IMG 20220226 WA0054

ಪಾವಗಡ:ಒಂದು ಕೋಟಿಗೂ ಹೆಚ್ಚಿನ ಸಾಲ ಸೌಲಭ್ಯ….!

DISTRICT NEWS ತುಮಕೂರು

ಒಂದು ಕೋಟಿಗೂ ಹೆಚ್ಚಿನ ಸಾಲ ಸೌಲಭ್ಯ….

ಪಾವಗಡ: ಇಂದು ಪಟ್ಟಣದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ರೈತರಿಗೆ ಚೆಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮ ಉದ್ದೇಶಿಸಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ  ಅಧ್ಯಕ್ಷರಾದ  ಎನ್,ಆರ್ ಅಶ್ವಥ್ ಮಾತನಾಡುತ್ತಾ,ಸರ್ಕಾರ ಕೃಷಿಯನ್ನು ಉತ್ತೇಜಿಸಲು ಸ್ಥಾಪನೆ ಮಾಡಿರುವ ಬ್ಯಾಂಕ್ ಇದಾಗಿದ್ದು, ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಶೇ3 ಬಡ್ಡಿಧರದಲ್ಲಿ ಹೆಚ್ಚಿನ ಸಾಲ ಸೌಲಭ್ಯ ಕೊಡಿಸಲಾಗುವುದು ಎಂದು ತಿಳಿಸಿದರು

ತಾಲ್ಲೂಕಿನ ರೈತರಿಗೆ ಇತಿಹಾಸದಲ್ಲಿ ಪ್ರಥಮ ಬಾರಿಗೆ 1 ಕೋಟಿ ರೂ ಗೂ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಕೆಲ ರೈತರು ಸಾಲ ಮರು ಪಾವತಿಸದೆ ಶೇ 14 ರ ಬಡ್ಡಿ ಧರ ಪಾವತಿಸಬೇಕಿದೆ. ಅವರು ಶೀಘ್ರ ಸಾಲ ಮರು ಪಾವತಿ ಮಾಡಿದಲ್ಲಿ ಹೊಸದಾಗಿ ಶೇ 3 ರ ಬಡ್ಡಿ ಧರದಲ್ಲಿ ಸಾಲ ಕೊಡಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಶಾಸಕ ವೆಂಕಟರವಣಪ್ಪ ರೈತರಿಗೆ ಸಾಲದ ಚೆಕ್ ಗಳನ್ನು ವಿತರಿಸಿದರು.ನಿರ್ದೇಶಕ ಸೀತಾರಾಮು, ಎನ್ ಶೇಷಗಿರಿ, ಎಂ.ಎಲ್ ಗೋಪಿ ಮಹಲಿಂಗಪ್ಪ, ಪೆದ್ದಾರೆಡ್ಡಿ, ನಾಗಣ್ಣ ಉಪಸ್ಥಿತರಿದ್ದರು.