15 ynh 01

ಪಾವಗಡ: ಸಂಘಟನಾ ಶಕ್ತಿಯಿಂದ ಪ್ರಗತಿ ಸಾಧ್ಯ…!

DISTRICT NEWS ತುಮಕೂರು

ಸಂಘಟನಾ ಶಕ್ತಿಯಿಂದ ಪ್ರಗತಿ ಸಾಧ್ಯ
ವೈ.ಎನ್.ಹೊಸಕೋಟೆ ; ಸಮುದಾಯಗಳು ಸಂಘಟನಾ ಶಕ್ತಿಯನ್ನು ಹೊಂದಿದರೆ ಪ್ರಗತಿ ಸಾದ್ಯವಾಗುತ್ತದೆ ಎಂದು ಸ್ಥಳೀಯ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆದಿನಾರಾಯಣ ಚಾರಿ ತಿಳಿಸಿದರು.
ಗ್ರಾಮದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 5 ನೇ ವರ್ಷದ ವಿಶ್ವಕರ್ಮ ಜಯಂತಿಯನ್ನು ಆಚರಿಸಿದ ವೇಳೆ ಮಾತನಾಡಿದ ಅವರು, ದೊಡ್ಡ ಸಮುದಾಯವಾಗಲೀ ಅಥವಾ ಸಣ್ಣ ಸಮುದಾಯವಾಗಲೀ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಸಂಘಟನೆಯೊಂದಿಗೆ ಮುನ್ನಡೆದರೆ ಸಮುದಾಯದ ಸಮಸ್ಯೆಗಳ ಜೊತೆಗೆ ಕುಟುಂಬದ ಸಮಸ್ಯೆಗಳನ್ನು ಮೀರಿ ಬೆಳೆಬಹುದು. ಸಂಘದ ವತಿಯಿಂದ ಜಯಂತಿ ಆಚರಿಸುತ್ತಿದ್ದು, ಸಮುದಾಯದ ಜನತೆಗೆ ಅಸಂಘಟಿತ ವಲಯದ ಇಲಾಖೆಯ ಗುರುತಿನ ಚೀಟಿ ಕೊಡಿಸಿಕೊಟ್ಟು ಸಮುದಾಯದ ಪ್ರಗತಿ ಶ್ರಮಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಪಂಚಾಯಿತಿ ಅಧ್ಯಕ್ಷೆ ಹನುಮಕ್ಕ, ಮುಖಂಡರಾದ ಉಮೇಶ್, ಎಲ್.ಕೆ.ರಘು, ಸಮುದಾಯದ ನಾಗಭೂಷಣಚಾರಿ, ಪ್ರಸಾದಚಾರಿ, ಅಂಜನಾಚಾರಿ, ಮಣಿಕಂಠ, ಶಿವಶಂಕರಾಚಾರಿ, ಉಮಕಾಂತ, ಮಧುಸೂಧನಾಚಾರಿ, ಕುಮಾರ್, ಕೌಶಿಕ್ ಮತ್ತು ಸಂಘದ ಮಹಿಳಾ ಸದಸ್ಯರು ಇದ್ದರು.

ವರದಿ: ರಾಮಚಂದ್ರ- ವೈಎನ್ ಎಚ್