IMG 20210125 WA0001

ಪಾವಗಡ: ‘ ಭರ ‘ವಸೆಯ ಸಂಸದರು…..!

DISTRICT NEWS ತುಮಕೂರು

ಗಡಿ ಗ್ರಾಮಗಳಿಗೆ ಸಂಸದರ ಬೇಟಿ

ವೈ.ಎನ್.ಹೊಸಕೋಟೆ : ಹೋಬಳಿಯ ಗಡಿ ಗ್ರಾಮಗಳಾದ ನಾಗಲಾಪುರ ಮತ್ತು ಚಿಕ್ಕಹಳ್ಳಿ ಗ್ರಾಮಗಳಿಗೆ ಚಿತ್ರದುರ್ಗ
ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ಶನಿವಾರದಂದು ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು ಈ ಎರಡು ಗ್ರಾಮಗಳಿಗೆ  ಭರವಸೆಯ ಮಹಾಪೂರವನ್ನೇ ಹರಿಸಿದರು

ಸಂಸದರ ಭರವಸೆ ಗಳು

ಸಿ.ಸಿ.ರಸ್ತೆ, ಸಮುದಾಯ ಭವನ, ವಸತಿ ಸೌಕರ್ಯ,
ಐಮ್ಯಾಕ್ಸ್ ವಿದ್ಯುತ್ ದೀಪ, ರೈತರಿಗೆ ಕೊಳವೆಬಾವಿ ವ್ಯವಸ್ಥೆಗಳನ್ನು ಮಾಡಲಾಗುವುದು. ಅಭಿವೃದ್ಧಿ ನಿಗಮ/
ಮಂಡಲಿಗಳಿಂದ ಸಾಲ ಇನ್ನಿತರ ಸೌಲಭ್ಯಗಳನ್ನು ಕೊಡಿಸಿಕೊಡಲಾಗುವುದು ,ದೇವಾಲಯಗಳ ಅಭಿವೃದ್ದಿಗೆ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.

ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಯವರು ಚುನಾವಣೆ ಗೆದ್ದ ನಂತರ ಅವರಿಗೆ ವೈ ಎನ್ ಹೊಸಕೋಟೆ ಯ ಚೌಡೇಶ್ವರಿ ದೇವಸ್ಥಾನ ದಲ್ಲಿ ಸನ್ಮಾನಿಸಿ ದಾಗ ಅವರ ಭರವಸೆ ಈಗಿತ್ತು…..

ವೈ.ಎನ್ ಹೊಸಕೋಟೆ ಗೆ ವಿಶೇಷ ಪ್ಯಾಕೇಜ್- ಮಾದರಿ ಗ್ರಾಮ ದ ಭರವಸೆ ನೀಡಿದ್ದರು. ನಂತರ  ಇಲ್ಲಿಯ ವರೆಗೂ       ವೈ ಎನ್ ಹೊಸಕೋಟೆ ಗೆ ಭೇಟಿ ನೀಡಲು ಸಮಯ ವೇ ಕೂಡಿ ಬಂದಿಲ್ಲ….

ವರುಷಗಳು ಕಳೆದಿವೆ, ಭರವಸೆ- ಭರವಸೆಗಳಾಗಿಯೆ ಉಳಿದಿವೆ…ನಾಗಲಾಪುರ- ಚಿಕ್ಕಹಳ್ಳಿ ಭರವಸೆ ಗಳಾದರು ನೆರವೇರುತ್ತಾ ಎನ್ನುವುದಕ್ಕೆ  ಕಾಲವೇ ಉತ್ತರಿಸಬೇಕಿದೆ…

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್, ಕೃಷ್ಣಾನಾಯ್ಕ, ಶಿವಕುಮಾರ್ ಸಾಕೇಲ್, ರವಿಶಂಕರ ನಾಯ್ಕ,
ಕೋಟೇಶ್ವರರೆಡ್ಡಿ, ನವೀನ್ ಸೀತಾರಾಮ ನಾಯ್ಕ, ಮಧುಪಾಳೇಗಾರ, ರಾಜೇಂದ್ರ, ರವಿ, ಸುಮಂತ್ ಹಾಜರಿದ್ದರು.