IMG 20240221 WA0023

ಪಾವಗಡ: ವಿಜೃಂಭಣೆಯ ಸಂವಿಧಾನ ಜಾಗೃತಿ ಜಾಥಾ….!

DISTRICT NEWS ತುಮಕೂರು

ವಿಜೃಂಭಣೆಯ ಸಂವಿಧಾನ ಜಾಗೃತಿ ಜಾಥಾ

ವೈ.ಎನ್.ಹೊಸಕೋಟೆ ಹಾಗೂ ಸಿದ್ದಾಪುರದಲ್ಲಿ ಪೂರ್ಣಕುಂಭದೊಂದಿಗೆ ರಥಕ್ಕೆ ಸ್ವಾಗತ ವಾದ್ಯಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ ಯುವಜನತೆ

ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹಾಗೂ ಸಿದ್ದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಬುಧವಾರ ಅದ್ಧೂರಿಯಾಗಿ ನೆರವೇರಿತು.
ವೈ.ಎನ್.ಹೊಸಕೋಟೆ ಹಾಗೂ ಸಿದ್ದಾಪುರ ಪುರಬೀದಿಗಳಲ್ಲಿ ಪೂರ್ಣಕುಂಭ ಕಳಶಗ ಳೊಂದಿಗೆ ವಿದ್ಯಾರ್ಥಿಗಳು, ಮಹಿಳಾ ಸಂಘಗಳ ಸದಸ್ಯರು ಮತ್ತು ಸಾರ್ವಜನಿಕರು ಮೆರವಣಿಗೆ ನಡೆಸಿದರು.

ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆಯೊಂದಿಗೆ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ಮತ್ತು ಯುವಜನತೆ ವಾದ್ಯಗಳಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಗ್ರಾಮ ಪಂಚಾಯಿತಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಬಾಲಕರ ಶಾಲೆಯ ಮುಖ್ಯಶಿಕ್ಷಕ ಐ.ಎ.ನಾರಾಯಣಪ್ಪ ಸಂವಿದಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಗ್ರಾಪಂ ಅಧ್ಯಕ್ಷ ಸೈಯದ್ ಶಾನವಾಜ್, ಉಪಾಧ್ಯಕ್ಷೆ ಶೋಭಾ, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಗಂಗೋತ್ರಿ ರಮೇಶ್‌ಬಾಬು, ಉಪಾಧ್ಯಕ್ಷ ಈರಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಇತರರು ಇದ್ದರು.

ವರದಿ : ನಂದೀಶ ನಾಯಕ್ – ವೈ ಎನ್ ಎಚ್