IMG 20220804 WA0031

ಜಯಮಂಗಲಿ ನದಿ ಜಲಾವೃತಗೊಂಡ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯರ ಭೇಟಿ….!

DISTRICT NEWS ತುಮಕೂರು

*ಜಯಮಂಗಲಿ ನದಿ ಮೈದುಂಬಿ ಅರಿಯುತ್ತಿರುವುರಿಂದಜಲಾವೃತ ಗೊಂಡಿರುವ ಗ್ರಾಮಗಳಿಗೆ ಭೇಟಿ ನೀಡಿದ ತುಮಕೂರು ಜಿಲ್ಲಾ ವಿಧಾನ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ*…

ಮಧುಗಿರಿ ತಾಲೂಕಿನ ಕೂಡಿಗೇನ ಹಳ್ಳಿ ಹತ್ತಿರಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿಯ . ಪಕ್ಕದಲ್ಲಿರುವಸೂರನಾಗೇನ ಹಳ್ಳಿ .ರೆಡ್ಡಿ ಹಳ್ಳಿ.ಗ್ರಾಮಗಳು ತುಂಬಾ ಜಲಾವೃತಗೊಂಡಿದ್ದು ಜನರು ಜೀವನ ಮಾಡಲು ಹಸ್ತವ್ಯಸ್ತಗೊಂಡಿದ್ದಾರೆ.

IMG 20220804 WA0030

ವಿಷಯ ತಿಳಿದ ತಕ್ಷಣ ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿರುವ ಗ್ರಾಮಗಳ ಜನರ ನೋವು ನಲಿವು ಯೋಗಕ್ಷೇಮವನ್ನು ವಿಚಾರಿಸಲು ವಿಧಾನ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ ಭೇಟಿ ನೀಡಿ ಸರ್ಕಾರದ ವತಿಯಿಂದ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಆ ಗ್ರಾಮದ ಜನತೆಯಿಂದ ಪಡೆದು ಮುಂದೆ ಇನ್ನೂ ಏನು ಗ್ರಾಮಕ್ಕೆ ಅನುಕೂಲವಾಗಬೇಕು ಎಲ್ಲವನ್ನು ಮಾಡಿಸುತ್ತೇನೆ ಎಂದರು.

ನೀವು ಯಾರು ಕೂಡ ಹಸುವಿನಿಂದ ಇರಬಾರದು ನಿಮಗೆ ಏನೇ ತೊಂದರೆ ಆದರೂ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರವನ್ನು ಮುಟ್ಟಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆದಿ ನಾರಾಯಣ ರೆಡ್ಡಿ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಜೆಡಿ ವೆಂಕಟೇಶ್. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಂಚಾಕ್ಷರಯ್ಯ ಕೊಡಿಗೇನಹಳ್ಳಿ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು…

ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು