Screenshot 2022 09 07 18 03 10 470

ಪಾವಗಡ:ಹಳ್ಳದ ನೀರಿನ  ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ. 

DISTRICT NEWS ತುಮಕೂರು

ಹಳ್ಳದ ನೀರಿನ  ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ.           ಪಾವಗಡ.. ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಕೆರೆ ಕುಂಟೆ ,ಹಳ್ಳಗಳು ತುಂಬಿ ಹರಿಯುತ್ತಿದ್ದು, ಬುಧವಾರ ಹಳ್ಳದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ  ಆರ್ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.               

ಮೃತ ವ್ಯಕ್ತಿ ಆರ್ ಹೊಸಕೋಟೆಯ ವಾಸಿ ಕರೆಕಲ್ಲಪ್ಪ ( 50 ) ಎಂದು ತಿಳಿದುಬಂದಿದ್ದು, ರಾಜವಂತಿ ಕೆರೆ ಕೋಡಿ ನೀರು ರಭಸವಾಗಿ ಹಳ್ಳದ ಮೂಲಕ ಹರಿಯುತ್ತಿದ್ದು,                         ಮೃತ ವ್ಯಕ್ತಿ ಬೆಳಿಗ್ಗೆ ತನ್ನ ಜಮೀನಿಗೆ ಹೋದಂತಹ ಸಂದರ್ಭದಲ್ಲಿ ಕಾಲು ಜಾರಿ ಜೋರಾಗಿ ಹರಿಯುತ್ತಿರುವ ಹಳ್ಳದಲ್ಲಿ ಬಿದ್ದಿದ್ದು, ಕುರಿಗಾಹಿಗಳು ಬೇಲಿಯಲ್ಲಿ ಸಿಲುಕಿಕೊಂಡಿದ್ದ ಮೃತ ದೇಹವನ್ನು ಕಂಡು ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.     

ವರದಿ: ಶ್ರೀನಿವಾಸಲು ಎ