IMG 20220927 WA0017

ಮಧುಗಿರಿ:ಯರಮಲ್ಲನ ಹಳ್ಳಿ ಗ್ರಾಮದ ರೈತನ ಮೇಲೆ ಕರಡಿ ದಾಳಿ….

DISTRICT NEWS ತುಮಕೂರು

ಯರಮಲ್ಲನಹಳ್ಳಿ ಗ್ರಾಮದ ರೈತನ ಮೇಲೆ ಕರಡಿ ದಾಳಿ….

ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಹೋಬಳಿ ಯರಮಲ್ಲನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ರೈತನಾದ
ಸುಮಾರು 45 ವರ್ಷ ವಯಸ್ಸು ಶ್ರೀ ರಾಮರೆಡ್ಡಿ ಬಿನ್ ತಿಮ್ಮ ರೆಡ್ಡಿ ಅವರು ದಿನನಿತ್ಯದಂತೆ ದನಕರುಗಳಿಗೆ ಮೇವು ತರಲು ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗಿಡಗಳ ಪೊದೆಯಲ್ಲಿ ಅಡಗಿದ್ದ ಕರಡಿಯು ಏಕಾಏಕಿ ಶ್ರೀರಾಮ್ ರೆಡ್ಡಿ ಯ ಮೇಲೆ ದಾಳಿ ಮಾಡಿ ಕೈಗಳು ಗಾಯಗೊಳಿಸಿರುತ್ತದೆ .ಭಯಭೀತನಾದ ರೈತನು ದಿಕ್ಕು ತೋಚದೆ ಗಾಬರಿಗೊಂಡು ಕೂಗಾಡಿದ್ದಾನೆ. ಕೂಗಾಟವನ್ನು ಕೇಳಿಸಿಕೊಂಡಂತಹ ಪಕ್ಕದಲ್ಲಿ ಇದ್ದಂತಹ ಗ್ರಾಮಸ್ಥರು ಓಡಿ ಹೋಗಿ ನೋಡಿದಾಗ ಕರಡಿ ದಾಳಿ ಮಾಡಿ ಗಾಯಗೊಳಿಸಿರುವುದನ್ನು ನೋಡಿದ ಗ್ರಾಮಸ್ಥರು ಕರಡಿಯನ್ನು ಓಡಿಸಿದ್ದಾರೆ

IMG 20220927 WA0018

ರೈತನಾದ ಶ್ರೀರಾಮ ರೆಡ್ಡಿ ಪ್ರಾಣ ಅಪಾಯದಿಂದಪಾರಾಗಿರುತ್ತಾರೆ. ಗ್ರಾಮಸ್ಥರು ಕರಡಿ ದಾಳಿಗೆ ಒಳಗಾಗಿ ಗಾಯಗೊಂಡ ರೈತನನ್ನು ಹತ್ತಿರದ ಐಡಿ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ. ತದನಂತರ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಆದಷ್ಟು ಬೇಗನೆ
ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿಚಿಕಿತ್ಸೆ ಕೊಡಿಸಿಎಂದು ಸೂಚಿಸಿರುತ್ತಾರೆ.

IMG 20220927 WA0019

ಅದರಂತೆ ಶ್ರೀರಾಮ ರೆಡ್ಡಿ ಸಂಬಂಧಿಕರು ಹೆಚ್ಚಿನ ಚಿಕಿತ್ಸೆಗಾಗಿ.ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.

ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು