IMG 20220408 WA0012

ಪಾವಗಡ: ಸರ್ಕಾರಿ ಬಸ್ ವ್ಯವಸ್ಥೆ ಕಲಿಸುವಂತೆ ಮನವಿ…

DISTRICT NEWS ತುಮಕೂರು

ಸರ್ಕಾರಿ ಬಸ್ ವ್ಯವಸ್ಥೆ ಕಲಿಸುವಂತೆ ಸಾರಿಗೆ ಸಚಿವರಿಗೆ ಮನವಿ. ಪಾವಗಡ… ಇಂದು ತಾಲೂಕಿನ ಕೊಡಮಡಗು ಗ್ರಾಮ ಪಂಚಾಯತಿಯ ಅಧ್ಯಕ್ಷರು ಬಳ್ಳಾರಿಯಲ್ಲಿ ಸಾರಿಗೆ ಸಚಿವರಾದ ಶ್ರೀರಾಮುಲು ರವರನ್ನು ಭೇಟಿ ನೀಡಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಪತ್ರ ಸಲ್ಲಿಸಿದರು. ಕಸಬಾ ಹೋಬಳಿಯ ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 6 ಗ್ರಾಮಗಳಿಗೆ ಬಸ್ ಸೌಕರ್ಯ ವಿಲ್ಲದೆ ದೈನಂದಿನ ಕೆಲಸಗಳಿಗಾಗಿ, ಶಾಲಾ-ಕಾಲೇಜುಗಳಿಗೆ ಪಟ್ಟಣಕ್ಕೆ ಬರುವವರ ಸಂಖ್ಯೆ ಜಾಸ್ತಿ ಇದು , ಲಗೇಜ್ ಆಟೋಗಳ ಮೇಲೆ ಅವಲಂಬನೆ ಆಗಬೇಕಾಗಿರುವ ಪರಿಸ್ಥಿತಿ ಉಂಟಾಗಿದೆ ಎಂದು ಕೊಡಮಡಗು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಮೀನಾಕುಮಾರಿ ಅವರ ಪತಿ ಶಿವಪ್ಪ ಮನವಿ ಪತ್ರವನ್ನು ಸಾರಿಗೆ ಸಚಿವರಿಗೆ ನೀಡುವ ಮೂಲಕ ಸಮಸ್ಯೆಯನ್ನು ತಿಳಿಸಿದರು. ನಂತರ ಸಚಿವ ಶ್ರೀರಾಮುಲು ಮಾತನಾಡುತ್ತಾ, ಇನ್ನು ಒಂದು ತಿಂಗಳ ಒಳಗಾಗಿ ಗಡಿನಾಡು ಪ್ರದೇಶವಾದ ಪಾವಗಡಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ವರದಿ: ಶ್ರೀನಿವಾಸುಲು