Screenshot 2022 10 07 12 38 21 816 com.google.android.apps .nbu .files

ಮಧುಗಿರಿ:ಜಯಮಂಗಲಿ ನದಿಗೆ ಬಿದ್ದು ಬಾಲಕ ಸಾವು…!

DISTRICT NEWS ತುಮಕೂರು

ಮುದ್ದೇನಹಳ್ಳಿ ಹತ್ತಿರ ಹರಿಯುತ್ತಿರುವ ಜಯ ಮಂಗಲಿನದಿಯ ಹತ್ತಿರ ದ್ವಿಚಕ್ರ ವಾಹನ ತೊಳೆಯಲು ಹೋಗಿ ನೀರು ಪಾಲಾದ ಬಾಲಕ.

IMG 20221007 WA0016

ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿ ಹತ್ತಿರ ಒಂದು ತಿಂಗಳಿಂದ ಹರಿಯುತ್ತಿರುವ ನದಿ ಹತ್ತಿರ ದ್ವಿಚಕ್ರ ವಾಹನ ತೊಳೆಯಲು ಹೋದ ಬಾಲಕ ಗ್ರಾಮದ ಶಂಕ್ರಪ್ಪನ ಮಗನಾಗಿದ್ದು ನಾಗಚೇತನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತನಿಗೆ ಸುಮಾರು 14 ವರ್ಷ ವಯಸ್ಸಾಗಿರುತ್ತದೆ ಶಾಲೆಗೆ ರಜೆ ಇದ್ದ ಕಾರಣ ದಿನಾಂಕ 7-10.2022ರಂದು ಬೆಳಿಗ್ಗೆಸುಮಾರು 9:30 ಸಮಯದಲ್ಲಿ ನೀರಿನ ರಬಸಕ್ಕೆ ಕೆಳಗಡೆ ಬಿದ್ದಿದ್ದಾನೆ. ಬಿದ್ದ ತಕ್ಷಣ ಕೋಗಿಕೊಂಡ ರು.ಗ್ರಾಮಸ್ಥರು ಬಾಲಕನನ್ನು ಮೇಲೆತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಹಿಂದೂಪುರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿರುತ್ತಾನೆ.

IMG 20221007 WA0010

ವಿಷಯ ತಿಳಿದ ತಕ್ಷಣ ಜಯ ಮಂಗಲಿ ನದಿಯ ಹತ್ತಿರ ತಾಲೂಕಿನ ತಹಶೀಲ್ದಾರ್ರಾದ ಟಿ ಜಿ ಸುರೇಶ ಆಚಾರ್ ಕೊಡಿಗೆನಹಳ್ಳಿ ಪೊಲೀಸ್ ಇಲಾಖೆ ಸಿಬ್ಬಂದಿ ಗ್ರಾಮ ಲೆಕ್ಕಾಧಿಕಾರಿಗಳಾದ ರವಿಕುಮಾರ್ ಸಿ ಚಿಕ್ಕದಾಳ್ವಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿ.ವೆಂಕಟೇಶ್ ರೆಡ್ಡಿ ಗ್ರಾಮ ಪಂಚಾಯತಿ ಸದಸ್ಯರುಗಳು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ನವೀನ್ ಕುಮಾರ್ ಬೇಟಿ ನೀಡಿ ತಂದೆ-ತಾಯಿಗಳಿಗೆ ಧೈರ್ಯ ತುಂಬಿ ಸಂತಾಪ ಸೂಚಿಸಿದರು..

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು