IMG 20200625 WA0011

ಪಾವಗಡ ದ್ವಿಚಕ್ರ ವಾಹನ ಡಿಕ್ಕಿ ಇಬ್ಬರು ಸಾವು.

DISTRICT NEWS ತುಮಕೂರು

ಪಾವಗಡ ದ್ವಿಚಕ್ರ ವಾಹನ ಡಿಕ್ಕಿ ಇಬ್ಬರು ಸಾವು.

ಪಾವಗಡ:: ವೇಗವಾಗಿ ಬಂದ ದ್ವಿಚಕ್ರ ವಾಹನ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿದಂತೆ ಹಿಂಬದಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಚಿತ್ರದುರ್ಗ ಮುಖ್ಯ ಮಾರ್ಗದ ನಡುವೆ ಸಿಗುವ ಶೈಲಾಪುರದ ಬಳಿ ನಡೆದಿದೆ.

ರಮೇಶ್( 28) ಹನುಮಂತರಾಯಪ್ಪ (45) ಮೃತ ದುರ್ದೈವಿಗಳಾಗಿದ್ದಾರೆ.
ಇವರಿಬ್ಬರು ತಾಲ್ಲೂಕಿನ ಶೈಲಾಪುರದ ಮೂಲದವರು ಎಂದು ತಿಳಿದು ಬಂದಿದೆ.
ರಮೇಶ್ ಹಾಗೂ ಇನ್ನೋರ್ವರು ಕಡಪಲಕೆರೆಯಲ್ಲಿದ್ದ ತಮ್ಮ ಮಾವನ ಕುರಿಗಳನ್ನು ಮೇಯಿಸಲು ಹೋಗಿ ಎಂದಿನಂತೆ ಮರಳಿ ರಾತ್ರಿ ಶೈಲಾಪುರಕ್ಕೆ ಬರುತ್ತಿದ್ದರು.
ಹಾಗೆಯೇ ಬುಧವಾರ ರಾತ್ರಿ ವೇಳೆ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಹತೋಟಿಗೆ ಬಾರದೆ ಹೊಲದಲ್ಲಿ ಉಳುಮೆಗೆ ಹೋಗಿ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಸವಾರ ರಮೇಶನಿಗೆ ಎದೆಭಾಗಕ್ಕೆ ಬಲವಾಗಿ ಏಟು ಬಿದ್ದಿದೆ ಮತ್ತು ಹಿಂಬದಿ ಕುಳಿತಿದ್ದ ಹನುಮಂತರಾಯಪ್ಪನ ತಲೆಭಾಗಕ್ಕೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ರಮೇಶ ನಿಗೆ ಎಂಟು ತಿಂಗಳಿಂದಷ್ಟೇ ವಿವಾಹವಾಗಿದ್ದ ಅನ್ನುವ ಮಾಹಿತಿಯಿದೆ.

ಅರಸೀಕೆರೆ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಮುಖ್ಯಪೇದೆ ಸಿದ್ದೇಶ್ ಘಟನಾ ಸ್ಥಳಕ್ಕೆ ಬಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವರದಿ: ನವೀನ್ ಕಿಲಾರ್ಲಹಳ್ಳಿ