7 6 21 Grocery kits to Mechanics 3 scaled

ಪಾವಗಡ: ಮೆಕ್ಯಾನಿಕ್‍, ಪೋಟೋಗ್ರಾಫರುಗಳಿಗೆ ದಿನಸಿ ಕಿಟ್ ವಿತರಣೆ…!

DISTRICT NEWS ತುಮಕೂರು
ಪಾವಗಡದ ಎಲ್ಲಾ ಮೆಕ್ಯಾನಿಕ್‍ಗಳಿಗೂ ಹಾಗೂ ಪೋಟೋಗ್ರಾಫರುಗಳಿಗೆ ದಿನಸಿ ಕಿಟ್ ಮತ್ತು ಸೋಪು ವಿತರಣೆ ಬಹುಶಃ ಇಡೀ ರಾಜ್ಯದಲ್ಲಿಯೇ ಈ ತೆರನಾದ ದಿನಸಿ, ಸೋಪು ಇತ್ಯಾದಿಗಳ ವಿತರಣೆ ಸಮಾಜದ ಪ್ರತಿಯೊಂದು ವರ್ಗದವರಿಗೆ ಸೇರುವಂತಾಗಿಸುವ ಮಹತ್ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಒಡಗೂಡಿ ನಿರಂತರವಾಗಿ ಪ್ರತಿದಿನ ಸರಿಸುಮಾರು 250ಕ್ಕೂ ಹೆಚ್ಚಿನ ಜನರಿಗೆ ಬೇರೆ ಬೇರೆ ಕಾಯಕವನ್ನು ಮಾಡುತ್ತಿರುವ ಕಾರ್ಮಿಕರಿಗೆ ಈ ತತ್‍ಕ್ಷಣದ ಸಹಾಯವನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು. ಪ್ರತಿ ದಿನ ಅತ್ಯಂತ ಶಿಸ್ತುಬದ್ಧವಾಗಿ ಸಾಮಾಜಿಕ ಅಂತರ ಹಾಗೂ ಮುಖಗವಸು ಇತ್ಯಾದಿಗಳ ನಿಯಮಗಳನ್ನು ಪಾಲಿಸುತ್ತಾ ಸಹಸ್ರ ಸಹಸ್ರ ಜನರಿಗೆ ಸಹಾಯ ಹಸ್ತ ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ಕಾರ್ಯಕ್ರಮ ಮನೆ ಮನೆಗೆ ಸಹಾಯ ತಲುಪಿಸುವಂತಹ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ರವರ ಪ್ರಕಾರ ಇದೇ ತೆರನಾಗಿ ಪರಿಸ್ಥಿತಿ ಸುಧಾರಿಸುವವರೆಗೆ ಈ ಸೇವಾ ಯಜ್ಞ ಮುಂದುವರೆಯುತ್ತದೆ ಎಂದು ತಿಳಿಸಿದರು. ಇಂದು ಸುಮಾರು 200 ಜನರಿಗೆ ಬೇರೆ ಬೇರೆ ಸಮಯದಲ್ಲಿ ಶಿಸ್ತುಬದ್ಧವಾಗಿ ದಿನಸಿ ಕಿಟ್ಟುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಪ್ರಸನ್ನಮೂರ್ತಿ, ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಶ್ರೀ ಜಿ.ಸುದೇಶ್ ಬಾಬು, ಹಿರಿಯ ವಕೀಲರಾದ ಶ್ರೀ ಯಜ್ಞನಾರಾಯಣ ಶರ್ಮ, ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್, ಶ್ರೀ ವೇಣುಗೋಪಾಲರೆಡ್ಡಿ, ಶ್ರೀ ಗಿರೀಶ್ ಮತ್ತಿತರರು ಭಾಗವಹಿಸಿದ್ದರು.