IMG 20211126 WA0014

ವಿಧಾನಪರಿಷತ್ ಚುನಾವಣೆ: ಲೋಕಸಭಾ ಚುನಾವಣೆಯಲ್ಲಿ ಕೆಲವರು ಷಡ್ಯಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು.

DISTRICT NEWS ತುಮಕೂರು

 

ತುಮಕೂರು ನ 26 :  ಇಂದು ಮಾಜಿ ಪ್ರಧಾನಿ ಶ್ರೀ ಹೆಚ್.ಡಿ ದೇವೇಗೌಡರು ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಮತ್ತು ಶಿರಾ ತಾಲೂಕಿನಲ್ಲಿ, ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ಪರವಾಗಿ ಬಹಿರಂಗ ಚುನಾವಣಾ ಸಭೆಗಳಲ್ಲಿ ಪಾಲ್ಗೊಂಡು ಬಿರುಸಿನ ಪ್ರಚಾರ ನಡೆಸಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಕ್ಕೆ ನ್ಯಾಯ ದೊರಕಿಸಿದ್ದು ಜೆಡಿಎಸ್ ಪಕ್ಷ.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವರು ಷಡ್ಯಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು. ಆದರೆ ನಾನು ಅದನ್ನು ಮನದಲ್ಲಿಟ್ಟುಕೊಂಡು ದ್ವೇಷ ರಾಜಕೀಯ ಮಾಡುವವನಲ್ಲ ಎಂದರು

IMG 20211126 WA0016

ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ತಳ ಸಮುದಾಯದಿಂದ ಮೇಲಕ್ಕೆ ಬಂದಿರುವಂತಹ ಉತ್ತಮ ವ್ಯಕ್ತಿಯಾಗಿದ್ದು, ಅವರು ತಮ್ಮ ಪದವಿಗೂ ಕೂಡ ರಾಜೀನಾಮೆ ಸಲ್ಲಿಸಿ ಜನರ ಸೇವೆ ಮಾಡಲು ಬಂದಿದ್ದಾರೆ.ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಕೊಡಬೇಕೆಂದು ಮತಯಾಚಿಸಿದರು.

 

ಈ ವೇಳೆ ಜೆಡಿಎಸ್ ಶಾಸಕರಾದ  ವೀರಭದ್ರಯ್ಯ, ಮಾಜಿ ಶಾಸರಾದ ಸುರೇಶ್ ಬಾಬು, YSV ದತ್ತ, ಕೆ.ಎಂ. ತಿಮ್ಮರಾಯಪ್ಪ, ತುಮಕೂರು ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಅನಿಲ್ ಕುಮಾರ್,  ಹಾಗು ಜಿಲ್ಲಾಧ್ಯಕ್ಷರಾದ  ಅರ್ ಸಿ ಅಂಜಿನಪ್ಪ ಉಪಸ್ಥಿತರಿದ್ದರು.