a6c273cc 3a6b 4008 b676 cd3de97268e6

ಹಾನಗಲ್‌ ʻ ಶಾಸಕʼ ಸಿಎಂ ಉದಾಸಿ ವಿಧಿವಶ..

Genaral STATE

ಅನಾರೋಗ್ಯದಿಂದ ಬಳಲುತ್ತಿದ್ದಂತ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿಎಂ ಉದಾಸಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ

ಬಿಜೆಪಿಯ ಹಿರಿಯ ಶಾಸಕರಾಗಿದ್ದ  “ಸಿಎಂ ಉದಾಸಿ “85ವರ್ಷ,ರವರು ಇಂದು ನಗರದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ, ಹಾವೇರಿಯ ಹಾನಗಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು,1983 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು,2004 & 2008 ಬಿಜೆಪಿ ಶಾಸಕರಾಗಿ ಗೆಲುವು ಸಾಧಿಸಿ ಇದೆ ರೀತಿ 6ಬಾರಿ ಶಾಸಕರಾಗಿ ಜನತೆಯ ಸೇವೆ ಸಲ್ಲಿಸಿರುತ್ತಾರೆ, ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಎಂದು ಕೋರುತ್ತೇವೆ,

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಿಎಂ ಉದಾಸಿ ಅವರನ್ನು 15 ದಿನದ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದು, ನಾಳೆ (ಬುಧವಾರ) ಹುಟ್ಟೂರಿಗೆ (ಹಾನಗಲ್ಲ) ಪಾರ್ಥಿವ ಶರೀರವನ್ನು ತರಲಾಗುವುದು. ಸಂಜೆ 5ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಿಎಂ ಉದಾಸಿ ಪುತ್ರ, ಸಂಸದ ಶಿವಕುಮಾರ್ ಉದಾಸಿ ಅವರು ತಿಳಿಸಿದ್ದಾರೆ.

ಸಂತಾಪ

ಇಂದು ನಿಧನರಾದ ಹಿರಿಯ ಶಾಸಕ ಸಿ.ಎಂ.ಉದಾಸಿ ಅವರ ಗೌರವಾರ್ಥ ಮುಖ್ಯಮಂತ್ರಿ @BSYBJP ರ, ತಮ್ಮ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ ಎರಡು ನಿಮಿಷಗಳ ಮೌನ ಆಚರಿಸಿದರು. https://t.co/mOzITyVwc3

IMG 20210608 190545

 https://twitter.com/CMofKarnataka/status/1402235980619272195?s=19

ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ರ ಸಂತಾಪ

ಹಿರಿಯ ಬಿಜೆಪಿ ಮುಖಂಡ ಈ ಹಿಂದೆ ನನ್ನ ಸಂಪುಟ ಸದಸ್ಯರಾಗಿದ್ದ ಆತ್ಮೀಯ ಶ್ರೀ ಸಿ ಎಂ ಉದಾಸಿ ಅವರು ಇನ್ನಿಲ್ಲ ಎಂದು ತಿಳಿದು ಅತೀವ ದುಃಖವಾಯಿತು.
ರಾಜ್ಯವು ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಿದೆ.
ಅವರ ಆತ್ಮಕ್ಕೆ ಸದ್ಗತಿ ಉಂಟುಮಾಡು ಮತ್ತು ಕುಟುಂಬದವರು, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. https://t.co/EqgWuedACf

https://twitter.com/DVSadanandGowda/status/1402212262551511042?s=19