Tailors 2

ಪಾವಗಡ: ಟೈಲರ್ ಗಳಿಗೆ ದಿನಸಿ ಕಿಟ್ ವಿತರಣೆ….!

DISTRICT NEWS ತುಮಕೂರು
ಪಾವಗಡ ತಾಲ್ಲೂಕಿನ ಎಲ್ಲಾ ಟೈಲರುಗಳಿಗೆ ದಿನಸಿ ವಿತರಣೆ
ಇಂದು ಪಾವಗಡ ತಾಲ್ಲೂಕು ಟೈಲರ್ಸ್ ಅಸೋಸಿಯೇಷನ್ ಮತ್ತು ಸ್ವಯಂಸೇವಾ ಸಂಸ್ಥೆಯ ಕೋರಿಕೆಯ ಮೇರೆಗೆ ಕೋವಿಡ್19 ಲಾಕ್‍ಡೌನ್ ಪರಿಣಾಮವಾಗಿ ದಿನ ನಿತ್ಯ ಜೀವನಕ್ಕೂ ತೊಂದರೆ ಅನುಭವಿಸುತ್ತಿರುವ ಬಡ ಟೈಲರ್‍ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ಸುಮಾರು 150ಕ್ಕೂ ಹೆಚ್ಚು ಜನರಿರುವ ಈ ಪಟ್ಟಿಯನ್ನು ಅನುಸರಿಸಿ ಅಧ್ಯಕ್ಷರಾದ ಶ್ರೀ ಕರಿಯಣ್ಣನವರ ಸಲಹೆಯಂತೆ ಎರಡು ದಿನಗಳ ಈ ವಿತರಣಾ ಕಾರ್ಯಕ್ರಮ ಇಂದು ಆರಂಭವಾಯಿತು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ಎಲ್ಲಾ ಟೈಲರುಗಳಿಗೆ ಲಸಿಕೆ ಮತ್ತು ಅದರ ಪ್ರಭಾವವನ್ನು ಹಾಗೂ ಅನುಕೂಲಗಳನ್ನು ವಿವರಿಸಿದರು.
ತಯಇದೇ ಸಂದರ್ಭದಲ್ಲಿ ತಮ್ಮ ತಮ್ಮ ಅಂಗಡಿಗಳನ್ನು ತೆರೆಯುವ ದಿನಗಳು ಬಂದಾಗ ಅಂಗಡಿಯ ಮುಂದೆ ಮಾಸ್ಕ್ ಇಲ್ಲದೆ, ಶುಚಿತ್ವವಿಲ್ಲದೆ ಒಳಗೆ ಬರುವಂತಿಲ್ಲ ಎಂಬ ಸೂಚನಾ ಫಲಕವನ್ನು ಹಾಕಬೇಕೆಂದು ಸೂಚಿಸಿದರು. ಕಾರ್ಯಕ್ರಮವು ಎಂದಿನಂತೆ ಅಚ್ಚುಕಟ್ಟಾಗಿ ನಡೆಯಿತು. ಶ್ರೀ ಸುದೇಶ್ ಬಾಬು, ಶ್ರೀ ಯಜ್ಞ ನಾರಾಯಣ ಶರ್ಮ, ಶ್ರೀ ಪ್ರಸನ್ನ ಮೂರ್ತಿ, ಶ್ರೀ ಲೋಕೇಶ್, ಶ್ರೀ ವೇಣುಗೋಪಾಲರೆಡ್ಡಿ ಹಾಗೂ ವಿವೇಕ ಬ್ರಿಗೇಡಿನ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಎಂದಿನಂತೆ ಈ ಸೇವಾ ಯಜ್ಞ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದಿಂದ ನಡೆಯಿತು.