images 16

ಪಾವಗಡ: ಮಹಿಳೆ ಬರ್ಬರ ಹತ್ಯೆ…!

DISTRICT NEWS ತುಮಕೂರು

ಪಾವಗಡ: ತಾಲ್ಲೂಕಿನ ಮುರಾರಾಯನಹಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ ಮಹಿಳೆಯೋರ್ವರನ್ನು ಹತ್ಯೆ ಮಾಡಲಾಗಿದೆ.
ಇದೇ ಗ್ರಾಮದ ಲಕ್ಷ್ಮಿನರಸಮ್ಮ(52) ಹತ್ಯೆಗೀಡಾದವರು. ಕುತ್ತಿಗೆಗೆ ವೈರ್ ಬಿಗಿದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಮಹಿಳೆಗೆ ಸೇರಿದ ಕುರಿಗಳು ಗಾಬರಿಗೊಂಡು ಕೂಗುವುದನ್ನು ಕೇಳಿಸಿಕೊಂಡು ನೆರೆ ಹೊರೆಯವರು ಸ್ಥಳಕ್ಕೆ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ನರಳಾಡುವುದನ್ನು ಗಮನಿಸಿ, ನೀರು ಕುಡಿಸಿ ಮಹಿಳೆಯನ್ನು ರಕ್ಷಿಸಲು ಗ್ರಾಮಸ್ಥರು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಆರೋಪಿಯ ಪತ್ತೆಗೆ ತಂಡ ರಚಿಸಿದ್ದಾರೆ.

ವರದಿ: ಶ್ರೀನಿವಾಸುಲು ಎ