FB IMG 1677424452600

ಪಾವಗಡ: ತಾಲೂಕಿನ ಅಭಿವೃದ್ಧಿಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಂಬಲಿಸಿ…!

DISTRICT NEWS ತುಮಕೂರು

ತಾಲೂಕಿನ ಅಭಿವೃದ್ಧಿಗಾಗಿ ನಾಗೇಂದ್ರ ಕುಮಾರ್ ರನ್ನು ಗೆಲ್ಲಿಸಿ . ಗಾಲಿ ಜನಾರ್ದನ್ ರೆಡ್ಡಿ.
ಪಾವಗಡ : ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಕೊಡುಗೆ ಶೂನ್ಯ ವೆಂದು, ರಾಯಪ್ಪ (ತಿಮ್ಮ ರಾಯಪ್ಪ)ಮತ್ತು ರಮಣಪ್ಪ( ವೆಂಕಟರಮಣಪ್ಪ) ನನ್ನು ಶೀಘ್ರವೇ ಮನೆಗಳಿಗೆ ಕಳುಹಿಸಿಕೊಡಲಾಗುವುದೆಂದು, ಪಟ್ಟಣದ ಗುರುಭವನ ಮೈದಾನದಲ್ಲಿ ಭಾನುವಾರ ನಡೆದ ಬಹಿರಂಗ ಸಭೆ
ಉದ್ದೇಶಿಸಿ, ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸ್ಥಾಪಕ ಗಾಲಿ ಜನಾರ್ದನ್ ರೆಡ್ಡಿ ಮಾತನಾಡಿದರು,
ಹಾಲಿ ಶಾಸಕರಾದ ವೆಂಕಟರಮಣಪ್ಪ, ಮಾಜಿ ಶಾಸಕರಾದ ತಿಮ್ಮರಾಯಪ್ಪ ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದಗಳಿಂದಾಗಿ, ತಾಲೂಕು ಅಭಿವೃದ್ಧಿಯಾಗಿಲ್ಲವೆಂದರು.
ತಾಲೂಕಿನಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸಿದ್ದು, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಪಾವಗಡ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನೇರಳೇಕುಂಟೆ ನಾಗೇಂದ್ರ ಕುಮಾರ್ ಎಂದು ಘೋಷಣೆ ಮಾಡಿದರು.
ತಾಲೂಕಿನ ಜನರು ತಮ್ಮ ಪಕ್ಷಕ್ಕೆ ಆಶೀರ್ವದಿಸಬೇಕೆಂದು,
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ರೈತನಿಗೆ ಪ್ರತಿ ವರ್ಷ 15, 000ರೂ ಗಳನ್ನು ನೇರವಾಗಿ ರೈತನ ಖಾತೆಗೆ ಹಾಕಲಾಗುವುದೆಂದು,

ಪ್ರತಿ ಗ್ರಾಮಗಳಲ್ಲಿ ರೈತ ಭರವಸೆ ಕೇಂದ್ರಗಳನ್ನು, ಸ್ಥಾಪನೆ ಮಾಡಿ ರೈತರಿಗೆ ಅಗತ್ಯವಾದ ಉತ್ತಮ ಬೀಜ, ರಸಗೊಬ್ಬರಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದೆಂದರು.
ಮುಂದಿನ ದಿನಗಳಲ್ಲಿ ರೈತರ ಬಗ್ಗೆ ಇರುವಂತಹ ನಿಲುವುಗಳು ಬದಲಾವಣೆಯಾಗುತ್ತದೆ ಎಂದು, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮುಂದಾಗುವರೆಂದು ತಿಳಿಸಿದರು.
ತಾಲೂಕಿನಾದ್ಯಂತ 50 ಸಾವಿರಕ್ಕೂ ಹೆಚ್ಚಿನ ಯುವಕರು ಜೀವನ ನಿರ್ವಹಣೆಗಾಗಿ ವಲಸೆ ಹೋಗಿರುವುದು ದುರದೃಷ್ಟಕರ ಸಂಗತಿಯಾಗಿದೆ,
ಮುಂದಿನ ದಿನಗಳಲ್ಲಿ ಸರ್ಕಾರದಿಂದಾಗಲಿ, ಅಥವಾ ತನ್ನ ಸ್ನೇಹಿತರಿಂದ ಆಗಲಿ, ತಾಲೂಕಿನಲ್ಲಿ ವಿವಿಧ ಬಗೆಯ ಕಾರ್ಖಾನೆಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಯುವಕರಿಗೆ ನಿರುದ್ಯೋಗಿ ಭತ್ಯೆ , ತಾಲೂಕನ್ನು ಪ್ರವಾಸಿ ತಾಣವನ್ನಾಗಿ ಮಾಡೋದಾಗಿ ತಿಳಿಸಿದರು.
ಎಲ್ ಕೆ ಜಿ ಇಂದ ಪಿ.ಜಿವರೆಗೂ ಹಾಗೂ ಇಂಜಿನಿಯರಿಂಗ್, ಡಾಕ್ಟರ್, ಐ.ಎ.ಎಸ್ .ಐ.ಪಿ.ಎಸ್ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳ ತಾಯಂದಿರ ಖಾತೆಗಳಿಗೆ ವಿದ್ಯಾಭ್ಯಾಸಕ್ಕಾಗಿ ಹಣ ಹಾಕಲಾಗುವುದು ಎಂದು.
ಎಸ್ .ಸಿ , ಎಸ್ .ಟಿ ಜನಾಂಗಗಳ ಉನ್ನತಿಗಾಗಿ ಶ್ರಮಿಸಲಾಗುವುದೆಂದು,
ತಾಲೂಕಿನಲ್ಲಿ ಯಾವ ಕೆಲಸ ಆಗದಿದ್ದರೂ ಸ್ವತ ಹ ಮುಖ್ಯಮಂತ್ರಿ, ಮಂತ್ರಿಗಳನ್ನ ಕ್ಷೇತ್ರಕ್ಕೆ ಕರೆ ತಂದು ಕೆಲಸ ಮಾಡುವ ಸಾಮರ್ಥ್ಯ ತನಗಿದೆ ಎಂದರು.

FB IMG 1677424439238

ನಂತರ ನೇರಳೆಕುಂಟೆ ನಾಗೇಂದ್ರ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿಯ ಬದಲು, ದ್ವೇಷದ ರಾಜಕಾರಣ ನಡೆಯುತ್ತಿದೆ, ಒಬ್ಬ ಶಿಕ್ಷಕನಾಗಿ , ಸ್ಥಳೀಯ ವ್ಯಕ್ತಿಯಾಗಿ ತಾಲೂಕಿನಾದ್ಯಂತ ಇರುವ ಸಮಸ್ಯೆಗಳ ಬಗ್ಗೆ ತನಗೆ ಅರಿವಿದೆ ಎಂದರು.
ಈ ಸಭೆಗೆ ಬಂದಿರುವವರು ಸಂತೆಗೆ ಬಂದ ಜನ ಅಲ್ಲ, ಸ್ವಾಭಿಮಾನದಿಂದ ಬಂದ ಜನ,
ಸಭೆಯನ್ನು ವಿಫಲ ಮಾಡುವುದಕ್ಕೆ ಎಲ್ಲಿಲ್ಲದ ಹುನಾರ ನಡೆದಿದೆ, ಹಾಲಿ ಮತ್ತು ಮಾಜಿ ಶಾಸಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಪಾವಗಡದ ಬದಲಾವಣೆ ಗಾಗಿ ತನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಬಳ್ಳಾರಿಯ ಹಿರಿ ಯ ಮುಖಂಡ ಖುದ್ದು ಸಾಬ್, ಹನುಮಂತರಾಯಪ್ಪ, ಶಿವಪ್ಪ ,ಧನಂಜಯ್, ಶಂಕರ್ ರೆಡ್ಡಿ ಅಶ್ವತ್ ರೆಡ್ಡಿ ಕಿರಣ್ ಕುಮಾರ್, ವಂಶಿ, ಹಾಗೂ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

ವರದಿ:ಶ್ರೀನಿವಾಸಲು ಎ