IMG 20230220 WA0105

ವಿಧಾನ ಪರಿಷತ್ : ಮೊಬೈಲ್ ಸಿಮ್ ವಿತರಣೆ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಕ್ರಮ

Genaral STATE

ಮೊಬೈಲ್ ಸಿಮ್ ವಿತರಣೆ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ .

ಬೆಂಗಳೂರು, ಫೆಬ್ರವರಿ 20.

ರಾಜ್ಯದಲ್ಲಿ ಸೈಬರ್ ಅಪರಾಧ ಚುವಟಿಕೆ ಗಳಿಗೆ, ಕಡಿವಾಣ ಹಾಕಲು, ಎಲಾ ಸಾಧ್ಯವಾದ ಕ್ರಮಗಳನ್ನು, ಕ್ರಮ ಕೈಗೊಳ್ಳಲಾಗುತ್ತಿದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ, ಪ್ರಶ್ನೋತ್ತರ ಕಲಾಪದಲ್ಲಿ, ಬಿಜೆಪಿ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಯವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹತ್ತು ಹಲವು ಉಪಕ್ರಮ ಗಳನ್ನು ತೆಗೆದುಕೊಳ್ಳಲಾಗಿದೆ, ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಗಳ ದುರುಪಯೋಗ ಪಡಿಸಿಕೊಂಡು, ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳೂ ಹೆಚ್ಚುತ್ತಿದ್ದು, ಇದರ ವಿರುದ್ಧ, ಇಲಾಖೆಯಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ, ಎಂದು ಹೇಳಿದರು.

ರಾಜ್ಯದಲ್ಲಿ, ಸೈಬರ್ ಅಪರಾಧಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು, ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ನುರಿತ ಸಿಬ್ಬಂದಿಗಳಿಗೆ, ವಿಶೇಷ ತರಭೇತಿ ನೀಡಲಾಗುತ್ತಿದೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಗಳ ಸ್ಥಾಪನೆ ಸೇರಿದಂತೆ, ಮೊಬೈಲ್ ಫೋನ್ ಗೆಂದು ನೀಡಲಾಗುವ, ಸಿಮ್ ವಿತರಣೆಯ ಬಗ್ಗೆ ಕಠಿಣ ನಿಯಮ ಗಳನ್ನೂ ವಿಧಿಸಲಾಗಿದೆ.

ಮೊಬೈಲ್ ಸೇವೆ ಗಳನ್ನು ನೀಡುವ ಎಲ್ಲಾ ದೂರ ಸಂಪರ್ಕ ಸಂಸ್ಥೆ ಗಳಿಗೆ, ಸಿಮ್ ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ, ನಿಯಮಗಳನ್ನು ಕಟ್ಟನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶಿಸಲಾಗಿದೆ, ಎಂದೂ ಸಚಿವರು ಹೇಳಿದರು.
Eom