್ರಕಾಶ್ ಕಾಂಡ್ಪಾಈಲ್ ಅವರೊಂದಿಗೆ ಮಾತನಾಡೋಣ.

ಮೋದಿ – ಪ್ರಕಾಶ್ಅವರೇ ನಮಸ್ಕಾರ

ಪ್ರಕಾಶ್- ಗೌರವಾದರಣೀಯ ಪ್ರಧಾನಮಂತ್ರಿಯವರೇನಮಸ್ಕಾರ

ಮೋದಿ – ಪ್ರಕಾಶ್ಅವರೆ, ಎಲ್ಲಕ್ಕಿಂತ ಮೊದಲು ನೀವುಮನ್ ಕಿ ಬಾತ್ ನ ನಮ್ಮ ಎಲ್ಲಾ ಶ್ರೋತೃಗಳಿಗೆ ನಿಮ್ಮ ಬಗ್ಗೆತಿಳಿಸಿಕೊಡಿ. ನೀವು ಎಷ್ಟು ಕಾಲದಿಂದ ಈ ಕೆಲಸಮಾಡುತ್ತಿರುವಿರಿ ಮತ್ತು ಕೊರೋನಾದ ಸಮಯದಲ್ಲಿನಿಮ್ಮ ಅನುಭವ ಹೇಗಿದೆ, ಏಕೆಂದರೆ ದೇಶದ ಇಂತಹಜನರಿಗೆ ಈ ರೀತಿಯಲ್ಲಿ ಇದು ಟಿವಿಯಲ್ಲಿ ಕಾಣಿಸುವುದಿಲ್ಲಅಥವಾ ದಿನಪತ್ರಿಕೆಗಳಲ್ಲಿ ಕಂಡುಬರುವುದಿಲ್ಲ. ಆದರೂಕೂಡಾ ಓರ್ವ ಋಷಿಯ ರೀತಿಯಲ್ಲಿ ಲ್ಯಾಬ್ ನಲ್ಲಿದ್ದುಕೊಂಡು ಕೆಲಸ ಮಾಡುತ್ತಿರುವಿರಿ. ನೀವು ಈ ಕುರಿತುಹೇಳಿದಾಗ, ದೇಶದಲ್ಲಿ ಯಾವ ರೀತಿಯಲ್ಲಿ ಕೆಲಸನಡೆಯುತ್ತಿದೆ ಎನ್ನುವ ಕುರಿತು ದೇಶವಾಸಿಗಳಿಗೆತಿಳಿದುಬರುತ್ತದೆ.

ಪ್ರಕಾಶ್-  ನಾನು ದೆಹಲಿ ಸರ್ಕಾರದ ಸ್ವಾಯತ್ತಸಂಸ್ಥೆಯಾದ Institute of Liver and Biliary Sciences ಹೆಸರಿನ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸಮಾಡುತ್ತಿದ್ದೇನೆ. ನನ್ನ ಆರೋಗ್ಯ-ಕ್ಷೇತ್ರದ ಅನುಭವ 22 ವರ್ಷಗಳದ್ದು. ಐಎಲ್ ಬಿ ಎಸ್ ಗಿಂತ ತ ಮೊದಲು ಕೂಡಾನಾನು ದೆಹಲಿಯ ಅಪೋಲೋ ಆಸ್ಪತ್ರೆ, ರಾಜೀವ್ ಗಾಂಧಿಕ್ಯಾನ್ಸರ್ ಆಸ್ಪತ್ರೆ ರೋಟರ್ ಬ್ಲಡ್ ಬ್ಯಾಂಕ್ ನಂತಹಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಸರ್, ನಾನುಎಲ್ಲಾ ಜಾಗದಲ್ಲೂ ರಕ್ತ-ಕೋಶ ವಿಭಾಗದಲ್ಲಿ ನನ್ನ ಸೇವೆಸಲ್ಲಿಸಿದ್ದೇನೆ, ಆದರೆ ಕಳೆದ ವರ್ಷ 2020 ರ ಏಪ್ರಿಲ್ 1 ರಿಂದ ನಾನು ILBS Virology Department ಆಧರಿತCovid testing lab ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಸ್ಸಂದೇಹವಾಗಿ, ಕೋವಿಡ್ ಮಹಾಮಾರಿಯಿಂದಾಗಿಆರೋಗ್ಯ ಮತ್ತು ಆರೋಗ್ಯ ಸಂಬಂಧಿತ ಎಲ್ಲಾ ಸಾಧನ- ಸಂಪನ್ಮೂಲಗಳ ಮೇಲೆ ಅತ್ಯಧಿಕ ಒತ್ತಡ ಬಿತ್ತು, ಆದರೆ ಈಸಂಘರ್ಷದ ಅವಧಿಯನ್ನು ನಾನು ನಿಜವಾದ ಅರ್ಥದಲ್ಲಿಒಂದು ಅವಕಾಶವೆಂದು ಭಾವಿಸುತ್ತೇನೆ. ರಾಷ್ಟ್ರ, ಮಾನವೀಯತೆ, ಸಮಾಜ ನಮ್ಮಿಂದ ಅಧಿಕ ಜವಾಬ್ದಾರಿ, ಸಹಯೋಗ, ನಮ್ಮಿಂದ ಹೆಚ್ಚು ಸಾಮಥ್ರ್ಯ ನಮ್ಮಿಂದ ಹೆಚ್ಚುದಕ್ಷತೆಯ ಪ್ರದರ್ಶನ ನಿರೀಕ್ಷಿಸುತ್ತದೆ ಮತ್ತು ಆಶಿಸುತ್ತದೆ. ಅಲ್ಲದೇ ಸರ್, ನಾವು ನಮ್ಮದೇಶದ, ಮಾನವೀಯತೆಯ, ಸಮಾಜದ ಅಪೇಕ್ಷೆ ಮತ್ತು ನಿರೀಕ್ಷೆಗೆ ಅನುಗುಣವಾಗಿನಮ್ಮ ಮಟ್ಟದಲ್ಲಿ ಒಂದು ಹನಿಯಷ್ಟಾದರೂ ಆ ನಿಟ್ಟಿನಲ್ಲಿಕೆಲಸ ಮಾಡಿದಾಗ, ನನಸಾಗಿಸಿದಾಗ, ಒಂದು ಹೆಮ್ಮೆಯಭಾವನೆ ಮೂಡುತ್ತದೆ. ನಮ್ಮ ಕುಟುಂಬದವರು ಕೂಡಾಭಯಭೀತರಾಗಿದ್ದಾಗ ಮತ್ತು ಅವರಿಗೆ ಸ್ವಲ್ಪಅಂಜಿಕೆಯುಂಟಾದಾಗ, ಅಂತಹ ಸಂದರ್ಭದಲ್ಲಿ, ಕುಟುಂಬದಿಂದ ದೂರವಾಗಿ ಗಡಿಗಳಲ್ಲಿ ವಿಷಮ ಮತ್ತುಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ದೇಶದರಕ್ಷಣೆಮಾಡುತ್ತಿರುವ ನಮ್ಮದೇಶದ ಸೈನಿಕರನ್ನುನೆನಪಿಸಿಕೊಳ್ಳುತ್ತೇನೆ. ಅವರಿಗೆ ಹೋಲಿಸಿದಲ್ಲಿನಮಗಿರುವ ಅಪಾಯ ಕಡಿಮೆ, ಬಹಳವೇ ಕಡಿಮೆ. ಅವರು ಕೂಡಾ ಈ ವಿಷಯವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಒಂದು ರೀತಿಯಲ್ಲಿ ನನ್ನಕೆಲಸದಲ್ಲಿ ಅವರು ಕೂಡಾ ಸಹಕಾರ ನೀಡುತ್ತಾರೆ ಮತ್ತುಈ ಆಪತ್ತಿನ ಸಮಯದಲ್ಲಿ ಸಮಾನರೂಪದಲ್ಲಿ ಅವರಿಂದಸಾಧ್ಯವಾಗುವಷ್ಟು ಸಹಕಾರವನ್ನು ಅವರುನಿಭಾಯಿಸುತ್ತಾರೆ.

ಮೋದಿ – ಪ್ರಕಾಶ್ ಅವರೇ, ಒಂದೆಡೆ ಸರ್ಕಾರ ಎಲ್ಲರಿಗೂಹೇಳುತ್ತಿದೆ ಅಂತರ ಕಾಯ್ದುಕೊಳ್ಳಿ, ಅಂತರ ಕಾಯ್ದುಕೊಳ್ಳಿ, ಕೊರೋನಾದಲ್ಲಿ ಪರಸ್ಪರರಿಂದ ದೂರವಿರಿ ಎಂದು. ಮತ್ತುನೀವಂತೂ ಮುಂದೆ ನಿಂತು, ಕೊರೋನಾದ ಮಾರಕಗಳನಡುವೆಯೇ ಇರಬೇಕಾಗುತ್ತದೆ, ಅವುಗಳಮುಂದಿನಿಂದಲೇ ಹಾದು ಹೋಗಬೇಕಾಗುತ್ತದೆ. ಹಾಗಿರುವಾಗ, ಇದು ಇದೊಂದು ನಿಮ್ಮನ್ನು ನೀವೇಜೀವನದ ಸಂಕಷ್ಟಕ್ಕೆ ದೂಡಿಕೊಳ್ಳುವಂತಹವಿಷಯವಾಗಿರುತ್ತದೆ, ಹೀಗಾಗಿ ಕುಟುಂಬದವರಿಗೆಚಿಂತೆಯಾಗುವುದು ಸಹಜವೇ ಆಗಿದೆ. ಆದರೂ ಸಹ, ಈlab technician ನ ಕೆಲಸ ಪ್ರಮುಖ ಕೆಲಸಗಳಲ್ಲಿಒಂದಾಗಿದೆ. ಮತ್ತು ಇಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿಎರಡನೆಯದಾಗಿದೆ ಕೆಲಸದ ಗಂಟೆಗಳು ಕೂಡಾಹೆಚ್ಚಾಗಿರಬಹುದಲ್ಲವೇ? ರಾತ್ರಿಗಳನ್ನುಪ್ರಯೋಗಾಲಯದಲ್ಲೇ ಕಳೆಯಬೇಕಾಗುತ್ತದಲ್ಲವೇ? ಏಕೆಂದರೆ ಇಷ್ಟೊಂದು ಕೋಟಿ ಜನರ ಟೆಸ್ಟಿಂಗ್ನಡೆಯುತ್ತಿರುವಾಗ ಕೆಲಸದ ಹೊರೆ ಕೂಡಾಹೆಚ್ಚಾಗಿರಬಹುದಲ್ಲವೇ? ಆದರೆ ನಿಮ್ಮ ಸುರಕ್ಷತೆಗಾಗಿಕೂಡಾ ನೀವು ಎಚ್ಚರಿಕೆ ಕ್ರಮಗಳನ್ನುತೆಗೆದುಕೊಳ್ಳುತ್ತೀರೋ ಅಥವಾತೆಗೆದುಕೊಳ್ಳುವುದಿಲ್ಲವೋ?

ಪ್ರಕಾಶ್-ಖಂಡಿತವಾಗಿಯೂ ತೆಗೆದುಕೊಳ್ಳುತ್ತೇವೆ ಸರ್. ನಮ್ಮ ILBS ನಲ್ಲಿರುವ ಪ್ರಯೋಗಾಲಯ, ಡಬ್ಲ್ಯು ಹೆಚ್ಓ (WHO) ನಿಂದ ಮಾನ್ಯತೆ ಪಡೆದುಕೊಂಡಿದೆ. ಆದ್ದರಿಂದಎಲ್ಲಾ ಶಿಷ್ಟಾಚಾರಗಳು ಅಂತರರಾಷ್ಟ್ರೀಯಪ್ರಮಾಣದ್ದಾಗಿವೆ, ನಾವು ಲ್ಯಾಬ್ ನಲ್ಲಿ ಮೂರು-ಸ್ತರದ, ನಮ್ಮ ಉಡುಪನ್ನು ಧರಿಸಿಕೊಂಡು ನಮ್ಮ ಕೆಲಸಮಾಡುತ್ತೇವೆ. ಮತ್ತು ಅದಕ್ಕೆ ಪೂರ್ಣ discarding, labelling ಮತ್ತು testing ಸಂಬಂಧಿತ ಪೂರ್ಣಶಿಷ್ಟಾಚಾರವಿದ್ದು, ಆ ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲಸಮಾಡುತ್ತೇವೆ. ಸರ್ ಪರಮಾತ್ಮನ ಅನುಗ್ರಹದಿಂದ ನನ್ನಕುಟುಂಬ ಮತ್ತು ನನ್ನ ಪರಿಚಯಸ್ಥರಲ್ಲಿ ಹೆಚ್ಚಿನ ಮಂದಿಇದುವರೆಗೂ ಈ ಸಾಂಕ್ರಾಮಿಕಕ್ಕೆ ತುತ್ತಾಗಿಲ್ಲ. ಒಂದುವಿಷಯವೆಂದರೆ ನೀವು ಮುನ್ನೆಚ್ಚರಿಕೆ ವಹಿಸಿದಲ್ಲಿ, ಮತ್ತುಸಹನೆಯಿಂದ ಇದ್ದಲ್ಲಿ, ನೀವು ಇದರಿಂದ ಸ್ವಲ್ಪಮಟ್ಟಿಗೆತಪ್ಪಿಸಿಕೊಳ್ಳಬಹುದು.

ಮೋದಿ – ಪ್ರಕಾಶ್ ಅವರೆ, ನಿಮ್ಮಂತಹ ಸಾವಿರಾರುಜನರು ಕಳೆದ ಒಂದು ವರ್ಷದಿಂದ ಲ್ಯಾಬ್ ನಲ್ಲಿಕುಳಿತಿದ್ದಾರೆ ಮತ್ತು ಇಷ್ಟೊಂದು ಶ್ರಮಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ದೇಶ ಇದನ್ನು ಅರ್ಥ ಮಾಡಿಕೊಳ್ಳುತ್ತಿದೆ.  ಆದರೆಪ್ರಕಾಶ್ ಅವರೆ, ನಾನು ನಿಮ್ಮ ಮೂಲಕ ನಿಮ್ಮಕಾರ್ಯಕ್ಷೇತ್ರದ ಎಲ್ಲಾ ಸಹೋದ್ಯೋಗಿಗಳಿಗೆ ಹೃತ್ಪೂರ್ವಕಧನ್ಯವಾದ ಅರ್ಪಿಸುತ್ತಿದ್ದೇನೆ. ದೇಶವಾಸಿಗಳ ಪರವಾಗಿಧನ್ಯವಾದ ಹೇಳುತ್ತಿದ್ದೇನೆ ಮತ್ತು ನೀವುಆರೋಗ್ಯದಿಂದಿರಿ, ನಿಮ್ಮ ಕುಟುಂಬ ಆರೋಗ್ಯದಿಂದಿರಲಿ. ನನ್ನ ಅನೇಕಾನೇಕ ಶುಭಾಶಯಗಳು.

ಪ್ರಕಾಶ್-ಧನ್ಯವಾದ ಪ್ರಧಾನ ಮಂತ್ರಿಗಳೇ. ನನಗೆ ಈಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಬಹಳಕೃತಜ್ಞನಾಗಿದ್ದೇನೆ.

ಮೋದಿ -ಧನ್ಯವಾದ ಸೋದರಾ.

ಸ್ನೇಹಿತರೆ, ಒಂದು ರೀತಿಯಲ್ಲಿ ನಾನು ಸೋದರ ಪ್ರಕಾಶ್ಅವರೊಂದಿಗೆ ಮಾತನಾಡಿದೆನಾದರೂ, ಅವರ ಮಾತಿನಲ್ಲಿಸಾವಿರಾರು Lab technicians ಗಳ ಸೇವೆಯ ಪರಿಮಳನಮ್ಮನ್ನು ತಲಪುತ್ತಿದೆ. ಈ ಮಾತುಗಳಲ್ಲಿಕಂಡುಬರುತ್ತಿರುವ ಸಾವಿರಾರು- ಲಕ್ಷಾಂತರ ಜನರಸೇವಾಭಾವನೆಯು ನಮ್ಮೆಲ್ಲರಿಗೂ ನಮ್ಮಜವಾಬ್ದಾರಿಯನ್ನು ನೆನಪಿಸುತ್ತದೆ. ಎಷ್ಟೊಂದು ಶ್ರಮಮತ್ತು ಸಮರ್ಪಣಾ ಭಾವದಿಂದ ಸೋದರ ಪ್ರಕಾಶ್ನಂತಹ ನಮ್ಮ ಸ್ನೇಹಿತರು ಕೆಲಸ ಮಾಡುತ್ತಿದ್ದಾರೋ, ಅಷ್ಟೇ ನಿಷ್ಠೆಯಿಂದ ಅವರ ಸಹಕಾರವು ಕೊರೋನಾಸೋಲಿಸಲು ನಮಗೆ ಬಹಳ ಸಹಾಯ ಮಾಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಈಗಷ್ಟೇ ನಮ್ಮ`Corona Warriors’ ಬಗ್ಗೆ ಚರ್ಚಿಸುತ್ತಿದ್ದೆವು. ಕಳೆದಒಂದೂವರೆ ವರ್ಷದಲ್ಲಿ ನಾವು ಇವರುಗಳ ಅನೇಕಸಮರ್ಪಣೆ ಮತ್ತು ಪರಿಶ್ರಮವನ್ನು ನೋಡಿದ್ದೇವೆ. ಆದರೆಈ ಹೋರಾಟದಲ್ಲಿದೇಶದ ಅನೇಕ ಕ್ಷೇತ್ರಗಳ ಅನೇಕWarriors ಗಳ ಪಾತ್ರ ಕೂಡಾ ಬಹಳ ದೊಡ್ಡದಿದೆ. ಯೋಚಿಸಿ ನೋಡಿ, ನಮ್ಮ ದೇಶದ ಮೇಲೆ ಇಷ್ಟು ದೊಡ್ಡಸಂಕಟ ಬಂದೊದಗಿದೆ, ಇದರ ಪರಿಣಾಮ ದೇಶದಪ್ರತಿಯೊಂದು ವ್ಯವಸ್ಥೆಯ ಮೇಲೂ ಉಂಟಾಗಿದೆ. ಕೃಷಿ-ವ್ಯವಸ್ಥೆಯು ಈ ದಾಳಿಯಿಂದ ಸಾಕಷ್ಟು ಪ್ರಮಾಣದಲ್ಲಿತನ್ನನ್ನು ತಾನು ರಕ್ಷಿಸಿಕೊಂಡಿದೆ. ಕೇವಲ ಸುರಕ್ಷಿತವಾಗಿಮಾತ್ರವಲ್ಲ, ಪ್ರಗತಿಯನ್ನು ಕೂಡಾ ಸಾಧಿಸಿದೆ, ಮುಂದೆಸಾಗಿದೆ ಕೂಡಾ. ಈ ಮಹಾಮಾರಿಯ ಕಾಲದಲ್ಲಿ ಕೂಡಾನಮ್ಮ ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆಂದುನಿಮಗೆ ಗೊತ್ತೇ? ರೈತರು ದಾಖಲೆಯ ಉತ್ಪಾದನೆಮಾಡಿದ್ದಾರೆ, ಹೀಗಾಗಿ ದೇಶ ಈ ಬಾರಿ ದಾಖಲೆಯ ಖರೀದಿಕೂಡಾ ಮಾಡಿದೆ. ಈ ಬಾರಿ ಅನೇಕ ಪ್ರದೇಶಗಳಲ್ಲಂತೂಸಾಸಿವೆಗಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಗಿಂತಲೂ ಹೆಚ್ಚಿನ ಬೆಲೆ ದೊರೆತಿದೆ. ದಾಖಲೆಯ ಆಹಾರಧಾನ್ಯಗಳ ಉತ್ಪಾದನೆ ಕಾರಣದಿಂದಾಗಿಯೇ ನಮ್ಮದೇಶಪ್ರತಿಯೊಬ್ಬ ದೇಶವಾಸಿಗೂ ಬೆಂಬಲ ನೀಡಲುಸಾಧ್ಯವಾಗಿದೆ. ಇಂದು ಈ ಬಿಕ್ಕಟ್ಟಿನ ಸಮಯದಲ್ಲಿ 80 ಕೋಟಿ ಬಡವರಿಗೆ ಉಚಿತ ಪಡಿತರ ಲಭ್ಯವಾಗುವಂತೆಮಾಡಲಾಗುತ್ತಿದ್ದು, ಬಡವನ ಮನೆಯಲ್ಲಿ ಒಲೆ ಹಚ್ಚದದಿನ ಎಂದಿಗೂ ಬಾರದಂತೆ ಮಾಡಲಾಗುತ್ತಿದೆ.

ಸ್ನೇಹಿತರೆ, ಇಂದು ನಮ್ಮ ದೇಶದ ರೈತರು, ಅನೇಕಕ್ಷೇತ್ರಗಳಲ್ಲಿ ಹೊಸ ವ್ಯವಸ್ಥೆಗಳ ಪ್ರಯೋಜನ ಪಡೆದುಅದ್ಭುತಗಳನ್ನು ಮಾಡಿ ತೋರಿಸುತ್ತಿದ್ದಾರೆ. ಉದಾಹರಣೆಗೆಅಗರ್ತಲಾದ ರೈತರನ್ನೇ ನೋಡಿ! ಈ ರೈತರು ಬಹಳಉತ್ತಮವಾದ ಹಲಸಿನ ಹಣ್ಣು ಬೆಳೆಯುತ್ತಾರೆ. ಇದರಬೇಡಿಕೆ ದೇಶ ವಿದೇಶಗಳಲ್ಲೂ ಇರಬಹುದು, ಆದ್ದರಿಂದ ಈಬಾರಿ ಅಗರ್ತಲಾದ ರೈತರು ಹಲಸಿನ ಹಣ್ಣನ್ನು ರೈಲಿನಮೂಲಕ ಗುವಾಹಟಿವರೆಗೂ ತಂದರು. ಗುವಾಹಟಿಯಿಂದಈ ಹಲಸನ್ನು ಲಂಡನ್ ಗೆ ಕಳುಹಿಸುತ್ತಿದ್ದಾರೆ. ಹಾಗೆಯೇಬಿಹಾರದ `ಶಾಹಿ ಲೀಚಿ’ ಹೆಸರನ್ನೂ ಕೇಳಿರಬಹುದು. ಇದರ ಗುರುತು ಬಲಿಷ್ಟವಾಗಿರಬೇಕೆಂದು ಮತ್ತು ರೈತರಿಗೆಹೆಚ್ಚು ಲಾಭದೊರೆಯಬೇಕೆಂದು, 2018 ರಲ್ಲಿ ಸರ್ಕಾರವುಶಾಹಿ ಲೀಚಿಗೆ GI TAG ನೀಡಿತ್ತು. ಈ ಬಾರಿ ಬಿಹಾರದ ಈಶಾಹಿ ಲಿಚಿಯನ್ನು ಕೂಡಾ ವಿಮಾನದಲ್ಲಿ ಲಂಡನ್ಗೆ  ಕಳುಹಿಸಿಕೊಡಲಾಗಿದೆ. ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣಕ್ಕೆ ನಮ್ಮ ದೇಶವು ಇಂತಹ ವಿಶಿಷ್ಟರುಚಿ ಮತ್ತು ಉತ್ಪನ್ನಗಳಿಂದ ತುಂಬಿದೆ. ದಕ್ಷಿಣಭಾರತದಲ್ಲಿ, ವಿಜಯನಗರದ ಮಾವಿನ ಹಣ್ಣಿನ ಬಗ್ಗೆನೀವು ಖಂಡಿತಾ ಕೇಳಿರುತ್ತೀರಲ್ಲವೇ? ಈ ಹಣ್ಣನ್ನುತಿನ್ನಬೇಕೆಂದು ಯಾರು ಬಯಸುವುದಿಲ್ಲ ಹೇಳಿ. ಆದ್ದರಿಂದ, ಈಗ ನೂರಾರು ಟನ್ ವಿಜಯನಗರದಮಾವಿನ ಹಣ್ಣನ್ನು ಕಿಸಾನ್-ರೈಲು ದೆಹಲಿಗೆ ತಲುಪಿಸುತ್ತಿದೆ. ದೆಹಲಿ ಮತ್ತು ಉತ್ತರ ಭಾರತದ ಜನರಿಗೆ ವಿಜಯನಗರದಮಾವಿನ ಹಣ್ಣು ಸವಿಯಲು ದೊರೆಯುತ್ತದೆ ಮತ್ತುರೈತರಿಗೆ ಉತ್ತಮ ಆದಾಯವೂ ದೊರೆಯುತ್ತದೆ. ಕಿಸಾನ್-ರೈಲ್ ಈಗಿನವರೆಗೂ ಹತ್ತಿರ-ಹತ್ತಿರ 2 ಲಕ್ಷಟನ್ಉತ್ಪನ್ನವನ್ನು ಸಾಗಿಸಿದೆ. ಈಗ ಹಣ್ಣು, ತರಕಾರಿಗಳು, ಬೇಳೆಕಾಳುಗಳನ್ನು ದೇಶದ ದೂರದೂರದ ಪ್ರದೇಶಗಳಿಗೆಬಹಳ ಕಡಿಮೆ ಖರ್ಚಿನಲ್ಲಿ ಕಳುಹಿಸಿಕೊಡಲು ರೈತರಿಗೆಸಾಧ್ಯವಾಗುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 30 ರಂದುನಾವು ಮನದ ಮಾತು ಆಡುತ್ತಿದ್ದೇವೆ ಮತ್ತುಕಾಕತಾಳೀಯವೆಂಬಂತೆ ಇದು ಸರ್ಕಾರದ 7 ವರ್ಷಗಳುಪೂರ್ಣಗೊಳ್ಳುವ ಸಮಯವಾಗಿದೆ. ಈ ವರ್ಷಗಳಲ್ಲಿ, ದೇಶವು ‘ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ, ಎಲ್ಲರ-ವಿಶ್ವಾಸ’ ಮಂತ್ರವನ್ನು ಅನುಸರಿಸುತ್ತಿದೆ. ದೇಶದಸೇವೆಯಲ್ಲಿ ನಾವೆಲ್ಲರೂ ಪ್ರತಿಕ್ಷಣವೂ ಸಮರ್ಪಣಾಭಾವದೊಂದಿಗೆ ಕೆಲಸ ಮಾಡಿದ್ದೇವೆ. ಅನೇಕ ಸ್ನೇಹಿತರುನನಗೆ ಪತ್ರಗಳನ್ನು ಬರೆದು ಕಳುಹಿಸಿದ್ದಾರೆ ಮತ್ತು ‘ಮನ್ ಕಿಬಾತ್’ ನಲ್ಲಿ, ನಮ್ಮ 7 ವರ್ಷಗಳ ಪಯಣದ ಬಗ್ಗೆಯೂಚರ್ಚಿಸಬೇಕುಎಂದು ಕೇಳಿದ್ದಾರೆ.  ಸ್ನೇಹಿತರೇ, ಈ 7 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿದರೂ ಅದುದೇಶದ್ದಾಗಿದೆ, ದೇಶವಾಸಿಗಳದ್ದಾಗಿದೆ. ಈ ವರ್ಷಗಳಲ್ಲಿನಾವು ರಾಷ್ಟ್ರೀಯ ಹೆಮ್ಮೆಯ ಅನೇಕ ಕ್ಷಣಗಳನ್ನು ಒಟ್ಟಿಗೆಅನುಭವಿಸಿದ್ದೇವೆ. ಈಗ ಭಾರತವು ಇತರ ದೇಶಗಳಚಿಂತನೆಯ ಪ್ರಕಾರ ಮತ್ತು ಅವರ ಒತ್ತಡದಂತೆನಡೆಯುವುದಿಲ್ಲ, ತನ್ನ ಮನೋ ನಿಶ್ಚಯದಂತೆನಡೆಯುತ್ತದೆ ಎನ್ನುವುದನ್ನು ಗಮನಿಸಿದಾಗ ನಮ್ಮೆಲ್ಲರಿಗೂಹೆಮ್ಮೆಯೆನಿಸುತ್ತದೆ. ನಮ್ಮ ವಿರುದ್ಧ ಸಂಚುರೂಪಿಸುವವರಿಗೆ ಭಾರತ ಈಗ ಸೂಕ್ತ ಉತ್ತರವನ್ನುನೀಡುತ್ತದೆ ಎಂದು ನಾವು ನೋಡಿದಾಗ, ನಮ್ಮಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ರಾಷ್ಟ್ರೀಯಭದ್ರತೆಯ ವಿಷಯಗಳಲ್ಲಿ ಭಾರತ ರಾಜಿಮಾಡಿಕೊಳ್ಳದಿದ್ದಾಗ, ನಮ್ಮ ಸೇನಾಪಡೆಗಳ ಬಲಹೆಚ್ಚಾದಾಗ, ಹೌದು, ನಾವು ಸರಿಯಾದ ಹಾದಿಯಲ್ಲಿದ್ದೇವೆಎಂದು ನಮಗೆ ಭಾಸವಾಗುತ್ತದೆ.

ಸ್ನೇಹಿತರೆ, ನನಗೆ ದೇಶವಾಸಿಗಳಿಂದ ದೇಶದ ಮೂಲೆಮೂಲೆಗಳಿಂದ ಸಂದೇಶ, ಪತ್ರಗಳು ಬರುತ್ತವೆ. 70 ವರ್ಷಗಳ ನಂತರ ತಮ್ಮ ಗ್ರಾಮದಲ್ಲಿ ಮೊದಲ ಬಾರಿಗೆವಿದ್ಯುಚ್ಛಕ್ತಿ ಬಂದಿತೆಂದು, ಅವರ ಪುತ್ರ-ಪುತ್ರಿಯರುಬೆಳಕಿನಲ್ಲಿ, ಫ್ಯಾನ್ ಅಡಿಯಲ್ಲಿ ಕುಳಿತು ಪಾಠಓದುತ್ತಿದ್ದಾರೆಂದು ಎಷ್ಟೊಂದು ಜನರು ದೇಶಕ್ಕೆ ಧನ್ಯವಾದಹೇಳುತ್ತಾರೆ. ನಮ್ಮ ಗ್ರಾಮ ಈಗ ಸುಸಜ್ಜಿತ ರಸ್ತೆಗಳಮೂಲಕ ನಗರದೊಂದಿಗೆ ಸಂಪರ್ಕಿಸಲಾಗಿದೆ ಎಂದುಎಷ್ಟೊಂದು ಜನರು ಹೇಳುತ್ತಾರೆ. ರಸ್ತೆ ನಿರ್ಮಾಣವಾದನಂತರ, ಮೊದಲ ಬಾರಿಗೆ ತಾವು ಕೂಡಾ ವಿಶ್ವದ ಇತರಭಾಗಕ್ಕೆ ಸೇರಿದವರೆಂಬ ಭಾವನೆ ಮೂಡಿತೆಂದು ಒಂದುಬುಡಕಟ್ಟು ಪ್ರದೇಶದ ಕೆಲವು ಸ್ನೇಹಿತರು ನನಗೆ ಸಂದೇಶಕಳುಹಿಸಿದ್ದರೆಂದು ನನಗೆ ನೆನಪಿದೆ.   ಅಂತಯೇ ಕೆಲವರುಬ್ಯಾಂಕ್ ಖಾತೆ ತೆರೆದ ಸಂತಸ ಹಂಚಿಕೊಂಡರೆ, ಕೆಲವುವಿವಿಧ ಯೋಜನೆಗಳ ಸಹಾಯದಿಂದ ಹೊಸ ಉದ್ಯೋಗಆರಂಭಿಸಿದ ಸಂತಸ ಹಂಚಿಕೊಳ್ಳುತ್ತಾರೆ. ಆಸಂತೋಷದಲ್ಲಿ ಭಾಗಿಯಾಗಲು ನನ್ನನ್ನೂಆಮಂತ್ರಿಸುತ್ತಾರೆ. `ಪ್ರಧಾನ ಮಂತ್ರಿ ಆವಾಸ್ ಯೋಜನೆ’  ಮೂಲಕ ಮನೆ ದೊರೆತ ನಂತರ ಗೃಹಪ್ರವೇಶಕ್ಕೆಬರಬೇಕೆಂದು ನಮ್ಮ ದೇಶವಾಸಿಗಳಿಂದ ನನಗೆಆಮಂತ್ರಣ ದೊರೆಯುತ್ತಲೇ ಇರುತ್ತದೆ.  ಈ 7 ವರ್ಷಗಳಲ್ಲಿ, ನಿಮ್ಮೆಲ್ಲರ ಇಂತಹ ಕೋಟ್ಯಂತರಸಂತಸದಲ್ಲಿ ನಾನು ಕೂಡಾ ಭಾಗಿಯಾಗಿದ್ದೇನೆ. ಈಗಕೆಲವೇ ದಿನಗಳಿಗೆ ಮುನ್ನ, ಹಳ್ಳಿಯೊಂದರಿಂದಕುಟುಂಬವೊಂದು `ಜಲ್ ಜೀವನ್ ಮಿಶನ್’ ಮುಖಾಂತರ ಮನೆಯಲ್ಲಿ ಅಳವಡಿಸಲಾದ ನಲ್ಲಿಯಒಂದು ಫೋಟೋ ತೆಗೆದು ಕಳುಹಿಸಿಕೊಟ್ಟಿತ್ತು. ಅವರು ಆಫೋಟೋ ಅಡಿಯಲ್ಲಿ ಹೀಗೆಂದು ಬರೆದಿದ್ದರು? `ನನ್ನಗ್ರಾಮದ ಜೀವನಾಧಾರ’ ಹೀಗೆ ಎಷ್ಟೊಂದುಕುಟುಂಬಗಳಿವೆ. ಸ್ವಾತಂತ್ರ್ಯ ದೊರೆತ 7 ದಶಕಗಳಲ್ಲಿ ನಮ್ಮದೇಶದ ಕೇವಲ ಮೂರೂವರೆ ಕೋಟಿ ಗ್ರಾಮದಮನೆಗಳಲ್ಲಿ ಮಾತ್ರಾ ನೀರಿನ ಸಂಪರ್ಕವಿತ್ತು. ಆದರೆ ಕಳೆದ21 ತಿಂಗಳುಗಳಲ್ಲೇ, ಎಲ್ಲಾ ನಾಲ್ಕೂವರೆ ಕೋಟಿಮನೆಗಳಿಗೆ ಶುದ್ಧ ನೀರಿನ ಸಂಪರ್ಕ ಕಲ್ಪಿಸಲಾಯಿತು.  ಇವುಗಳಲ್ಲಿ 15 ತಿಂಗಳುಗಳಂತೂ ಕೊರೋನಾಕಾಲವಾಗಿತ್ತು. ಇದೇ ರೀತಿಯಲ್ಲಿ ಆಯುಷ್ಮಾನ್ಯೋಜನೆಯಿಂದ ಕೂಡಾ ದೇಶದಲ್ಲಿ ಹೊಸ ಭರವಸೆಮೂಡಿದೆ. ಬಡವನೊಬ್ಬ ಉಚಿತ ಚಿಕಿತ್ಸೆಯಿಂದಗುಣಮುಖನಾಗಿ ಮನೆಗೆ ಹಿಂದಿರುಗಿ ಬಂದಾಗ ಆತನಿಗೆಹೊಸ ಜೀವನ ದೊರೆತಂತೆ ಭಾಸವಾಗುತ್ತದೆ. ದೇಶತನ್ನೊಂದಿಗಿದೆ ಎಂಬ ವಿಶ್ವಾಸ ಆತನಲ್ಲಿ ಮೂಡುತ್ತದೆ. ಇಂತಹ ಎಷ್ಟೊಂದು ಕುಟುಂಬಗಳ ಆಶೀರ್ವಾದ, ಕೋಟ್ಯಂತರ ಮಾತೆಯರ ಆಶೀರ್ವಾದ ಪಡೆದುನಮ್ಮದೇಶ ಬಲಿಷ್ಟವಾಗಿ, ಅಬಿವೃದ್ಧಿಯ ನಿಟ್ಟಿನಲ್ಲಿ ಮುಂದೆಸಾಗುತ್ತಿದೆ.

ಸ್ನೇಹಿತರೆ, ಈ 7 ವರ್ಷಗಳಲ್ಲಿ, ಭಾರತವು ` ಡಿಜಿಟಲ್ಪಾವತಿ ಮೂಲಕ  ಕೊಡು-ಪಡೆಯುವಲ್ಲಿ(ಕೊಡುಕೊಳ್ಳುವಿಕೆಯಲ್ಲಿ)’ ವಿಶ್ವಕ್ಕೆ ಹೊಸ ದಿಕ್ಕು ತೋರುವಕೆಲಸ ಮಾಡಿದೆ. ಇಂದು ಯಾವುದೇ ಸ್ಥಳದಿಂದಲೂ, ಬಹಳ ಸುಲಭವಾಗಿ ನೀವು ಕ್ಷಣ ಮಾತ್ರದಲ್ಲಿ ಡಿಜಿಟಲ್ಪಾವತಿ ಮಾಡಿಬಿಡುತ್ತೀರಿ, ಕೊರೋನಾದ ಈಸಮಯದಲ್ಲಿ ಕೂಡಾ ಬಹಳ ಉಪಯುಕ್ತವೆಂದುಸಾಬೀತಾಗುತ್ತಿದೆ. ಇಂದು ದೇಶವಾಸಿಗಳಲ್ಲಿ ಸ್ವಚ್ಛತೆಯಬಗ್ಗೆ ಗಂಬೀರತೆ ಮತ್ತು ಜಾಗರೂಕತೆ ಹೆಚ್ಚಾಗುತ್ತಿದೆ. ನಾವುದಾಖಲೆಯ ಸಂಖ್ಯೆಯ ಉಪಗ್ರಹ ಕೂಡಾಯೋಜಿಸುತ್ತಿದ್ದೇವೆ ಮತ್ತು ದಾಖಲೆಯ ರಸ್ತೆಗಳನ್ನು ಕೂಡಾನಿರ್ಮಿಸುತ್ತಿದ್ದೇವೆ. ಈ 7 ವರ್ಷಗಳಲ್ಲಿ ದೇಶದ ಅನೇಕಹಳೆಯ ವಿವಾದಗಳನ್ನು ಕೂಡಾ ಸಂಪೂರ್ಣ ಶಾಂತಿ ಮತ್ತುಸೌಹಾರ್ದದೊಂದಿಗೆ ಬಗೆಹರಿಸಲಾಗಿದೆ. ಈಶಾನ್ಯದಿಂದಕಾಶ್ಮೀರದವರೆಗೂ ಶಾಂತಿ ಮತ್ತು ಅಭಿವೃದ್ಧಿಯ ಒಂದುಹೊಸ ಭರವಸೆ ಮೂಡಿದೆ. ಸ್ನೇಹಿತರೆ, ದಶಕಗಳಿಂದಆಗಿರದಂತಹ ಈ ಕೆಲಸಗಳು ಈ 7 ವರ್ಷಗಳಲ್ಲಿಹೇಗಾಯಿತೆಂದು ನೀವು ಯೋಚಿಸಿರುವಿರಾ? ಇವೆಲ್ಲವೂಹೇಗಾಯಿತೆಂದರೆ ಈ 7 ವರ್ಷಗಳಲ್ಲಿ ನಾವು ಸರ್ಕಾರಮತ್ತು ಜನತೆಗಿಂತ ಹೆಚ್ಚಾಗಿ ಒಂದು ದೇಶವಾಗಿ ಕೆಲಸಮಾಡಿದ್ದೇವೆ, ಒಂದು ತಂಡದಂತೆ ಕೆಲಸ ಮಾಡಿದ್ದೇವೆ, `ಟೀಂಇಂಡಿಯಾ’ ರೂಪದಲ್ಲಿ ಕೆಲಸ ಮಾಡಿದ್ದೇವೆ. ಪ್ರತಿಯೊಬ್ಬ ನಾಗರಿಕನೂ ದೇಶವನ್ನು ಮುನ್ನಡೆಸಲುಕೆಲವು ಹೆಜ್ಜೆ ಮುಂದಿಡುವ ಪ್ರಯತ್ನ ಪಟ್ಟಿದ್ದಾನೆ.  ಹೌದು, ಎಲ್ಲಿ ಸಫಲತೆ ಇರುತ್ತದೆಯೋ ಅಲ್ಲಿ ಪರೀಕ್ಷೆಗಳು ಕೂಡಾಇರುತ್ತವೆ. ಈ 7 ವರ್ಷಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿಅನೇಕ ಪರೀಕ್ಷೆಗಳನ್ನು ಎದುರಿಸಿದ್ದೇವೆ ಮತ್ತುಪ್ರತಿಬಾರಿಯೂ ನಾವು ಪ್ರಬಲ ಶಕ್ತಿಯಾಗಿಹೊರಹೊಮ್ಮಿದ್ದೇವೆ. ಕೊರೋನಾ ಮಹಾಮಾರಿಯರೂಪದಲ್ಲಿ, ಇಷ್ಟು ದೊಡ್ಡ ಪರೀಕ್ಷೆ ಸತತವಾಗಿಮುಂದುವರಿಯುತ್ತಿದೆ. ಸಂಪೂರ್ಣ ವಿಶ್ವವನ್ನೇತೊಂದರೆಗೆದೂಡಿದ ಬಿಕ್ಕಟ್ಟು ಇದಾಗಿದ್ದು, ಎಷ್ಟೊಂದುಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ದೊಡ್ಡ ದೊಡ್ಡ ದೇಶಗಳು ಕೂಡಾ ಇದರ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ. ಈ ಜಾಗತಿಕಮಹಾಮಾರಿಯ ನಡುವೆಯೇ ಭಾರತ, `ಸೇವೆ ಮತ್ತುಸಹಯೋಗ’ ದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನಾವು ಮೊದಲ ಅಲೆಯಲ್ಲಿ ಕೂಡಾ ಸಂಪೂರ್ಣಹುರುಪಿನಿಂದ ಹೋರಾಟ ನಡೆಸಿದೆವು, ಈ ಬಾರಿಕೂಡಾವೈರಾಣುವಿನ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ  ಭಾರತ ವಿಜಯಿಯಾಗುತ್ತದೆ. `ಎರಡು ಗಜ ಅಂತರ’, ಮಾಸ್ಕ್ ಧರಿಸುವ ನಿಯಮವೇ ಇರಲಿ, ಅಥವಾಲಸಿಕೆಯೇ ಆಗಿರಲಿ, ನಾವು ಸಡಿಲಗೊಳಿಸಬಾರದು.  ಗೆಲುವಿಗೆ ಇದೇ ನಮ್ಮ ಹಾದಿಯಾಗಿದೆ. ಮುಂದಿನಬಾರಿನಾವು `ಮನದ ಮಾತು` ಸಂದರ್ಭದಲ್ಲಿ ಬೇಟಿಯಾದಾಗ, ದೇಶವಾಸಿಗಳ ಇನ್ನೂ ಅನೇಕ ಪ್ರೇರಣಾತ್ಮಕಉದಾಹರಣೆಗಳ ಕುರಿತು ಎಲ್ಲರೂ ಮಾತನಾಡೋಣಮತ್ತು ಹೊಸ ವಿಷಯಗಳ ಬಗ್ಗೆ ಚರ್ಚಿಸೋಣ. ನೀವುನಿಮ್ಮ ಸಲಹೆ ಸೂಚನೆಗಳನ್ನು ನನಗೆ ಇದೇರೀತಿಕಳುಹಿಸುತ್ತಿರಿ. ನೀವೆಲ್ಲರೂ ಆರೋಗ್ಯವಾಗಿರಿ, ದೇಶವನ್ನುಇದೇ ರೀತಿ ಮುನ್ನಡೆಸುತ್ತಿರಿ. ಅನಂತಾನಂತಧನ್ಯವಾದಗಳು.

Modi