IMG 20220218 WA0032

ಪಾವಗಡ:ಪಿ.ಎಫ್ಐ, ಎಸ್ಡಿ.ಪಿ.ಐ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ….!

DISTRICT NEWS ತುಮಕೂರು


ಪಿ.ಎಫ್ಐ, ಎಸ್ಡಿ.ಪಿ.ಐ ಸಂಘಟನೆಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ಮೂಲಕ ತನಿಖೆಗೆ ಆಗ್ರಹ. ಪಾವಗಡ…ಹಿಜಾಬ್  ವಿವಾದ ಸೃಷ್ಟಿಸಿ ಮುಸ್ಲಿಂ ವಿದ್ಯಾರ್ಥಿಗಳ ಮುಖೇನವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರತ್ಯೇಕ ವಾದವನ್ನು ನಡೆಸುತ್ತಿರುವ ಹೀನಕೃತ್ಯದ ಹಿಂದೆ PFI-SDPI ಮುಸ್ಲಿಂ ಸಂಘಟನೆ ಕೆಲಸ ಮಾಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಗೌರವಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಹಿಜಾಬ್ ಪ್ರಕರಣಕ್ಕೆ ಮೂಲ ಕಾರಣಕರ್ತರಾದ ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಇದನ್ನು ಬೆಂಬಲಿಸಿ ಸಂಚನ್ನು ರೂಪಿಸಿದವರ ವಿರುದ್ಧ ರಾಷ್ಟ್ರೀಯ_ತನಿಖಾ_ದಳದ ಮುಖಾಂತರವಾಗಿ ಸೂಕ್ತ ತನಿಖೆಯಾಗಬೇಕೆಂದು ವಿಶ್ವ ಹಿಂದೂ  ಪರಿಷತ್ ,ತಾಲೂಕು ಬಜರಂಗದಳ ಮತ್ತು ಶ್ರೀರಾಮ ಸೇನೆಯ ಸದಸ್ಯರು ಮಾನ್ಯ ಮುಖ್ಯಮಂತ್ರಿಗಳಿಗೆ, ಗ್ರೇಡ್ 2 ತಾಸಿಲ್ದಾರ್ ಸುಮತಿ ಮುಖಾಂತರ ಮನವಿ ಮಾಡಿದರು.   ಈ ಸಂದರ್ಭದಲ್ಲಿ ಕಾವಲಗೇರಿ ರಾಮಾಂಜಿನಪ್ಪ, ಅಲ್ಕೂಂದಿ, ರಾಜ್, ರಾಕೇಶ್, ವಾಸು, ಕಾರ್ತಿಕ್, ನರೇಶ್, ಮಂಜುನಾಥ, ಬಾಬು, ರವಿ, ಹರ್ಷ ಉಪಸ್ಥಿತರಿದ್ದರು

ವರದಿ: ಶ್ರೀನಿವಾಸುಲು ಎ