IMG 20211222 WA0023

ಪಾವಗಡ:ಅಂಗನವಾಡಿ ಕೇಂದ್ರಕ್ಕೆ ಅವಶ್ಯ ಸಾಮಗ್ರಿಗಳ ವಿತರಣೆ…!

DISTRICT NEWS ತುಮಕೂರು

ಹೆಲ್ಪ್ ಸೊಸೈಟಿ ವತಿಯಿಂದ ಬ್ಯಾಡನೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅವಶ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ……………………..
ಈ ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ರಾದ ಮಾನಂ ಶಶಿಕಿರಣ್, ಮಾತನಾಡಿ ಇಂದು ಬ್ಯಾಡನೂರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅವಶ್ಯಕತೆ ಇದ್ದ ಸಾಮಗ್ರಿಗಳನ್ನು ಒದಗಿಸಿದೆವು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳು ಮಾಡುತ್ತೇವೆ ಎಂದು ಭರವಸೆ ಕೊಟ್ಟರು
ಬ್ಯಾಡನೂರು ಶಾಲೆಯ ಶಿಕ್ಷಕರು ಮಾತನಾಡಿ ನಮ್ಮ ಶಾಲೆಯಲ್ಲಿ ಸುಮಾರು 110 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಅತಿ ಹೆಚ್ಚು ಜನ ಬಡ ಮಕ್ಕಳಿದ್ದು ಅವರಿಗೆ ನೋಟ್ ಬುಕ್ ಅವಶ್ಯಕತೆ ಇದ್ದು ಸಹಾಯ ಮಾಡಬೇಕೆಂದು ಕೇಳಿದಾಗ ಮಾನಂ ಶಶಿಕಿರಣ್ ಸಹೃದಯದಿಂದ ಒಪ್ಪಿದರು ಖಂಡಿತಾ ಹೆಲ್ಪ್ ಸೊಸೈಟಿ ಕಡೆಯಿಂದ ಮಾಡಿಕೊಡುವುದಾಗಿ ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಬ್ಯಾಡನೂರು ಶಿವು, ಹಾಲು ಒಕ್ಕೂಟದ ನಿರ್ದೇಶಕರಾದ ವೇಣುಗೋಪಾಲ ರೆಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವರಮಹಾಲಕ್ಷ್ಮಿ, ಯುವ ಮುಖಂಡರಾದ ಅನಿಲ್ ಕುಮಾರ್, ರಾಕೇಶ್,ವೆಂಕಟೇಶ್, ವೀರ, ಅಶೋಕ್, ಸೀನು,ಅಂಗನವಾಡಿ ಕಾರ್ಯಕರ್ತೆ ಮಂಜುಳ, ಭವಾನಿ ನಾಗವೇಣಿ, ಸಿದ್ದಗಂಗಮ್ಮ ಮತ್ತಿತರರು ಹಾಜರಿದ್ದರು.