IMG 20220530 WA0000

ಪಾವಗಡ:ವಾಲೀಬಾಲ್ ಟೂರ್ನಮೆಂಟ್..!

DISTRICT NEWS ತುಮಕೂರು

ವಾಲೀಬಾಲ್ ಟೂರ್ನಮೆಂಟ್

ವೈ.ಎನ್. ಹೊಸಕೋಟೆ: ಗ್ರಾಮೀಣ ವಾಲೀಬಾಲ್ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಸಿಕೊಡುವಲ್ಲಿ ಗ್ರಾಮದ ಚಾಮುಂಡಿ ವಾಲಿಬಾಲ್ ಸ್ಫೋರ್ಟ್ಸ್ ಕ್ಲಬ್ ಸಹಕಾರಿಯಾಗಲಿದೆ ಎಂದು ಬಿಜೆಪಿ ಮುಖಂಡ ಕೃಷ್ಣ ನಾಯ್ಕ ತಿಳಿಸಿದ್ದಾರೆ.

ಗ್ರಾಮದ ಚಾಮುಂಡೇಶ್ವರಿ ಹತ್ತಿ ಕೈಮಗ್ಗ ನೇಕಾರ ಸಹಕಾರಿ ಸಂಘ ಮೈದಾನದಲ್ಲಿ ಭಾನುವಾರದಂದು ಚಾಮುಂಡಿ ವಾಲಿಬಾಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಹೋಬಳಿ ಮಟ್ಟ ವಾಲಿಬಾಲ್ ಅಂತಿಮ ಪಂದ್ಯಾವಳಿ ಸಸಿ ನೆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಯುವ ವಾಲಿಬಾಲ್ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ಉತ್ತಮ ತರಬೇತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಎನ್. ಆರ್. ಅಶ್ವತ್ ಕುಮಾರ್ ಮಾತನಾಡಿದರು. ಪಂದ್ಯಾವಳಿಯಲ್ಲಿ ಅನಿಲ್ ರಿವೇಂಜರ್ಸ್ ಟೀಮ್ ಪ್ರಥಮ ಬಹುಮಾನ ಪಡೆಯಿತು. ರಮೇಶ್ ಬ್ಲಾಸ್ಟರ್ ತಂಡ ದ್ವಿತೀಯ ಬಹುಮಾನ ಪಡೆಯಿತು.

ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಸಾದ್, ಪ್ರೊಬೆಷನರಿ ಇನ್ಸ್ಪೆಕ್ಟರ್ ವಿಜಯಕುಮಾರ್, ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್, ಟೂರ್ನಿಮೆಂಟ್ ವ್ಯವಸ್ಥಾಪಕರು ಪ್ರಸಾದ್, ಉಪಾಧ್ಯಕ್ಷ ಶಿವಬಾಬಾ, ಕ್ರೀಡಾಪಟುಗಳಾದ ರಮೇಶ್, ವೆಂಕಟೇಶ್ ಪ್ರಸಾದ್, ತಿಪ್ಪೇಸ್ವಾಮಿ, ಮುರಳಿ ಇದ್ದರು.

ವರದಿ: ಸತೀಶ್