FB IMG 1662118637815

ಪಾವಗಡ:ಸರ್ಕಾರಿ  ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ…!

DISTRICT NEWS ತುಮಕೂರು

ಸರ್ಕಾರಿ  ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಹಾಗೂ ಮಂಗಳಮುಖಿಯರಿಗೆ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮದ ಮೂಲಕ 

ತೆಲುಗು ಚಿತ್ರನಟ ಪವನ್ ಕಲ್ಯಾಣ್ ಹುಟ್ಟು ಹಬ್ಬ ಆಚರಣೆ.

ಪಾವಗಡ.: ಮಂಗಳಮುಖಿಯರಿಗೆ ತಾಲ್ಲೂಕು ಆಡಳಿತ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ನಿಡಗಲ್ ವಾಲ್ಮೀಕಿ ಗುರು ಪೀಠದ ಶ್ರೀ ಸಂಜಯ್ ಕುಮಾರ್ ಸ್ವಾಮೀಜಿ ಮನವಿ ಮಾಡಿದರು.

ಪಾವಗಡ ಪಟ್ಟಣದ ಮೆಹರ್ ಬಾಬಾ ಸಭಾಂಗಣದಲ್ಲಿ ಖ್ಯಾತ ತೆಲುಗು ಚಿತ್ರ ನಟ ಪವನ್ ಕಲ್ಯಾಣ್ 51 ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಮಂಗಳಮುಖಿಯರಿಗೆ ದಿನಸಿ ಕಿಟ್ ಮತ್ತು ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

  ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಕಾರ್ಯಕ್ಕೆ ಮೆಚ್ಚುಗೆಯ ಆಶೀರ್ವಚನಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭೆ ಸದಸ್ಯ ಮನು ಮಹೇಶ್ ಹೆಲ್ಪ್ ಸೊಸೈಟಿ ಸೇವಾ ಕಾರ್ಯ ಪ್ರಚಾರಕ್ಕಲ್ಲಾ ಪ್ರೇರಣೆಗಾಗಿ, ಎಂದು ಬಣ್ಣಿಸಿದರು.                                             

ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸಂದ್ಯಾ ಮಾನಂ ಶಶಿಕಿರಣ್, ವೀರಮ್ಮನಹಳ್ಳಿ ಲೋಕೇಶ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅನಿಲ್, ಪವನ್ ಕಲ್ಯಾಣ್ ಅಭಿಮಾನಿ ಮಂಜು,ರಾಕೇಶ್, ಶಶಿಕಲಾ ಹಾಗೂ ಪವನ್ ಕಲ್ಯಾಣ್ ಅಭಿಮಾನಿಬಳಗ, ಮಂಗಳಮುಖಿಯರ ಮುಖ್ಯಸ್ತೆ ರೇಖಾ,ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯವಿದ್ಯಾರ್ಥಿಗಳು, ಮುಖ್ಯ ಶಿಕ್ಷಕ ಮಾರುತೇಶ್, ಶಿಕ್ಷಕಿ ಶೋಭಾ, ಬೇಕರಿ ನಾಗರಾಜ್, ಪತ್ರಕರ್ತ ಲೋಕೇಶ್ ಪಾಳೆಗಾರ್ ಇತರರು ಹಾಜರಿದ್ದರು.