IMG 20220709 WA0018

ಆನೇಕಲ್ : ರಸ್ತೆ ಕಾಮಗಾರಿಗೆ ಚಾಲನೆ…!

DISTRICT NEWS ಬೆಂಗಳೂರು

ಆನೇಕಲ್ ವಿಧಾನ ಸಭಾ ಕ್ಷೇತ್ರದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪವಡೇರಹಳ್ಳಿ ಗ್ರಾಮದಿಂದ ಸುರಗಜಕ್ಕನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಿ.ಶಿವಣ್ಣ ರವರು. ಈ ವೇಳೆ ಶಾಸಕ ಮಾತನಾಡಿ ಶಾಸಕರ ವಿಶೇಷ ಅನುಧಾನದಲ್ಲಿ ಸುಮಾರು 40 ಲಕ್ಷರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಮಾಡಲಾಗುತ್ತಿದೆ ಎಂದರು. ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಆದರೆ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಅನುಧಾನ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಮ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಗ್ರಾ.ಪಂ ಉಪಾದ್ಯಕ್ಷೆ ರತ್ನಮ್ಮ ರಾಜಪ್ಪ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶಾಂತಮ್ಮ ಬೈರೇಗೌಡರು, ಸದಸ್ಯರಾದ ಚಂದ್ರಶೇಖರ್,ಸತೀಶ್, ವೇಣುಗೋಪಾಲ್ ರೆಡ್ಡಿ, ಚಿಕ್ಕಹಾಗಡೆ ಜಗದೀಶ್, ಮುಖಂಡರಾದ ಲಷ್ಮಣ್ ಮೂರ್ತಿ, ಮದುಗೌಡ, ನರಸಿಂಹ, ಮಹದೇವ್, ವೇಣು, ಕುಮಾರ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ಹರೀಶ್