IMG 20210426 WA0026

ಪಾವಗಡ: ಕೊರೊನಾ ಸೋಂಕು ಹರಡದಂತೆ ರಾಸಾಯನಿಕ ಸಿಂಪಡಣೆ…!

DISTRICT NEWS ತುಮಕೂರು

ಪಾವಗಡ. ಕೊರೋನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ಪುರಸಭೆ ವತಿಯಿಂದ ರಸ್ತೆ ಹಾಗೂ ಚರಂಡಿ ಬದಿಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹಾಗೂ ಅಧ್ಯಕ್ಷ ರಾಮಾಂಜಿನಪ್ಪ ಹಾಗೂ ಸದಸ್ಯರು ಇಂತಹದೊಂದು ಕಾರ್ಯಾಕ್ಕೆ ಕೈ ಹಾಕಿದ್ದು, ಆ ಮೂಲಕ ಪಟ್ಟಣದ ಜನರ ಸುರಕ್ಷತೆಗೆ ಮುಂದಾಗಿದ್ದಾರೆ.ಟ್ರ್ಯಾಕ್ಟರ್ ಹಾಆಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ಸುದೇಶ್ ಬಾಬು ಮಾತನಾಡಿ ಕೋರೊನ 2 ಮಹಾಮಾರಿಗೆ ಈಗಾಗಲೇ ಸರ್ಕಾರ ತೆಗೆದುಕೊಂಡ ಮುನ್ನಚೆರಿಕೆಯ ಕ್ರಮಗಳನ್ನು ಯಾರೂ ಮೀರಬೇಡಿ ಮನೆಯಲ್ಲೇ ಇರಿ ಸರ್ಕಾರದ ಆದೇಶದಂತೆ ನಿಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮಾಸ್ಕ್ ಧರಿಸಿ ಸುರಕ್ಷತೆ ಕಾಪಾಡಿ ಎಂದು ಹೇಳಿದರು ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರವಿ ರಾಜೇಶ್ ವೆಂಕಟರವಣಪ್ಪ. ವಿಜಯಕುಮಾರ್. ಮುಖಂಡರಾದ ಪ್ರಮೋದ್ ಕುಮಾರ್ ಶಾಂತಪ್ಪ ಗಜಿ ಹಾಗೂ ಪುರಸಭೆ ಸಿಬ್ಬಂದಿ ವರ್ಗದವರಾದ ಅರುಣ್ ಕುಮಾರ್ ವೇಣುಗೋಪಾಲ್. ಶಂಸುದ್ದೀನ್. ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು

ವರದಿ: ಬುಲೆಟ್ ವೀರಸೇನಯಾದವ್