IMG 20220805 WA0025

ಪಾವಗಡ:ಮಳೆ ಆವಾಂತರ : ಪೆಟ್ರೋಲ್- ನೀರು ಬೆರಕೆ…!

DISTRICT NEWS ತುಮಕೂರು

. ಮಳೆ ಆವಾಂತರ : ಪೆಟ್ರೋಲ್ ಗೆ ನೀರು ಬೆರಕೆ…!

ಪಾವಗಡ.. ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಮೇಲೆ  ತುಂಬಿ ಹರಿದ ನೀರು ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ಮಿಶ್ರಿತವಾಗಿರುವ ಘಟನೆ ತಾಲೂಕಿನ ವೈಎನ್ ಹೊಸಕೋಟೆಯ ಶ್ರೀ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.                                       

IMG 20220805 WA0025 1
ಪೆಟ್ರೋಲ್ ಬಂಕ್

ಗ್ರಾಹಕರೋಬ್ಬರು ಕ್ಯಾನ್ ನಲ್ಲಿ ಪೆಟ್ರೋಲ್ ತುಂಬಿಸಿ ಕೊಂಡಾಗ ಈ ಘಟನೆ ಬೆಳಕಿಗೆ ಬಂದಿರುವುದಾಗಿ  ತಿಳಿದು ಬಂದಿದೆ. ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ನ  ಮಾಲೀಕರು ಮಾತನಾಡಿ. ಹೆಚ್ಚಿನ ಮಳೆಯಿಂದಾಗಿ ಪೆಟ್ರೋಲ್ ನ ಜೊತೆ ನೀರು ಮಿಶ್ರಣವಾಗಿದ್ದು, ತಮ್ಮ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡಿರುವ ಗ್ರಾಹಕರಿಗೆ ತೊಂದರೆಯಾಗಿ. ಬಂದು ಕೇಳಿದರೆ ಹಣ ವಾಪಸ್ ಮಾಡುವುದಾಗಿ, ಹಾಗೂ ಪೆಟ್ರೋಲ್ ನಿಂದಾಗಿ ಗ್ರಾಹಕರ  ಗಾಡಿಗೆ ಏನಾದರೂ ಸಮಸ್ಯೆ ಉಂಟಾಗಿದ್ದರೆ ಅಂತ ಗಾಡಿಯನ್ನು ಸಹ ರಿಪೇರಿ ಮಾಡಿಸಿಕೊಡದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.                   

 ಸ್ಥಳಕ್ಕೆ ಆಗಮಿಸಿದ  ವೈಎನ್ ಹೊಸಕೋಟೆಯ ಪೊಲೀಸರು ಪೆಟ್ರೋಲ್ ಬಂಕನ್ನು ತಾತ್ಕಾಲಿಕವಾಗಿ ಮುಚ್ಚಿಸಿದ್ದಾರಂತೆ.