IMG 20220629 WA0036

ಪಾವಗಡ:ಅಕ್ರಮ ಮದ್ಯ ಮಾರಾಟ ತಡೆಯುವಂತೆ ಅಬಕಾರಿ ನಿರೀಕ್ಷರಿಗೆ ಮನವಿ…!

DISTRICT NEWS ತುಮಕೂರು

ಅಕ್ರಮ ಮದ್ಯ ಮಾರಾಟ ತಡೆಯುವಂತೆ ಅಬಕಾರಿ ನಿರೀಕ್ಷಕ ಶಂಕರ್ ಗೆ ಹೆಲ್ಪ್ ಸೊಸೈಟಿ ಮನವಿ…

ಪಾವಗಡ….. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಅಕ್ರಮ ಮಧ್ಯ ಮಾರಾಟ ಪೆಟ್ಟಿಗೆಗಳ ಮೇಲೆ ದಾಳಿ ನಡೆಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಅಬಕಾರಿ ನಿರೀಕ್ಷಕ ಶಂಕರ್ ರವರಿಗೆ ಮನವಿ ಪತ್ರ ಸಲಿಸಿ ಮಾತನಾಡಿದರು. ಪಟ್ಟಣದ ಪ್ರಮುಖ ರಸ್ತೆಗಳಾದ ಎಸ್‌.ಎಸ್‌.ಕೆ ಸಮುದಾಯ ಭವನ, ಶಿರಾ ರಸ್ತೆ, ಬಳ್ಳಾರಿ ರಸ್ತೆ, ಪೆನುಗೊಂಡ ರಸ್ತೆ ಬದಿಗಳಲ್ಲಿರುವ ಕೆಲವು ಪೆಟ್ಟಿಗೆ ಅಂಗಡಿ ಗಳು ಮಧ್ಯ ಮಾರಾಟ ಕೇಂದ್ರಾಗಳಾಗಿವೆ, ಅವುಗಳನ್ನು ತಡೆಯುವ ಕೆಲಸ ಅಬಕಾರಿ ಇಲಾಖೆ ಮಾಡಬೇಕು ಎಂದರು.. ಎಗ್ಗಿಲ್ಲದೆ ಎಲ್ಲಾ ಕಡೆಯಲ್ಲಿಯೂ ಮದ್ಯ ಸಿಗುವುದರಿಂದ ಹೆಚ್ಚಿನ ಕೂಲಿ ಕಾರ್ಮಿಕರು ಮದ್ಯಕ್ಕೆ ಗುಲಾಮರಾಗಿ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಆಟೋಚಾಲಕರ ಅಧ್ಯಕ್ಷರಾದ ನಾಗರಾಜ್, ಸೀನ,ರಾಜು, ಗೌತಮ್, ಸಾಗರ್,ಸಾಯಿ ಕುಮಾರ್, ಇದ್ದರು

ವರದಿ: ಶ್ರೀನಿವಾಸಲು ಎ