ASH06531 01 scaled

ಹಿರಿಯ ನಟ ಅನಂತನಾಗ್ ಗೆ ಡಾಕ್ಟರೇಟ್ ಪ್ರದಾನ…!

ಹಿರಿಯ ನಟ ಅನಂತನಾಗ್ ಗೆ ಡಾಕ್ಟರೇಟ್ ಪ್ರದಾನ ಬೆಂಗಳೂರು: ಹಿರಿಯ ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶುಕ್ರವಾರ ಇಲ್ಲಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಸಚಿವರು, ‘ಅನಂತನಾಗ್ ಅವರು ಚಿತ್ರರಂಗಕ್ಕೆ ಬಂದ ಸುವರ್ಣ ಮಹೋತ್ಸವದ ವರ್ಷದಲ್ಲಿ ಗೌರವ ಡಾಕ್ಟರೇಟ್ ನೀಡುವ ಮೂಲಕ ಬೆಂಗಳೂರು ಉತ್ತರ ವಿವಿ ತನ್ನನ್ನು ತಾನೇ ಗೌರವಿಸಿ ಕೊಂಡಿದೆ’ ಎಂದು ಬಣ್ಣಿಸಿದರು. ಅನಂತನಾಗ್ ಮತ್ತು ಶಂಕರನಾಗ್ ಸಹೋದರರು […]

Continue Reading
20220911 170200

ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಕೃಷ್ಣಂರಾಜು ನಿಧನ…!

ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು (83 ವರ್ಷ) (Krishnam Raju) ಭಾನುವಾರ ನಸುಕಿನ 3:25ಕ್ಕೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದು ಈ ಬಗ್ಗೆ ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ತೆಲುಗು ಚಿತ್ರರಂಗದ ದಿಗ್ಗಜ ನಟ ಕೃಷ್ಣಂರಾಜು ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 83 ವರ್ಷದ ನಟ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ […]

Continue Reading
ab3483b9 7a3f 4863 8aa9 4526e57ad39b

ಪಾವಗಡ :ಸರ್ಕಾರಿ ಶಾಲೆ ಮಾರಾಟ- ಲೋಕಾಯುಕ್ತ ತನಿಖೆ….!

ಪಾವಗಡ : ಪಟ್ಟಣದ ಬ್ರಿಟಿಷರು ಸ್ಥಾಪಿಸಿದ್ದ ಸರ್ಕಾರಿ ಶಾಲೆಯನ್ನು 65 ಲಕ್ಷ ಕ್ಕೆ ಮಾರಾಟ ಮಾಡುವ ನಿರ್ಣಯವನ್ನು ತಾಲ್ಲೂಕು ಪಂಚಾಯತಿಯಲ್ಲಿ ತೆಗೆದು ಕೊಂಡಿತ್ತು. ಈ ನಿರ್ಣದ ವಿರುದ್ಧ ಕಳೆದ ವರ್ಷ ಆಗಸ್ಟ್‌ ನಲ್ಲಿ ಸಪ್ತಸ್ವರ ದಲ್ಲಿ ಸುದ್ದಿ ಪ್ರಕಟಿಸಿದ್ದೆವು. ಈ ಶಾಲೆಯ ಜಾಗ ತಾಲ್ಲೂಕು ಪಂಚಾಯತಿ ಹೆಸರಿನಲ್ಲಿ ಖಾತೆ ಇದೆ ಇದನ್ನು ಶಿಕ್ಷಣ ಇಲಾಖೆ ಗೆ ವರ್ಗಾವಣೆ ಆಗಬೇಕು. ಜಿಲ್ಲಾಪಂಚಾಯತಿ ಸಿಇಓ ವಿಧ್ಯಾಕುಮಾರಿ ಯವರು ಈ ಪ್ರಕರಣದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರೆ ತಾಲ್ಲೂಕು ಪಂಚಾಯತಿ ಇಓ ಶಾಲೆ […]

Continue Reading
IMG 20220723 WA0042

`ಒಟಿಟಿ’ ಯಲ್ಲಿ` ಚಾರ್ಲಿ 777’

ವೂಟ್ ಸೆಲೆಕ್ಟಿಗೆ ಬಂದ ಚಾರ್ಲಿ ಇತ್ತೀಚಿಗೆ ತೆರೆಕಂಡು ಮನೆಮಾತಾದ ‘ಚಾರ್ಲಿ 777’ ಸಿನಿಮಾ ಇದೀಗ ನಿಮ್ಮ ಬಳಿಗೇ ಬರ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರವನ್ನು ನೀವು ಇದೇ ಜುಲೈ 29ರಿಂದ ವೂಟ್ ಸೆಲೆಕ್ಟಿನಲ್ಲಿ ನೋಡಿ ಆನಂದಿಸಬಹುದು. ನಾಯಿ ಮತ್ತು ಮನುಷ್ಯನ ಸಂಬಂಧ ಹನ್ನೆರಡು ಸಾವಿರ ವರ್ಷಗಳಷ್ಟು ಹಿಂದಿನದು ಅಂತಾರೆ. ಅಂತ ಮುದ್ದಾದ ನಾಯಿಯೊಂದರ ಸುತ್ತ ಹೆಣೆದ ಕತೆ ಚಾರ್ಲಿಯದು. ಚಿತ್ರದ ಟ್ರೇಲರ್ ಬಿಡುಗಡೆಯಾದ ದಿನದಿಂದ ಈ ನಾಯಿ ಕನ್ನಡಿಗರ ಮನಸೂರೆಗೊಂಡಿದೆ. ಇನ್ನುಮುಂದೆ ಈ ಮುದ್ದು ನಾಯಿಯ […]

Continue Reading
IMG 20220717 171403 scaled

ವಿಕ್ರಾಂತ್ ರೋಣ: ವಿಶ್ವದ ಮೊದಲ ಸೀಮಿತ ಆವೃತ್ತಿಯ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವಕ್ಕೆ ಚಾಲನೆ

ಕಾಫಿ ಅಂಡ್ ಬನ್ನ್ ಹಾಗೂ ಬ್ಲಾಕ್ ಟಿಕೆಟ್ಸ್ ನಿಂದ ಕಿಚ್ಚ ಸುದೀಪ ಅವರ ನಟನೆಯ ವಿಕ್ರಾಂತ್ ರೋಣದ ವಿಶ್ವದ ಮೊದಲ ಸೀಮಿತ ಆವೃತ್ತಿಯ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವಕ್ಕೆ ಚಾಲನೆ ಬೆಂಗಳೂರು, ಜುಲೈ 17, 2022: ಬ್ಲಾಕ್ ಚೈನ್ ಆಧರಿತ ಟಿಕೆಟಿಂಗ್ ಪ್ಲಾಟ್ ಫಾರಂ ಬ್ಲಾಕ್ ಟಿಕೆಟ್ಸ್ ಕನ್ನಡ ಸೂಪರ್ಸ್ಟಾರ್ ಕಿಚ್ಚ ಸುದೀಪ ಅವರ ಹೊಸ 3ಡಿ ಚಲನಚಿತ್ರ ವಿಕ್ರಾಂತ್ ರೋಣದ ವಿಶೇಷ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವವನ್ನು ಪ್ರಾರಂಭಿಸುತ್ತಿದೆ. ಪ್ರಿಯಾ ಸುದೀಪ ಅವರು ಪ್ರಾರಂಭಿಸಿದ ಜಾಗತಿಕ ಹೂಡಿಕೆಯ ಕಂಪನಿ […]

Continue Reading
IMG 20220614 WA0019

777 ಚಾರ್ಲಿ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ

777 ಚಾರ್ಲಿ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ ಬೀದಿನಾಯಿಗಳನ್ನು ನೋಡಿಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ ಕ್ರಮ: ಮುಖ್ಯಮಂತ್ರಿ ಬೆಂಗಳೂರು, ಜೂನ್ 14: ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿರುವ 777 ಚಾರ್ಲಿ ಕನ್ನಡ ಚಲನ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ ಸನ್ನಿ’ ಯನ್ನು ನೆನಪಿಸಿಕೊಂಡು ಭಾವುಕರಾದರು. ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು.ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ (unconditional) ಪ್ರೀತಿಗೆ ಉತ್ತಮ ಉದಾಹರಣೆ. ಅತ್ಯಂತ […]

Continue Reading
IMG 9606 scaled

Love…ಲಿ’ ಚಿತ್ರ ಕ್ಕೆ ಮುಹೂರ್ತ….!

ವಸಿಸ್ಠ ಸಿಂಹ ನಾಯಕರಾಗಿ ರುವ ಲವ್ ಲಿ. ಸಿನಿಮಾ ಮುಹೂರ್ತ ವು ಸರ್ಕಲ್ ಮಾರಮ್ಮನ ದೇಗುಲ ದಲ್ಲಿನಡೆಯಿತು ಬೆಂಗಳೂರು : ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸ್ತಿರುವ ವಸಿಷ್ಠ ನಾಯಕ ನಟನಾಗಿಯೂ, ಖಳನಾಯಕನಾಗಿಯೂ ಬೆಳ್ಳಿಪರದೆಯ ಮೇಲೆ ದಿಬ್ಬಣ ಹೋಗ್ತಿದ್ದಾರೆ. ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಜೊತೆಗೆ ಚಿಟ್ಟೆ ತಲ್ವಾರ್ ಪೇಟೆ ಸಿನಿಮಾದಲ್ಲಿ […]

Continue Reading
IMG 20220411 WA0001

ಐಮ್ಯಾಕ್ಸ್ನಿಂದ ಉಗ್ರ ನೋಟದ ರಾಕಿಯ ಕೆ.ಜಿ.ಎಫ್. ಚಾಪ್ಟರ್ 2 ರ ಪೋಸ್ಟರ್ ಬಿಡುಗಡೆ…!

ಐಮ್ಯಾಕ್ಸ್ನಿಂದ ಉಗ್ರ ನೋಟದ ರಾಕಿಯ ಕೆ.ಜಿ.ಎಫ್. ಚಾಪ್ಟರ್ ೨ರ ಪೋಸ್ಟರ್ ಬಿಡುಗಡೆ ಏಪ್ರಿಲ್ ೧೧, ೨೦೨೨; ಬೆಂಗಳೂರು: ಐಮ್ಯಾಕ್ಸ್ ಕನ್ನಡ ಭಾಷೆಯ ಅತ್ಯಂತ ನಿರೀಕ್ಷೆಯ ಚಲನಚಿತ್ರ ಕೆ.ಜಿ.ಎಫ್. ಚಾಪ್ಟರ್ ೨ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಪ್ರಶಾಂತ್ ನೀಲ್ ಕಥೆ ಹಾಗೂ ನಿರ್ದೇಶನದ ಹೊಂಬಾಳೆ ಫಿಲ್ಮ್÷್ಸ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಕೆ.ಜಿ.ಎಫ್. ಚಾಪ್ಟರ್ ೨ರಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಕೋಲಾರದ ಚಿನ್ನದ […]

Continue Reading
IMG 20220328 WA0001

ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ…!

ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ದೊಡ್ಡ ಪ್ರಮಾಣದಲ್ಲಿ ಅರ್ಥಪೂರ್ಣ ಕಾರ್ಯಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು, ಮಾರ್ಚ್ 27: ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನವನ್ನು ಸರ್ಕಾರ ಘೋಷಿಸಿದೆ. ಅವರ ಕುಟುಂಬದವರ ಬಳಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಪುನೀತ್ ರಾಜ್‍ಕುಮಾರ್ ಅವರ ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ತಕ್ಕ ರೀತಿಯಲ್ಲಿ ಅರ್ಥಪೂರ್ಣವಾಗಿ ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ರತ್ನ ನೀಡಲು ಚಿಂತನೆ ಮಾಡಿದ್ದು, […]

Continue Reading
IMG 20220317 WA0005

ಪುನೀತ್ ರಾಜ್ ಕುಮಾರ್ ಬದುಕು ಆದರ್ಶಪ್ರಾಯ

ನಟ ಪುನೀತ ರಾಜ್ ಕುಮಾರ್ ಜನ್ಮದಿನ: ಪುನೀತ್ ರಾಜ್ ಕುಮಾರ್ ಬದುಕು ಆದರ್ಶಪ್ರಾಯ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು, ಮಾರ್ಚ್ 17: ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬದುಕು, ಸಾರ್ವಜನಿಕವಾಗಿ ಅವರ ನಡವಳಿಕೆ, ಬಡವರಿಗೆ ಸಹಾಯ ಮಾಡಿದ ರೀತಿ ಆದರ್ಶಪ್ರಾಯ ಹಾಗೂ ಪ್ರೇರಣೆದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಕೆಲಸಗಳನ್ನು ನಾವೆಲ್ಲರೂ ಸ್ಮರಿಸಬೇಕು […]

Continue Reading