IMG 20220331 WA0014

ಪಾವಗಡ: ಕ್ಷಣಾರ್ಧದಲ್ಲಿ ತಪ್ಪಿದ ಬಸ್ ದುರಂತ….!

DISTRICT NEWS ತುಮಕೂರು

ನಿಯಂತ್ರಣ ತಪ್ಪಿದ ಖಾಸಿಗೆ ಬಸ್ ..  ಚಾಲಕ ಪರಾರಿ.                                                 

ಪಾವಗಡ . ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ, ಚರಂಡಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ತಾಲೂಕಿನ  ಚಿನ್ನಮ್ಮನಹಳ್ಳಿ ಮುಖಾಂತರ ಕೋಣನ ಕುರಿಕೆಗೆ ಬರುವ ಸಂದರ್ಭದಲ್ಲಿ ಎದುರಿಗೆ ಬರುತ್ತಿರುವ ಆಟೋರಿಕ್ಷಾವನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ   ಖಾಸಗಿ ಬಸ್ ಚರಂಡಿಗೆ ಬಿದ್ದಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ ವೆಂದು, ಕೊಣನಕುರಿಕೆ ಗ್ರಾಮಸ್ಥರು ತಿಳಿಸಿದರು,

IMG 20220331 WA0009

ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗವೇ ಈ ದುರಂತಕ್ಕೆ ಕಾರಣ ವೆಂದು,  ಚರಂಡಿಗೆ ಬಸ್ ಬಿದ್ದ ತಕ್ಷಣ ಬಸ್ ಚಾಲಕ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ, ಎಂದು  ಬಸ್ಸಿನಲ್ಲಿ ಪ್ರಯಾಣಿಸಿದ  ಕುಮಾರ ತಿಳಿಸಿದ್ದಾನೆ, ಪಳವಳ್ಳಿ ಕಟ್ಟೆಯ ಖಾಸಗಿ ಬಸ್ ದುರಂತ ಮಾಸುವ ಮುನ್ನವೇ ಇಂತಹ ಘಟನೆ ಆಗಿರುವುದು ಜನರಲ್ಲಿ ಆತಂಕ ತಂದಿದೆ, ಎಂದು ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಬೇಕೆಂದು ಕೋಣನ ಕುರಿಕೆ ಗ್ರಾಮಸ್ಥರು ಆಗ್ರಹಿಸಿದರು.

ವರದಿ: ಶ್ರೀನಿವಾಸುಲು ಎ